ಬ್ರೇಕಿಂಗ್ ನ್ಯೂಸ್
17-03-23 01:50 pm HK News Desk ಕರ್ನಾಟಕ
ಮೈಸೂರು, ಮಾ.17 : ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ದುಬಾರಿ ಟೋಲ್ ಸಂಗ್ರಹ ವಿರೋಧಿಸಿ ಬಿಜೆಪಿ ಸರ್ಕಾರದ ವಿರುದ್ಧ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಬೀದಿಗಿಳಿದಿದ್ದು ರೈತರ ಜೊತೆಗೆ ಹೋರಾಟಕ್ಕೆ ಧುಮುಕಿದ್ದಾರೆ.
ಮೈಸೂರಿನ ಕೆಂಪೇಗೌಡ ವೃತ್ತದಲ್ಲಿ ಶಾಂತಿಯುತ ಪ್ರತಿಭಟನೆ ನಡೆಯುತ್ತಿದ್ದು ನೂರಾರು ಜನ ಪಾಲ್ಗೊಂಡಿದ್ದಾರೆ. ದುಬಾರಿ ಟೋಲ್ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಎಂಎಲ್ಸಿ ವಿಶ್ವನಾಥ್ ಸಾಥ್ ನೀಡಿದ್ದಾರೆ. ಹೆದ್ದಾರಿ ಪಕ್ಕ ಕುಳಿತು ಶಾಂತಿಯುತ ಪ್ರತಿಭಟನೆಗೆ ಕೈಜೋಡಿಸಿದ್ದಾರೆ. ಕೈಗೆ ಕಪ್ಪು ಪಟ್ಟಿ ಧರಿಸಿ, ಘೋಷಣಾ ಫಲಕಗಳನ್ನು ಹಿಡಿದು ಅವರ ಜೊತೆಗೆ ಬೆಂಬಲಿಗರು ಕುಳಿತುಕೊಂಡಿದ್ದಾರೆ.
ದಶಪಥ ಎಕ್ಸ್ಪ್ರೆಸ್ ಹೈವೇ ಕಾಮಗಾರಿ ಪೂರ್ಣಗೊಳ್ಳದೆ ಟೋಲ್ ಸಂಗ್ರಹ ಮಾಡಬಾರದು ಎಂದು ರೈತರು, ಸ್ಥಳೀಯರು ಆಕ್ಷೇಪ ತೆಗೆದಿದ್ದಾರೆ. ಕಾಂಗ್ರೆಸ್, ಎಪಿಪಿ, ಜೆಡಿಎಸ್, ಕನ್ನಡ ಪರ ಹೋರಾಟಗಾರರು, ರೈತ ಸಂಘದ ಮುಖಂಡರು ಭಾಗಿಯಾಗಿದ್ದಾರೆ.
ಯಾರೂ ಕೈಯಿಂದ ಹಣ ಹಾಕಿಲ್ಲ, ಜನರ ದುಡ್ಡಲ್ಲಿ ರಸ್ತೆ ಮಾಡಿದ್ದಾರೆ
ಮೈಸೂರು - ಬೆಂಗಳೂರು ದಶಪಥ ಹೆದ್ದಾರಿಯ ಟೋಲ್ ಸಂಗ್ರಹ ವಿರೋಧಿಸಿ ಮೈಸೂರಿನ ಮಣಿಪಾಲ್ ಆಸ್ಪತ್ರೆಯ ರಿಂಗ್ ರಸ್ತೆಯಲ್ಲೂ ಪ್ರತಿಭಟನೆ ನಡೆದಿದೆ. ದಶಪಥ ರಸ್ತೆ ಇನ್ನೂ ಸರಿಯಾಗಿ ಆಗಿಲ್ಲ. ಪರಿಪೂರ್ಣವಾಗಿ ರಸ್ತೆ ಸಂಚಾರಕ್ಕೆ ಯೋಗ್ಯವಾದ ನಂತರ ಟೋಲ್ ಸಂಗ್ರಹಿಸಬೇಕು. ಯಾವ ವ್ಯಕ್ತಿಯೂ ಸಹ ತಮ್ಮ ಕೈನಿಂದ ಏನು ದುಡ್ಡು ತಂದು ಹಾಕಿಲ್ಲ. ಇದು ಸಾರ್ವಜನಿಕರ ಮತ್ತು ಮತದಾರರ ಹಕ್ಕು ಮತ್ತು ಅವರ ಹಣ. ಎಷ್ಟೋ ಜನರ ಜಮೀನನ್ನ ಖರೀದಿಸಿ ಈ ದಶಪಥ ರಸ್ತೆಯನ್ನು ಮಾಡಿದ್ದಾರೆ. ಇದರಿಂದ ರೈತ ತನ್ನ ಸಂಪಾದನೆಯನ್ನು ಕಳೆದುಕೊಂಡಿದ್ದಾನೆ, ಅನ್ನ ಕಳೆದುಕೊಂಡಿದ್ದಾನೆ. ಈ ನಿಟ್ಟಿನಲ್ಲಿ ಜನರ ಪರವಾಗಿ ನಾವು ಮಾತನಾಡಬೇಕೆ ಹೊರತು ವಸೂಲಿ ಮಾಡುವುದು ತಪ್ಪು ಎಂದು ರೈತ ಮುಖಂಡ ಬಡಗಲಪುರ ನಾಗೇಂದ್ರ ಹೇಳಿಕೆ ನೀಡಿದ್ದಾರೆ.
