ಶಾಸಕರ ಮನೆ ಬಳಿಕ ಪಕ್ಕದ್ಮನೆಗೂ ಲೋಕಾಯುಕ್ತ ದಾಳಿ ; ವಿರೂಪಾಕ್ಷ ಖೇಣಿ ಮನೆಯಲ್ಲಿ ಪರಿಶೀಲನೆ 

03-03-23 09:13 pm       HK News Desk   ಕರ್ನಾಟಕ

ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಮಾಡಾಳ್ ಮನೆಯಲ್ಲಿ ಶೋಧ ಕಾರ್ಯ ಮುಗಿಸಿದ ಲೋಕಾಯುಕ್ತ ಅಧಿಕಾರಿಗಳು ಇದೀಗ ಪಕ್ಕದ ಮನೆಗೂ ಲಗ್ಗೆ ಇಟ್ಟಿದ್ದಾರೆ.

ದಾವಣಗೆರೆ, ಮಾ.3 : ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಮಾಡಾಳ್ ಮನೆಯಲ್ಲಿ ಶೋಧ ಕಾರ್ಯ ಮುಗಿಸಿದ ಲೋಕಾಯುಕ್ತ ಅಧಿಕಾರಿಗಳು ಇದೀಗ ಪಕ್ಕದ ಮನೆಗೂ ಲಗ್ಗೆ ಇಟ್ಟಿದ್ದಾರೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚನ್ನೇಶಪುರದಲ್ಲಿ ವಿರೂಪಾಕ್ಷಪ್ಪ ಮಾಡಾಳ್ ನಿವಾಸದಲ್ಲಿ ಶೋಧ ಕಾರ್ಯ ನಡೆಸಿದ ಬಳಿಕ ಅವರ ಪಕ್ಕದ ಮನೆ ವಿರೂಪಾಕ್ಷಪ್ಪ ಖೇಣಿ ಮನೆಗೆ ಲೋಕಾಯುಕ್ತ ಅಧಿಕಾರಿಗಳು ಲಗ್ಗೆ ಇಟ್ಟಿದ್ದು, ಅಡಕೆ ದಾಸ್ತಾನು ಗೋಡೌನ್ ನಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ. 

ದಾಳಿ ವೇಳೆ ಶಾಸಕ ವಿರೂಪಾಕ್ಷಪ್ಪ ಮಾಡಾಳ್ ಮನೆಯಲ್ಲೂ ಕಂತೆ ಕಂತೆ ನೋಟು, ಚಿನ್ನಾಭರಣ ಪತ್ತೆಯಾಗಿದೆ. ಲೋಕಾಯುಕ್ತ ಅಧಿಕಾರಿಗಳು ಹಣದ ಗಂಟು ಎಣಿಸುತ್ತಿದ್ದು, ಪ್ರತಿ ಕಪಾಟನ್ನೂ ಲೋಕಾಯುಕ್ತ ಪೋಲೀಸರು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.‌ ಶಾಸಕರ ಮನೆಯ ಸಿಸಿಟಿಟಿವಿಯನ್ನ ಕೂಡ ಪರಿಶೀಲಿಸುತ್ತಿದ್ದಾರೆ.

ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿರುವ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಕಚೇರಿಯಲ್ಲಿ ಗುತ್ತಿಗೆದಾರನಿಂದ ಟೆಂಡರ್ ಪಡೆಯೋದಕ್ಕೆ ಲಂಚ ಸ್ಪೀಕರಿಸುತ್ತಿದ್ದ ಶಾಸಕರ ಪುತ್ರ ಪ್ರಶಾಂತ್ ನನ್ನು ಲೋಕಾಯುಕ್ತ ಅಧಿಕಾರಿಗಳು 40 ಲಕ್ಷ ಹಣದೊಂದಿಗೆ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದರು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೇ, ಕೆ ಎಸ್ ಡಿ ಎಲ್ ಅಧ್ಯಕ್ಷ ಸ್ಥಾನಕ್ಕೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ರಾಜೀನಾಮೆ ನೀಡಿದ್ದು ಬಂಧನ ಭೀತಿಯಿಂದ ನಾಪತ್ತೆಯಾಗಿದ್ದಾರೆ.

Lokayukta officials raid BJP MLA Madal Virupakshappa neighbours house in Davanagere. The raid came on the back of another lokayukta raid in which the MLA's son, Prashanth Madal, the Chief Accountant of the Bangalore Water Supply and Sewerage Board (BWSSB), was caught red-handed accepting a Rs 40 lakh bribe in Bengaluru over a government contract.