ಕಮಲ ಇಳಿಸಿ ತೆನೆ ಹೊತ್ತುಕೊಂಡ ಮಾಜಿ ಸಚಿವ ಎ.ಮಂಜು ; ಹಾಸನದಲ್ಲಿ ಬಿಜೆಪಿಗೆ ಹಿನ್ನಡೆ 

11-03-23 09:26 pm       HK News Desk   ಕರ್ನಾಟಕ

ಮಾಜಿ ಸಚಿವ ಎ. ಮಂಜು ಕಮಲ ಇಳಿಸಿ ಅಧಿಕೃತವಾಗಿ ತೆನೆ ಹೊತ್ತಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಮ್ಮುಖದಲ್ಲಿ ರಾಮನಗರದ ಹೆಚ್.ಡಿ.ಕುಮಾರಸ್ವಾಮಿ ಅವರ ತೋಟದ ಮನೆಯಲ್ಲಿ ಮಂಜು ಪಕ್ಷ ಸೇರ್ಪಡೆಯಾಗಿದ್ದಾರೆ. 

ಹಾಸನ, ಮಾ.11 : ಮಾಜಿ ಸಚಿವ ಎ. ಮಂಜು ಕಮಲ ಇಳಿಸಿ ಅಧಿಕೃತವಾಗಿ ತೆನೆ ಹೊತ್ತಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಮ್ಮುಖದಲ್ಲಿ ರಾಮನಗರದ ಹೆಚ್.ಡಿ.ಕುಮಾರಸ್ವಾಮಿ ಅವರ ತೋಟದ ಮನೆಯಲ್ಲಿ ಮಂಜು ಪಕ್ಷ ಸೇರ್ಪಡೆಯಾಗಿದ್ದಾರೆ. 

ಕಳೆದ ವಿಧಾನ ಪರಿಷತ್ ಚುನಾವಣೆ ಬಳಿಕ‌ ಮಂಜು ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದರು. ಆನಂತರ, ಕಾಂಗ್ರೆಸ್ ಟಿಕೆಟ್ ಗೆ ಪ್ರಯತ್ನ‌‌ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಅಚ್ಚರಿಯೆಂಬಂತೆ ಜೆಡಿಎಸ್ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಹಾಲಿ ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿಗೆ ಸೆಡ್ಡು ಹೊಡೆಯಲು ಎಚ್ಡಿ ಕುಮಾರಸ್ವಾಮಿ ಎ.ಮಂಜುಗೆ ಗಾಳ ಹಾಕಿ, ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. 

ಒಂದು ವರ್ಷದಿಂದ ಜೆಡಿಎಸ್ ನಿಂದ ಅಂತರ ಕಾಯ್ದುಕೊಂಡಿದ್ದ ಶಾಸಕ ಎ.ಟಿ.ರಾಮಸ್ವಾಮಿಗೆ ಪಕ್ಷದಿಂದ ಗೇಟ್ ಪಾಸ್ ನೀಡಲಾಗಿದೆ. ರಾಮಸ್ವಾಮಿ ಕಾಂಗ್ರೆಸ್ ನಿಂದ ಸ್ಪರ್ಧೆಗಿಳಿಯುವ ಸಾಧ್ಯತೆಯಿದೆ. ಅರಕಲಗೂಡು ಮಂಜು ಜೆಡಿಎಸ್ ಸೇರ್ಪಡೆಯಿಂದ ಹಾಸನದಲ್ಲಿ ಬಿಜೆಪಿಗೆ ಮತ್ತಷ್ಟು ಹಿನ್ನಡೆಯಾಗಿದೆ.

Former Minister A Manju joins JDS, quits BJP party, he will be contesting from Arkalgud. Mr. Manju, who was Minister for Animal Husbandry in the Siddaramaiah-led Congress government, lost the election in 2018. He joined the BJP and ran for the Hassan Lok Sabha seat in 2019, but was defeated by JD(S) candidate Prajwal Revanna. Following differences within the BJP, he left the party. Now, he is joining the JD(S). Mr. Manju now holds the record for contesting three elections from three different parties in five years.