ಬ್ರೇಕಿಂಗ್ ನ್ಯೂಸ್
10-04-23 12:47 pm HK News Desk ಕರ್ನಾಟಕ
ವಿಜಯನಗರ, ಎ.10: ಮನುಷ್ಯ ಸತ್ತಾಗ ಸಂಬಂಧಿಕರು, ಸ್ನೇಹಿತರು ಅಂತಿಮ ಗೌರವ ಸಲ್ಲಿಸುವುದು ನಡೆದುಕೊಂಡು ಬಂದ ವಾಡಿಕೆ. ಆದರೆ ಇಲ್ಲೊಂದು ಮಂಗ ತನಗೆ ಅನ್ನ ಹಾಕುತ್ತಿದ್ದ ವ್ಯಕ್ತಿ ಸತ್ತಾಗ ಅಂತಿಮ ದರ್ಶನಕ್ಕೆ ಬಂದಿದ್ದಲ್ಲದೆ, ಆತನ ತಲೆಗೆ ಮುತ್ತುಕೊಟ್ಟು ವಿದಾಯ ಹೇಳಿದ್ದು ನೋಡಿದವರನ್ನು ಬೆರಗಾಗಿಸಿದೆ.
ವಿಜಯನಗರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಹೊಟೆಲ್ ಉದ್ಯಮಿ ಶವಕ್ಕೆ ಮಂಗ ಮುತ್ತು ಕೊಟ್ಟು ನಮನ ಸಲ್ಲಿಸಿ ತನಗೆ ಅನ್ನ ಕೊಟ್ಟವರ ಋಣ ತೀರಿಸಿದೆ. ಹಗರಿಬೊಮ್ಮನಹಳ್ಳಿ ಪಟ್ಟಣದ ಹೊಟೇಲ್ ಉದ್ಯಮಿ ಪರಶುರಾಮ ಪೋಮುಸಾ ಹಬೀಬ್ ಸಾವಜಿ ಎಂಬ ವೃದ್ಧ ವ್ಯಕ್ತಿ ಏಪ್ರಿಲ್ 3 ರಂದು ಇಹಲೋಕ ತ್ಯಜಿಸಿದ್ದರು. ಸಾವಜಿ ಸಣ್ಣಂದಿನಿಂದಲೂ ಪ್ರಾಣಿ - ಪಕ್ಷಿ ಪ್ರಿಯರಾಗಿದ್ದರು. ತಮ್ಮ ಜೀವನದುದ್ದಕ್ಕೂ ಪ್ರಾಣಿ ಪಕ್ಷಿಗಳಿಗೆ ಕೈಲಾದ ನೆರವು ನೀಡುತ್ತಿದ್ದರು. ಅದರಲ್ಲೂ ಈ ಕೋತಿಗೆ ನಿತ್ಯವೂ ಹೊಟೇಲಿನಿಂದ ಹಣ್ಣು, ರೊಟ್ಟಿ ನೀಡಿ ಆರೈಕೆ ಮಾಡುತ್ತಿದ್ದರು. ಮನೆಯ ಬಳಿ ಬರುತ್ತಿದ್ದ ಕೋತಿ ಕಿಟಕಿ ಬಳಿ ಬಂದು ಈ ಅಜ್ಜನನ್ನು ನೋಡುತ್ತಿತ್ತು. ಇದನ್ನು ಗಮನಿಸಿದ ಅಜ್ಜ ಮನೆಯವರಿಗೆ ಹೇಳಿ ಅದಕ್ಕೆ ಆಹಾರ ಕೊಡಿಸುತ್ತಿದ್ದರು.