Bjp MLC H.D. Deve Gowda has lashed out at the BJP government over the high toll collection on the Bengaluru-Mysuru Highway. Vishwanath has taken to the streets and joined the farmers in their struggle. Hundreds of people participated in a peaceful protest at Kempegowda Circle in Mysuru. MLC Vishwanath has joined the farmers' protest against the high toll. They sat on the side of the highway and joined the peaceful protest.
16-07-25 09:36 pm
HK News Desk
ಕೋವಿಡ್ ಮುಗಿದರೂ, ಅದರ ಪರಿಣಾಮ ನಿಂತಿಲ್ಲ..! ನರಮಂಡಲ...
16-07-25 07:05 pm
BESCOM, Cybercrime, Digital Arrest: ಡಿಜಿಟಲ್ ಅ...
16-07-25 03:58 pm
ಕಾವೇರಿ ಆರತಿ ದುಡ್ಡು ಹೊಡೆಯುವ ಸ್ಕೀಮ್, ನೂರು ಕೋಟಿ...
16-07-25 11:47 am
35 IPS Officers Transfer: ರಾಜ್ಯದಲ್ಲಿ 35 ಐಪಿಎಸ...
15-07-25 01:32 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
16-07-25 10:52 pm
Mangalore Correspondent
ಕೆಂಪು ಕಲ್ಲು, ಮರಳು ಸಮಸ್ಯೆಗೆ ಕಾಂಗ್ರೆಸ್ ಸರ್ಕಾರದ...
16-07-25 01:01 pm
Dharmasthala Missing case, Ananya Bhat, Compl...
15-07-25 10:40 pm
Udupi Rain, Fishermen Missing: ಉಡುಪಿ ; ಭಾರೀ ಗ...
15-07-25 10:13 pm
Kmc Manipal Hospital, Mangalore, Health Card:...
15-07-25 07:19 pm
16-07-25 11:04 pm
Mangalore Correspondent
Mangalore Crime, Konaje Murder: ಒಂಟಿ ಮಹಿಳೆಯ ಅ...
16-07-25 09:48 pm
Sexual Harassment Odisha News; ಪ್ರಾಧ್ಯಾಪಕನಿಂದ...
16-07-25 04:37 pm
Kavoor police constable arrest, Mangalore: ದೂ...
16-07-25 11:42 am
ಸುಂದರವಾಗಿದ್ದಕ್ಕೆ ತಲೆ ಬೋಳಿಸಿ ಮನೆಯಲ್ಲಿ ಕೂಡಿಹಾಕಿ...
15-07-25 10:57 pm