ಉಡುಪಿಗೆ ಯಶಪಾಲ್ ಸುವರ್ಣ, ಪುತ್ತೂರಿಗೆ ಆಶಾ ತಿಮ್ಮಪ್ಪ, ಸುಳ್ಯಕ್ಕೆ ಭಾಗೀರಥಿ, ಮಂಗಳೂರು, ಮೂಡುಬಿದ್ರೆಗೆ ಹಾಲಿಗಳಿಗೇ ಮಣೆ, ಸೋಮಣ್ಣಗೆ ಬಂಪರ್ ! 9 ಶಾಸಕರಿಗೆ ಟಿಕೆಟ್ ಮಿಸ್

11-04-23 10:07 pm       HK News Desk   ಕರ್ನಾಟಕ

ರಾಜ್ಯ ಅಸೆಂಬ್ಲಿ ಚುನಾವಣೆಗೆ ಬಹುನಿರೀಕ್ಷಿತ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಕಡೆಗೂ ರಿಲೀಸ್ ಆಗಿದೆ. ಮೊದಲ ಹಂತದಲ್ಲಿ 189 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಬಿಜೆಪಿ ಹೈಕಮಾಂಡ್ ಆದೇಶ ಮಾಡಿದೆ. ದೆಹಲಿಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದರು.

ನವದೆಹಲಿ, ಎ.11: ರಾಜ್ಯ ಅಸೆಂಬ್ಲಿ ಚುನಾವಣೆಗೆ ಬಹುನಿರೀಕ್ಷಿತ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಕಡೆಗೂ ರಿಲೀಸ್ ಆಗಿದೆ. ಮೊದಲ ಹಂತದಲ್ಲಿ 189 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಬಿಜೆಪಿ ಹೈಕಮಾಂಡ್ ಆದೇಶ ಮಾಡಿದೆ. ದೆಹಲಿಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದರು.

ಈ ಬಾರಿ ವಿಭಿನ್ನ ರೀತಿಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ರಾಜ್ಯದ 31 ಜಿಲ್ಲೆಗಳಲ್ಲಿ 31 ಸಾವಿರ ಕಾರ್ಯಕರ್ತರಿಂದಲೇ ಮಾಹಿತಿ ಪಡೆದು, ಅದನ್ನು ಆಧರಿಸಿ ಟಿಕೆಟ್ ಹಂಚಿಕೆ ಮಾಡಲಾಗಿದೆ ಎಂದು ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಹೇಳಿದರು. ಈ ಬಾರಿ ಎಂಟು ಮಹಿಳೆಯರು, ಹಿಂದುಳಿದ ವರ್ಗಕ್ಕೆ 32, ಎಸ್ಸಿ 30 ಜನರಿಗೆ ಟಿಕೆಟ್ ನೀಡಲಾಗಿದೆ. ಇದಲ್ಲದೆ, 9 ಮಂದಿ ವೈದ್ಯರಿಗೆ. ನಿವೃತ್ತ ಐಐಎಸ್-1, ನಿವೃತ್ತ ಐಪಿಎಸ್- 1, ನಿವೃತ್ತ ಸರಕಾರಿ ನೌಕರರು3, ಸಮಾಜ ಸೇವಾ ಕಾರ್ಯಕರ್ತರು 8, ವಕೀಲರು 5, ಶಿಕ್ಷಣ ತಜ್ಞರು ಮೂರು ಮಂದಿಗೆ ಟಿಕೆಟ್ ನೀಡಲಾಗಿದೆ.

ಉಡುಪಿ: ಕೋ-ಆಪರೇಟಿವ್ ಬ್ಯಾಂಕ್ ಮ್ಯಾನೇಜರ್ ಆತ್ಮಹತ್ಯೆಗೆ ಕುಮ್ಮಕ್ಕು ಆರೋಪ; ಬಿಜೆಪಿ  ಮುಖಂಡನ ವಿರುದ್ಧ ಕೇಸ್- Kannada Prabha