ಅಜ್ಜನ ಸೂಚನೆಯಂತೆ ಮನೆಯವರು ಕೋತಿಗೆ ನಿತ್ಯವೂ ಆಹಾರ ನೀಡುತ್ತಿದ್ದರು. ಅದನ್ನು ತಿಂದ ಕೋತಿ ಸಂತೃಪ್ತಿಯಿಂದ ಮರಳುತ್ತಿತ್ತು. ಆದರೆ ಇಂದು ಅಜ್ಜ ಇಹಲೋಕ ತ್ಯಜಿಸಿದ್ದನ್ನು ತಿಳಿದ ಮಂಗ ತನ್ನ ಆಪತ್ಬಾಂಧವ ಆಗಲಿದ್ದಾನೆಂದು ಮರುಗಿದೆ. ಅಲ್ಲದೆ, ನಿತ್ಯ ತನಗೆ ಆಹಾರ ಹಾಕುತ್ತಿದ್ದ ಅಜ್ಜನ ಹಣೆಗೆ ಮುತ್ತು ಕೊಟ್ಟು ವಿದಾಯ ಹೇಳಿದ್ದು ಮಂಗನಿಗೂ ದುಃಖ, ಸಂತಸದ ಭಾವನೆ ಇದೆಯೆಂಬುದನ್ನು ಸಾರಿದೆ.
ಗೌರವ ಸಲ್ಲಿಸಿದ ಬಳಿಕ ಬಂದಷ್ಟೇ ವೇಗವಾಗಿ ಮಂಗ ಅಲ್ಲಿಂದ ತೆರಳಿದ್ದೂ ಆಗಿದೆ. ಈ ಮೂಲಕ ಅನ್ನ ಕೊಟ್ಟವರನ್ನು ಮುಪ್ಪಿನ ವರೆಗೂ ನೆನೆಯಬೇಕು ಎಂಬ ಸಂದೇಶವನ್ನು ಕೋತಿ ಸಾರಿದೆ. ಇದರ ವಿಡಿಯೋ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದ್ದು ಜನರ ಗಮನ ಸೆಳೆದಿದೆ.
Monkey kisses forehead of dead man during the last rites who feed it with rice, shocks people in Vijayanagara.
14-08-26 08:42 pm
HK News Staffer
ಗುಟ್ಕಾ-ಪಾನ್ ಮಸಾಲಾ ನಿಷೇಧಕ್ಕೆ 48 ಗಂಟೆಯಲ್ಲೇ ಯು-...
14-08-26 05:32 pm
ಅನುಭವ ಇಲ್ಲದ ಮಂಗ ಯತೀಂದ್ರಗೆ ಮೈಸೂರು ಜಿಲ್ಲಾ ಉಸ್ತು...
13-08-26 10:19 pm
ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ವಿ...
13-08-26 08:09 pm
ಜೈಲಿನಲ್ಲಿದ್ದರೂ ಚಟ ಬಿಡದ ಪ್ರಜ್ವಲ್ ರೇವಣ್ಣ ! ಪೆನ್...
13-08-26 07:14 pm
11-08-26 10:25 pm
HK News Staffer
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
15-08-26 10:08 pm
HK News Staffer
Mangalore City Centre KFC raided: Six-month-o...
15-08-26 09:30 pm
ಗುಟ್ಕಾ, ಪಾನ್ ಮಸಾಲ ಪ್ರತ್ಯೇಕ ಕೊಟ್ಟರೆ ನಿರ್ಬಂಧ ಇಲ...
15-08-26 04:52 pm
Infosys Mangalore, News: ಕೊಟ್ಟಾರದ ಇನ್ಫೋಸಿಸ್ ಕ...
14-08-26 10:23 pm
ಮಂಗಳೂರು ವಿಮಾನ ದುರಂತದ ಕಹಿನೆನಪು ಬಾಲಕಿಯ ಮನದಲ್ಲಿ...
14-08-26 02:07 pm
15-08-26 09:06 pm
HK News Staffer
ಸ್ವಾತಂತ್ರ್ಯ ದಿನದಂದೇ ಚಾಮರಾಜನಗರದಲ್ಲಿ ಗುಂಡಿನ ಸದ್...
15-08-26 06:11 pm
David Dsouza Murder, Arrest: ಡೇವಿಡ್ ಹತ್ಯೆ ಪ್ರ...
15-08-26 05:09 pm
ಅಪ್ರಾಪ್ತ ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ದಿದ್ದಕ್ಕ...
15-08-26 04:19 pm
ಕೆಲಸ ಮಾಡಿಕೊಡುವ ನೆಪದಲ್ಲಿ ಪದೇಪದೇ ಹಣಕ್ಕಾಗಿ ಒತ್ತಾ...
15-08-26 02:06 pm