ಬ್ರೇಕಿಂಗ್ ನ್ಯೂಸ್
10-03-23 03:26 pm Bengaluru Correspondent ಕರ್ನಾಟಕ
ಬೆಂಗಳೂರು, ಮಾ.10: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಮಿತಿಯನ್ನು ಮಾಡಿದ್ದು ಅಧ್ಯಕ್ಷರಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನೇ ಮಾಡಿದೆ. ಅಧ್ಯಕ್ಷರಾಗುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದ ಯಡಿಯೂರಪ್ಪ ಕೇವಲ ಸದಸ್ಯ ಸ್ಥಾನಕ್ಕೆ ಸೀಮಿತರಾಗಿದ್ದಾರೆ.
ಇದೇ ವೇಳೆ, ಚುನಾವಣಾ ನಿರ್ವಹಣಾ ಸಮಿತಿ ಘೋಷಿಸಲಾಗಿದ್ದು, ಅಚ್ಚರಿಯೆಂಬಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಸಂಚಾಲಕಿ ಹುದ್ದೆಗೆ ನೇಮಕ ಮಾಡಲಾಗಿದೆ. ಆಮೂಲಕ ಶೋಭಾ ಕರಂದ್ಲಾಜೆ ರಾಜ್ಯ ರಾಜಕಾರಣಕ್ಕೆ ಮರು ಎಂಟ್ರಿಯಾಗಲಿದ್ದಾರೆ ಎಂಬ ಮಾತು ಕೇಳಿಬಂದಿದೆ.
ಪ್ರಚಾರ ಸಮಿತಿಗೆ 25 ಸದಸ್ಯರನ್ನು ನೇಮಕ ಮಾಡಲಾಗಿದೆ. ನಿರ್ವಹಣಾ ಸಮಿತಿಯಲ್ಲಿ 14 ಸದಸ್ಯರು ಇರಲಿದ್ದಾರೆ. ಕೆಲವರನ್ನು ಎರಡೂ ಸಮಿತಿಯಲ್ಲಿ ಸೇರಿಸಲಾಗಿದೆ. ಬಿಎಸ್ವೈ ಅವರ ಆಪ್ತೆಯಾಗಿರುವ ಶೋಭಾ ಅವರನ್ನು ಚುನಾವಣಾ ನಿರ್ವಹಣಾ ಸಮಿತಿಯ ಸಂಚಾಲಕಿ ಹುದ್ದೆಗೆ ತರುವ ಮೂಲಕ ಸಂತೈಸುವ ಕೆಲಸ ಮಾಡಿದ್ದಾರೆ. ಮೊನ್ನೆ ಶಿವಮೊಗ್ಗಕ್ಕೆ ಬಂದಿದ್ದ ಪ್ರಧಾನಿ ಮೋದಿ, ಬಿಎಸ್ವೈ ಅವರ ಕೈ ಹಿಡಿದುಕೊಂಡು ಹೋಗಿದ್ದು, ಯಡಿಯೂರಪ್ಪ ಅವರೇ ನಮ್ಮ ನಾಯಕ ಎಂದು ಹೇಳಿದ್ದು ಪ್ರಚಾರ ಸಮಿತಿಗೆ ಯಡಿಯೂರಪ್ಪ ಅವರನ್ನೇ ಅಧ್ಯಕ್ಷರನ್ನಾಗಿಸುತ್ತಾರೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿ ಮೂಡಿತ್ತು. ಲಿಂಗಾಯತರನ್ನು ಸಂತೈಸಲು ಸಿಎಂ ಬೊಮ್ಮಾಯಿ ಅವರನ್ನೇ ಅಧ್ಯಕ್ಷರನ್ನಾಗಿಸಿ, ಯಡಿಯೂರಪ್ಪ ಅವರನ್ನು ಜೊತೆಗೆ ಕೂರಿಸಿ ಸರಿದೂಗಿಸುವ ಕೆಲಸ ಮಾಡಲಾಗಿದೆ.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಚುನಾವಣಾ ನಿರ್ವಹಣಾ ಸಮಿತಿಗೆ ಸಂಚಾಲಕಿ ಮಾಡುವ ಮೂಲಕ ಶೋಭಕ್ಕೆ ಪೂರ್ತಿಯಾಗಿ ರಾಜ್ಯ ರಾಜಕಾರಣಕ್ಕೆ ಮರಳುವುದು ಖಚಿತವಾಗಿದೆ. ಕಳೆದ ಬಾರಿ ಸಿಎಂ ಬದಲಾವಣೆಯ ಕೂಗು ಕೇಳಿಬಂದಿದ್ದಾಗ ಶೋಭಾ ಹೆಸರು ಮುಂಚೂಣಿಯಲ್ಲಿ ಕೇಳಿಬಂದಿತ್ತು. ಶೋಭಾ ಅವರು ಸಿಎಂ ಆಗಲಿದ್ದಾರೆ ಎಂದೂ ಹೇಳಲಾಗಿತ್ತು. ಸಿಟಿ ರವಿಯ ಸ್ಪೀಡ್ ಹೆಚ್ಚಿದೆ ಅನ್ನುವ ಕಾರಣಕ್ಕೆ ಆರೆಸ್ಸೆಸ್ ಆಯ್ಕೆ ಗೌಡ ಜನಾಂಗದ ನಾಯಕಿ ಶೋಭಾ ಅನ್ನುವುದಿತ್ತು. ಇದೀಗ ಚುನಾವಣೆ ಹೊತ್ತಿಗೆ ಶೋಭಕ್ಕನಿಗೆ ನಿರ್ವಹಣಾ ಸಮಿತಿಯಲ್ಲಿ ಸ್ಥಾನ ನೀಡಿರುವುದು ಮತ್ತೆ ವಿಧಾನಸಭೆಗೆ ಸ್ಪರ್ಧಿಸಲಿದ್ದಾರೆಯೇ ಎಂಬ ಅನುಮಾನ ಮೂಡಿದೆ
