ಬ್ರೇಕಿಂಗ್ ನ್ಯೂಸ್
10-03-23 03:13 pm Bengaluru Correspondent ಕರ್ನಾಟಕ
ಬೆಂಗಳೂರು, ಮಾ.10: ವದಂತಿ, ಗೊಂದಲದ ಬಳಿಕ ಕಡೆಗೂ ಸುಮಲತಾ ಅಂಬರೀಶ್ ತನ್ನ ಮುಂದಿನ ನಡೆಯನ್ನು ಘೋಷಿಸಿದ್ದಾರೆ. ಮಂಡ್ಯದ ಅಭಿವೃದ್ಧಿಗಾಗಿ ಮೋದಿ ಅವರಿಗೆ ನನ್ನ ಬೆಂಬಲ ಎನ್ನುವ ಮೂಲಕ ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ.
ತಾಂತ್ರಿಕ ಕಾರಣಗಳಿಂದಾಗಿ ಪಕ್ಷೇತರ ಗೆದ್ದಿದ್ದ ಸುಮಲತಾ ಅಂಬರೀಶ್ ಬಿಜೆಪಿಗೆ ಸೇರ್ಪಡೆಯಾಗೋದು ಸದ್ಯಕ್ಕೆ ಅನುಮಾನ ಎಂದು ಹೇಳಲಾಗಿತ್ತು. ಅದೇ ರೀತಿಯಲ್ಲಿ ಮಹತ್ವದ ಸುದ್ದಿಗೋಷ್ಟಿ ಕರೆದು ತನ್ನ ಬೆಂಬಲ ಬಿಜೆಪಿಗೆ ಎಂದು ಘೋಷಣೆ ಮಾಡಿದ್ದಾರೆ. ಆದರೆ ಸದ್ಯಕ್ಕೆ ಬಿಜೆಪಿ ಸೇರ್ಪಡೆಯಾಗಲ್ಲ ಎಂದು ಹೇಳಿದ್ದಾರೆ. ಮಂಡ್ಯ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತನಾಡಿದ ಅಂಬಿ ಪತ್ನಿ, ತಾನು ಸ್ವಾರ್ಥಿಯಾಗಿದ್ದರೆ ಅವಕಾಶವನ್ನು ಬಳಸಿ ತನ್ನ ಲಾಭಕ್ಕಾಗಿ ಕೆಲಸ ಮಾಡಬಹುದಿತ್ತು. ಗೆದ್ದ ಆರು ತಿಂಗಳಲ್ಲಿ ಬಿಜೆಪಿಗೆ ಹೋಗಬಹುದಿತ್ತು. ಪಕ್ಷೇತರ ನೆಲೆಯಲ್ಲಿ ನನಗೆ ಮತ ನೀಡಿದ್ದಾರೆ. ನನ್ನ ಮಂಡ್ಯದ ಅಭಿವೃದ್ಧಿಯೇ ನನಗೆ ಮುಖ್ಯವಾಗಿತ್ತು. ಜಿಲ್ಲೆಯ ಅಭಿವೃದ್ಧಿಗಾಗಿ ಮೋದಿ ನೇತೃತ್ವದ ಬಿಜೆಪಿಗೆ ಬೆಂಬಲ ಘೋಷಿಸುತ್ತಿದ್ದೇನೆ ಎಂದಿದ್ದಾರೆ.
