ಆಕಸ್ಮಿಕ ಬೆಂಕಿ  ; ಗುಡಿಸಲಿನಲ್ಲಿ ವಾಸವಿದ್ದ ವೃದ್ದ ದಂಪತಿ ಸಜೀವ ಬಲಿ 

26-02-23 04:59 pm       HK News Desk   ಕರ್ನಾಟಕ

ಜಮೀನಿನಲ್ಲಿದ್ದ ಗುಡಿಸಲಿನಲ್ಲಿ ವಾಸವಿದ್ದ ವೃದ್ದ ದಂಪತಿ ಆಕಸ್ಮಿಕ ಅಗ್ನಿ ದುರಂತದಲ್ಲಿ ಸಜೀವ ದಹನವಾಗಿರುವ ದುರ್ಘಟನೆ ವಿಜಯಪುರ ಜಿಲ್ಲೆಯಲ್ಲಿ ಸಂಭವಿಸಿದೆ‌.

ವಿಜಯಪುರ, ಫೆ.26: ಜಮೀನಿನಲ್ಲಿದ್ದ ಗುಡಿಸಲಿನಲ್ಲಿ ವಾಸವಿದ್ದ ವೃದ್ದ ದಂಪತಿ ಆಕಸ್ಮಿಕ ಅಗ್ನಿ ದುರಂತದಲ್ಲಿ ಸಜೀವ ದಹನವಾಗಿರುವ ದುರ್ಘಟನೆ ವಿಜಯಪುರ ಜಿಲ್ಲೆಯಲ್ಲಿ ಸಂಭವಿಸಿದೆ‌.

ಚಡಚಣ ಪಟ್ಟಣದ ಹೊರ ವಲಯದ ಜಮೀನಿನ ಗುಡಿಸಲಿನಲ್ಲಿ ವಾಸವಿದ್ದ 82 ವರ್ಷದ ಮಕರೀಂಸಾಬ್ ಟಪಾಲ ಹಾಗೂ 72 ವರ್ಷದ ಸಾಜನಬೀ ಟಪಾಲ್ ಅಗ್ನಿ ದುರಂತದಲ್ಲಿ ಸಜೀವ ದಹನವಾದ ದುರ್ದೈವಿಗಳು.

ರಸ್ತೆಯಲ್ಲಿನ ತಮ್ಮ ಜಮೀನಿನಲ್ಲಿ ಈ ವೃದ್ಧ ದಂಪತಿ ಗುಡಿಸಲು ಹಾಕಿಕೊಂಡು ವಾಸಿಸುತ್ತಿದ್ದರು. ಶನಿವಾರ ವೃದ್ದ ದಂಪತಿ ಮಲಗಿದ್ದಾಗ ತಡರಾತ್ರಿ ಆಕಸ್ಮಿಕವಾಗಿ ಗುಡಿಸಲಿಗೆ ಬೆಂಕಿ ಹೊತ್ತಿಕೊಂಡಿದ್ದು, ಬೇಸಿಗೆಯ ಬಿಸಿಲ ಧಗೆ ಹೆಚ್ಚಿರುವ ಕಾರಣ ಗುಡಿಸಲಿಗೆ ಹೊತ್ತಿದ ಬೆಂಕಿ ಬೇಗನೇ ಇಡೀ ಗುಡಿಸಲು ಆವರಿಸಿದೆ ಎನ್ನಲಾಗಿದೆ. ಪರಿಣಾಮ ವೃದ್ಧ ದಂಪತಿ ಸಜೀವ ದಹನವಾಗಿದ್ದಾರೆ.

ಭಾನುವಾರ ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿದ್ದು, ಸ್ಥಳಕ್ಕೆ ಧಾವಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

An accident took place in a farm on the outskirts of Chadchana in Vijaypura district where an elderly couple was burnt alive after an accidental fire broke out in their hut. Karimsab Tapal (82), Sajanbee Tapal (72) are deceased elderly people. On the other hand, a cylinder exploded in Yadagiri and a hut was gutted.