While former Karnataka Chief Minister B S Yediyurappa was named in the BJP’s Karnataka election committee on Friday, his long-time confidante and Union Minister Shobha Karandlaje is set to head the party’s election management committee.
01-05-24 09:35 pm
HK News Desk
Raju Kage, PM Modi: ಮೋದಿ ಸತ್ತರೆ ಮುಂದೆ ಯಾರೂ ಪ್...
01-05-24 07:12 pm
ಸತ್ಯ ಆದಷ್ಟು ಬೇಗ ಹೊರ ಬರಲಿದೆ ; ಜಾಲತಾಣದಲ್ಲಿ ಪ್ರಜ...
01-05-24 06:29 pm
ಕೂಲ್ ನಗರ ಬೆಂಗಳೂರು ಈಗ 'ಬೆಂದ'ಕಾಳೂರು ! ತಾಪಮಾನದಲ್...
01-05-24 05:34 pm
Prajwal Revanna sex case, Hassan, prayers: ಪ್...
01-05-24 03:00 pm
01-05-24 10:25 pm
HK NEWS
Salman Khan Shootout: ನಟ ಸಲ್ಮಾನ್ ಖಾನ್ ಮನೆ ಮೇಲ...
01-05-24 03:57 pm
Arvind Kejriwals, Supreme Court: ಬದುಕು ಮತ್ತು...
30-04-24 11:02 pm
ಭಾರತ ಜಗತ್ತಿನ ಸೂಪರ್ ಪವರ್ ಆಗಲು ಹೊರಟಿದ್ದರೆ, ಪಾ...
30-04-24 06:20 pm
Prajwal Revanna Hassan sex, Amit Shah: ರಾಷ್ಟ್...
30-04-24 05:27 pm
01-05-24 08:55 pm
Mangalore Correspondent
Hot sun heat, Mangalore temperature; ಕರಾವಳಿಯಲ...
01-05-24 11:43 am
Mangalore Super gold and diamound showroom, T...
30-04-24 08:04 pm
Prajwal Revanna sex scam, ACP Dhanya Nayak,...
30-04-24 01:05 pm
Mangalore crime, sexual Harrasment: ಮದುವೆ ಸಮಾ...
29-04-24 10:28 pm
01-05-24 10:18 pm
Mangaluru Correspondent
Mangalore crime, Court: ಮೆಲ್ಕಾರ್ ಬಳಿ ಕೋಮು ದ್ವ...
01-05-24 06:44 pm
Cyber Fraud, Online Crime: ಹೀಗೂ ಮೋಸ ಮಾಡ್ತಾರೆ,...
30-04-24 10:16 pm
Bangalore Crime, Fraud, House Rent: ಫ್ಲ್ಯಾಟ್...
29-04-24 11:50 am
Drugs case, Gujarat coast: ಬೋಟ್ ನಲ್ಲಿ ಸಿಕ್ತು...
28-04-24 09:46 pm