ಇದೇ ವೇಳೆ, ಪರೋಕ್ಷವಾಗಿ ಎಚ್ಡಿಕೆ, ಕುಟುಂಬ ರಾಜಕಾರಣದ ಆಕ್ರೋಶ ವ್ಯಕ್ತಪಡಿಸಿದರು. ಚುನಾವಣೆ ಸಂದರ್ಭದಲ್ಲಿ ನನ್ನ ವಿರುದ್ಧ ಕೆಲವರು ಅಪಪ್ರಚಾರ ಮಾಡಿದರು. ಆದರೆ ಜನ ನನ್ನ ಕೈಬಿಡಲಿಲ್ಲ. ಅಂಬರೀಶ್ ಪತ್ನಿಯೆಂದು ನನ್ನನ್ನು ಸ್ವೀಕಾರ ಮಾಡಿದರು. ನಾನು ರಾಜಕೀಯ ಬೇಕಾದರೆ ಬಿಡ್ತೀನಿ, ಸ್ವಾಭಿಮಾನ ಬಿಡಲ್ಲ ಎಂದು ಸುಮಲತಾ ಹೇಳಿದ್ದಾರೆ. ಮಗ ಅಭಿಷೇಕ್ ರಾಜಕೀಯಕ್ಕೆ ಎಂಟ್ರಿ ನೀಡುತ್ತಾರೆಯೇ ಎಂಬ ಪ್ರಶ್ನೆಗೆ, ತಾನು ರಾಜಕೀಯದಲ್ಲಿ ಇರುವವರೆಗೆ ಯಾವುದೇ ಕಾರಣಕ್ಕೂ ನನ್ನ ಮಗ ಅಭಿಷೇಕ್ ಈ ಕ್ಷೇತ್ರಕ್ಕೆ ಬರುವುದಿಲ್ಲ ಎಂದಿದ್ದಾರೆ. ಕುಟುಂಬ ರಾಜಕಾರಣ ನಾನು ಮಾಡೋದಿಲ್ಲ. ಚಾಮುಂಡಿ ತಾಯಿ ಆಣೆಯಾಗಿ ಹೇಳ್ತೀನಿ, ಮಗನಿಗೆ ಟಿಕೆಟ್ ಬೇಕೆಂದು ಕೇಳಿಲ್ಲ. ನಾನು ರಾಜಕಾರಣದಲ್ಲಿ ಇರೋ ವರೆಗೂ ಮಗನನ್ನು ರಾಜಕೀಯಕ್ಕೆ ತರೋದಿಲ್ಲ ಎನ್ನುವ ಮೂಲಕ ತನ್ನ ವಿರುದ್ಧ ಕಳೆದ ಚುನಾವಣೆಯಲ್ಲಿ ತೊಡೆ ತಟ್ಟಿದ್ದ ಜೆಡಿಎಸ್ ವಿರುದ್ಧ ಟಾಂಗ್ ನೀಡಿದರು
Actor and Member of Parliament Sumalatha Ambareesh announced that she will extend her support to the Bharatiya Janata Party (BJP) in the upcoming assembly elections. Sumalatha had called for a press meet at her residence in Mandya ahead of Prime Minister Narendra Modi’s visit to the district on March 12. Chief Minister Basavaraj Bommai had earlier said that discussions were held with Sumalatha to induct her into BJP and that the process was underway. She maintained that her decision was taken keeping the development of Mandya district in mind.
01-05-24 09:35 pm
HK News Desk
Raju Kage, PM Modi: ಮೋದಿ ಸತ್ತರೆ ಮುಂದೆ ಯಾರೂ ಪ್...
01-05-24 07:12 pm
ಸತ್ಯ ಆದಷ್ಟು ಬೇಗ ಹೊರ ಬರಲಿದೆ ; ಜಾಲತಾಣದಲ್ಲಿ ಪ್ರಜ...
01-05-24 06:29 pm
ಕೂಲ್ ನಗರ ಬೆಂಗಳೂರು ಈಗ 'ಬೆಂದ'ಕಾಳೂರು ! ತಾಪಮಾನದಲ್...
01-05-24 05:34 pm
Prajwal Revanna sex case, Hassan, prayers: ಪ್...
01-05-24 03:00 pm
01-05-24 10:25 pm
HK NEWS
Salman Khan Shootout: ನಟ ಸಲ್ಮಾನ್ ಖಾನ್ ಮನೆ ಮೇಲ...
01-05-24 03:57 pm
Arvind Kejriwals, Supreme Court: ಬದುಕು ಮತ್ತು...
30-04-24 11:02 pm
ಭಾರತ ಜಗತ್ತಿನ ಸೂಪರ್ ಪವರ್ ಆಗಲು ಹೊರಟಿದ್ದರೆ, ಪಾ...
30-04-24 06:20 pm
Prajwal Revanna Hassan sex, Amit Shah: ರಾಷ್ಟ್...
30-04-24 05:27 pm
01-05-24 08:55 pm
Mangalore Correspondent
Hot sun heat, Mangalore temperature; ಕರಾವಳಿಯಲ...
01-05-24 11:43 am
Mangalore Super gold and diamound showroom, T...
30-04-24 08:04 pm
Prajwal Revanna sex scam, ACP Dhanya Nayak,...
30-04-24 01:05 pm
Mangalore crime, sexual Harrasment: ಮದುವೆ ಸಮಾ...
29-04-24 10:28 pm
01-05-24 10:18 pm
Mangaluru Correspondent
Mangalore crime, Court: ಮೆಲ್ಕಾರ್ ಬಳಿ ಕೋಮು ದ್ವ...
01-05-24 06:44 pm
Cyber Fraud, Online Crime: ಹೀಗೂ ಮೋಸ ಮಾಡ್ತಾರೆ,...
30-04-24 10:16 pm
Bangalore Crime, Fraud, House Rent: ಫ್ಲ್ಯಾಟ್...
29-04-24 11:50 am
Drugs case, Gujarat coast: ಬೋಟ್ ನಲ್ಲಿ ಸಿಕ್ತು...
28-04-24 09:46 pm