ಟೆಂಡರ್ ನೀಡಲು ಲಂಚ ; ಲೋಕಾಯುಕ್ತ ಬಲೆಗೆ ಬಿದ್ದಿದ್ದ ಬಿಜೆಪಿ ಶಾಸಕ ಮಾಡಾಳು ಕೊನೆಗೂ ಜೈಲು ಪಾಲು ; ಎ.11ರ ವರೆಗೆ ಜೈಲೇ ಗತಿ ! 

01-04-23 09:45 pm       Bangalore Correspondent   ಕರ್ನಾಟಕ

ಟೆಂಡರ್ ನೀಡುವ ನೆಪದಲ್ಲಿ ಲಂಚ ಸ್ವೀಕರಿಸಿ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಶಾಸಕ‌ ಮಾಡಾಳು ವಿರೂಪಾಕ್ಷಪ್ಪ ಕೊನೆಗೂ ಜೈಲು ಪಾಲಾಗಿದ್ದಾರೆ. ಜನಪ್ರತಿನಿಧಿಗಳ ನ್ಯಾಯಾಲಯ ಮಾಡಾಳು ಅವರನ್ನು ಎ.11ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಬೆಂಗಳೂರು, ಎ.1: ಟೆಂಡರ್ ನೀಡುವ ನೆಪದಲ್ಲಿ ಲಂಚ ಸ್ವೀಕರಿಸಿ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಶಾಸಕ‌ ಮಾಡಾಳು ವಿರೂಪಾಕ್ಷಪ್ಪ ಕೊನೆಗೂ ಜೈಲು ಪಾಲಾಗಿದ್ದಾರೆ. ಜನಪ್ರತಿನಿಧಿಗಳ ನ್ಯಾಯಾಲಯ ಮಾಡಾಳು ಅವರನ್ನು ಎ.11ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. 

ವಿರೂಪಾಕ್ಷಪ್ಪ ಮಾಡಾಳ್‌ ಅವರನ್ನು ಮಾರ್ಚ್‌ 27ರಂದು ನೆಲಮಂಗಲದಲ್ಲಿ ಬಂಧಿಸಲಾಗಿತ್ತು. ಬಳಿಕ ಕೋರ್ಟ್‌ ಸೂಚನೆಯಂತೆ ಲೋಕಾಯುಕ್ತ ಕಸ್ಟಡಿಯಲ್ಲಿದ್ದ ಅವರ ಕಸ್ಟಡಿ ಅವಧಿ ಏಪ್ರಿಲ್‌ 1ಕ್ಕೆ ಮುಕ್ತಾಯಗೊಂಡಿತ್ತು. ಶನಿವಾರ ಮಾಡಾಳ್‌ ಅವರನ್ನು ಕೋರ್ಟ್ ಗೆ ಹಾಜರುಪಡಿಸಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯ ಶಾಸಕರನ್ನು ಏಪ್ರಿಲ್‌ 11ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಕೋರ್ಟ್‌ ಸೂಚನೆಯಂತೆ ಪೊಲೀಸರು ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ತಲುಪಿಸಿದ್ದಾರೆ.

ಕೆಎಸ್ ಡಿಎಲ್ ನಿಗಮದ ಟೆಂಡರ್ ಗಾಗಿ ಶಾಸಕ ವಿರೂಪಾಕ್ಷಪ್ಪ ಪುತ್ರ ಮಾಡಾಳ್ ಪ್ರಶಾಂತ್ ಲಂಚ ಸ್ವೀಕರಿಸುವ ವೇಳೆ ರೆಡ್ ಹ್ಯಾಂಡಾಗಿ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದ. ಅದರ ಬೆನ್ನಲ್ಲೇ ಆತನ ಮನೆ ಶೋಧ ನಡೆಸಿದ ಅಧಿಕಾರಿಗಳಿಗೆ ಮನೆಯಲ್ಲಿ ಆರು ಕೋಟಿ ನಗದು ಸಿಕ್ಕಿತ್ತು.

A Bengaluru court remanded BJP Channagiri MLA Madal Virupakshappa to judicial custody till April 11 in a corruption case. On March 28 the court had given 5-day custody of the legislator to the Lokayukta Police, which ended on Saturday.