ಯಡಿಯೂರಪ್ಪ ಮನೆ ಮೇಲೆ ದಾಳಿ ; ಕಾಂಗ್ರೆಸ್ ನಾಯಕರು ಪಕ್ಕಾ ಪ್ಲ್ಯಾನ್ ಮಾಡಿಯೇ ಕೃತ್ಯ ನಡೆಸಿದ್ದಾರೆ, ಸಿಎಂ ಬೊಮ್ಮಾಯಿ

28-03-23 09:54 pm       HK News Desk   ಕರ್ನಾಟಕ

ಮೀಸಲಾತಿ ವಿಚಾರ ಸಂಬಂದ ಬಂಜಾರಾ ಸಮಾಜವನ್ನು ತಪ್ಪು ದಾರಿಗೆ ಎಳೆಯಲು ಕಾಂಗ್ರೆಸ್ ಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದರು

ಕಲಬುರಗಿ, ಮಾ.28: ಮೀಸಲಾತಿ ವಿಚಾರ ಸಂಬಂದ ಬಂಜಾರಾ ಸಮಾಜವನ್ನು ತಪ್ಪು ದಾರಿಗೆ ಎಳೆಯಲು ಕಾಂಗ್ರೆಸ್ ಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದರು

ಮೆಗಾ ಟೆಕ್ಸ್ ಟೈಲ್ ಪಾರ್ಕ್ ಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕಾರಿಪುರದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮನೆ ಮೇಲೆ ದಾಳಿಯಲ್ಲಿ ಪಾಲ್ಗೊಂಡವರು ಕ್ಯಾಮರಾದಲ್ಲಿ ಸೆರೆಯಾಗಿದ್ದಾರೆ. ಅದರಲ್ಲಿ ಕೆಲವರನ್ನು ಬಂಧಿಸಲಾಗಿದ್ದು ಅವರೆಲ್ಲ ಕಾಂಗ್ರೆಸ್ ನವರಿದ್ದಾರೆ. ಹೀಗಿದ್ದ ಮೇಲೂ ಕಾಂಗ್ರೆಸ್ ನ ಡಿ.ಕೆ.ಶಿವಕುಮಾರ ಬಿಜೆಪಿಯ ದಾಳಿ ಎನ್ನುವುದು ನಾಚಿಗೇಡಿತನ ಸಂಗತಿ ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್ ನಾಯಕರು ರಾತ್ರಿ ಮೀಟಿಂಗ್ ಮಾಡಿ ಪಕ್ಕಾ ಪ್ಲ್ಯಾನ್ ಮಾಡಿಯೇ ಈ ಕೃತ್ಯ ನಡೆಸಿದ್ದಾರೆ ಎಂದು ಸಿಎಂ‌ ವಾಗ್ದಾಳಿ ನಡೆಸಿದರು.

Former chief minister and JD(S) leader H D Kumaraswamy appealed to the people to bless the party to bring them back to power independently with full majority, like they had done for H D Deve Gowda to become the chief minister.