ಬ್ರೇಕಿಂಗ್ ನ್ಯೂಸ್
29-03-23 10:29 pm Bangalore Correspondent ಕರ್ನಾಟಕ
ಬೆಂಗಳೂರು, ಮಾ.29 : ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮೈಸೂರಿನಲ್ಲಿ ರೋಡ್ ಶೋ ವೇಳೆ ಕಲಾವಿದರ ಮೇಲೆ 500 ರೂ. ಮುಖಬೆಲೆಯ ನೋಟುಗಳನ್ನು ಎಸೆದ ವಿಚಾರದಲ್ಲಿ ಬಿಜೆಪಿ ನಾಯಕರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ಶ್ರೀರಂಗಪಟ್ಟಣದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ತೆರೆದ ಬಸ್ನಲ್ಲಿ ರೋಡ್ ಶೋ ನಡೆಸಿದ್ದ ಡಿಕೆಶಿ ಕಲಾವಿದರತ್ತ ಹಣ ಎಸೆದಿದ್ದರು. ಈ ಬಗ್ಗೆ ಬಿಜೆಪಿ ಎಂಎಲ್ಸಿ ರವಿಕುಮಾರ್ ನೇತೃತ್ವದ ನಿಯೋಗ ಡಿಕೆಶಿ ವಿರುದ್ಧ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಜತೆಗೆ, ಎಸ್ಡಿಪಿಐ ಮುಖಂಡನೊಬ್ಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ವಿಚಾರದಲ್ಲೂ ದೂರು ಸಲ್ಲಿಸಲಾಗಿದೆ.
ಪ್ರಜಾಧ್ವನಿ ಯಾತ್ರೆ ವೇಳೆ ಡಿಕೆ ಶಿವಕುಮಾರ್ ತೆರೆದ ಬಸ್ಸಿನಲ್ಲಿ ಸಂಚರಿಸುತ್ತಿದ್ದರು. ಇದೇ ವೇಳೆ ಒಂದು ಬದಿಯಲ್ಲಿ ಕಲಾವಿದರ ತಂಡ ವಿವಿಧ ಪ್ರದರ್ಶನಗಳನ್ನು ನಡೆಸುತ್ತಿತ್ತು. ಅವರತ್ತ ಡಿಕೆಶಿ 500 ರೂ. ಮುಖಬೆಲೆಯ ನೋಟುಗಳನ್ನು ಎಸೆದಿದ್ದರು. ಡಿಕೆಶಿ ನೋಟು ಎಸೆಯುತ್ತಿರುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿದಾಡಿತ್ತು.
ಮುಸ್ಲಿಮರ ಮೀಸಲಾತಿ ವಾಪಸ್ ಕೊಡದಿದ್ದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಚಡ್ಡಿ ಬಿಚ್ಚಿಸುತ್ತೇವೆ ಎಂದು ಚಿತ್ರದುರ್ಗ ಜಿಲ್ಲೆಯ ಎಸ್ಡಿಪಿಐ ಮುಖಂಡರೊಬ್ಬರು ಇತ್ತೀಚೆಗೆ ಹೇಳಿದ್ದರು. ಮುಸ್ಲಿಮರಿಗೆ 2ಬಿ ಅಡಿ ನೀಡಲಾಗುತ್ತಿದ್ದ ಮೀಸಲಾತಿಯನ್ನು ರದ್ದುಗೊಳಿಸಿ ಒಕ್ಕಲಿಗರಿಗೆ ಮತ್ತು ಲಿಂಗಾಯತರಿಗೆ 2ಸಿ ಮತ್ತು 2ಡಿ ಅಡಿ ಮೀಸಲಾತಿ ಪ್ರಮಾಣವನ್ನು ಕ್ರಮವಾಗಿ ಶೇ 4ರಿಂದ 6 ಹಾಗೂ ಶೇ 5ರಿಂದ 7ಕ್ಕೆ ಹೆಚ್ಚಿಸುವ ಬಗ್ಗೆ ಕಳೆದ ವಾರ ರಾಜ್ಯ ಸಚಿವ ಸಂಪುಟ ನಿರ್ಧಾರ ಕೈಗೊಂಡಿತ್ತು. ಮುಸ್ಲಿಮರಿಗೆ ಆರ್ಥಿಕವಾಗಿ ಹಿಂದುಳಿದವರ ವರ್ಗದಲ್ಲಿ (EWS) ಮೀಸಲಾತಿ ನೀಡಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಎಸ್ಡಿಪಿಐ ಮುಖಂಡರು ಬಿಜೆಪಿ ಹಾಗೂ ಬೊಮ್ಮಾಯಿ ವಿರುದ್ಧ ಹರಿಹಾಯ್ದಿದ್ದರು.
Karnataka BJP Wednesday filed a complaint against state Congress president DK Shivakumar after videos of him showering currency notes on crowds during a roadshow emerged on Tuesday.
11-05-24 11:20 pm
Bangalore Correspondent
SP Dinesh, Ayanur Manjunath, Congress: ನೈರುತ್...
11-05-24 09:46 pm
KAS officer shivakumar wife Chaitra suicide:...
11-05-24 07:25 pm
Chikkaballapur, Police constable protest, SP...
11-05-24 06:57 pm
Belagavi accident, three killed: ಬೆಳಗಾವಿ ; ಕ್...
11-05-24 05:25 pm
11-05-24 09:43 pm
HK News Desk
Kareena Kapoor, Bible Book, court: “ಪ್ರೆಗ್ನೆನ...
11-05-24 03:13 pm
Ram Mandir, Nana Patole, Nrendra modi: ಮೋದಿಯಿ...
10-05-24 10:05 pm
Arvind Kejriwal, Supreme court: ಸಿಎಂ ಕೇಜ್ರಿವಾ...
10-05-24 03:46 pm
Kerala Arali Flower death: ಮೊಬೈಲ್ ನಲ್ಲಿ ಮಾತನಾ...
10-05-24 10:06 am
11-05-24 10:54 pm
Mangalore Correspondent
Mangalore Alvas pragathi job fair: ಜೂನ್ 7-8 ;...
11-05-24 06:48 pm
Udupi news, body in car: ಟೂರಿಸ್ಟ್ ಕಾರು ಇರೋದು...
11-05-24 01:33 pm
Thumbe reservoir, Mangalore: ತುಂಬೆ ಡ್ಯಾಮಿನಲ್ಲ...
11-05-24 12:25 pm
Praveen Nettaru, NIA arrest: ಸಕಲೇಶಪುರದಲ್ಲಿ ಶು...
10-05-24 10:45 pm
11-05-24 10:18 pm
Mangaluru Correspondent
Bangalore Crime, Cyber, Roopa Iyer: ಸೆಲೆಬ್ರಿಟ...
10-05-24 05:04 pm
Kalaburgi youth murdered: ಕಲಬುರಗಿ ; ಕಾಂಗ್ರೆಸ್...
10-05-24 02:04 pm
Cyber fraud Kodagu, Kerala, Sim card: ಸೈಬರ್ ವ...
10-05-24 12:44 pm
NIA arrests Mustafa Paichar, Praveen Nettaru...
10-05-24 11:53 am