ಉಡುಪಿ ಕ್ಷೇತ್ರದಲ್ಲಿ ಹಾಲಿ ಶಾಸಕ ರಘುಪತಿ ಭಟ್ ಗೆ ಟಿಕೆಟ್ ನಿರಾಕರಿಸಿದ್ದು, ಅಲ್ಲಿ ಮೀನುಗಾರ ಮುಖಂಡ ಯಶಪಾಲ್ ಸುವರ್ಣಗೆ ಟಿಕೆಟ್ ನೀಡಲಾಗಿದೆ. ಕುಂದಾಪುರ ಕ್ಷೇತ್ರದಲ್ಲಿ ನಿರೀಕ್ಷೆಯಂತೆ ಕಿರಣ್ ಕೊಡ್ಗಿ ಅವರಿಗೆ ಟಿಕೆಟ್ ಸಿಕ್ಕಿದೆ. ಕಾಪು ಕ್ಷೇತ್ರದಲ್ಲಿ ಗುರ್ಮೆ ಸುರೇಶ್ ಶೆಟ್ಟಿ ಟಿಕೆಟ್ ಪಡೆದಿದ್ದಾರೆ. ಕಾಪು ಹಾಲಿ ಶಾಸಕ ಲಾಲಾಜಿ ಮೆಂಡನ್ ಟಿಕೆಟ್ ಕಳಕೊಂಡಿದ್ದಾರೆ. ಕಾರ್ಕಳ ಕ್ಷೇತ್ರದಲ್ಲಿ ಶಾಸಕ ಸುನಿಲ್ ಕುಮಾರ್ ಟಿಕೆಟ್ ಪಡೆದಿದ್ದಾರೆ. ಬೈಂದೂರು ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಆಗಿಲ್ಲ.

ಮಂಗಳೂರು ದಕ್ಷಿಣದಲ್ಲಿ ವೇದವ್ಯಾಸ ಕಾಮತ್, ಉತ್ತರದಲ್ಲಿ ಭರತ್ ಶೆಟ್ಟಿ, ಮೂಡುಬಿದ್ರೆ – ಉಮಾನಾಥ ಕೋಟ್ಯಾನ್, ಬೆಳ್ತಂಗಡಿ- ಹರೀಶ್ ಪೂಂಜ, ಉಳ್ಳಾಲದಲ್ಲಿ ಸತೀಶ್ ಕುಂಪಲ, ಪುತ್ತೂರು ಕ್ಷೇತ್ರದಲ್ಲಿ ಹಾಲಿ ಶಾಸಕ ಸಂಜೀವ ಮಠಂದೂರು ಬದಲಿಗೆ ಆಶಾ ತಿಮ್ಮಪ್ಪ ಗೌಡ, ಸುಳ್ಯದಲ್ಲಿ ಆರು ಬಾರಿಯ ಶಾಸಕ ಎಸ್. ಅಂಗಾರ ಬದಲು ಭಾಗೀರಥಿ ಮುರುಳ್ಯ ಅವರಿಗೆ ಟಿಕೆಟ್ ನೀಡಲಾಗಿದೆ.

ಹಾಲಿ ಸಚಿವ ವಿ.ಸೋಮಣ್ಣ ಅವರನ್ನು ಎರಡು ಕಡೆ ಕಣಕ್ಕಿಳಿಸಿದ್ದು ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ಧ ಮತ್ತು ಚಾಮರಾಜನಗರ ಕ್ಷೇತ್ರದಲ್ಲಿ ಸ್ಪರ್ಧೆಗೆ ಇಳಿಸಲಾಗಿದೆ. ಕಂದಾಯ ಸಚಿವ ಆರ್. ಅಶೋಕ್ ಪದ್ಮನಾಭ ನಗರ ಮತ್ತು ಕನಕಪುರದಲ್ಲಿ ಸ್ಪರ್ಧಿಸಲಿದ್ದಾರೆ. ಕನಕಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ವಿರುದ್ಧ ಮತ್ತೊಬ್ಬ ಪ್ರಬಲ ಒಕ್ಕಲಿಗ ಅಶೋಕ್ ಸ್ಪರ್ಧೆ ಮಾಡಲಿದ್ದಾರೆ. ಹಾಲಿ ಒಂಬತ್ತು ಶಾಸಕರಿಗೆ ಟಿಕೆಟ್ ನಿರಕಾರಣೆ ಮಾಡಲಾಗಿದೆ. 35 ಕ್ಷೇತ್ರಗಳ ಅಭ್ಯರ್ಥಿ ಫೈನಲ್ ಮಾಡಿಲ್ಲ. ಜಗದೀಶ್ ಶೆಟ್ಟರ್, ಈಶ್ವರಪ್ಪ ಸ್ಥಾನ ಕಳಕೊಂಡಿದ್ದಾರೆ. ಈಶ್ವರಪ್ಪ ಬದಲು ಪುತ್ರನಿಗೂ ಟಿಕೆಟ್ ಸಿಕ್ಕಿಲ್ಲ.

  • ಅಥಣಿ - ಮಹೇಶ್ ಕುಮಟಳ್ಳಿ,
  • ಕಾಗವಾಡ- ಶ್ರೀಮಂತ್ ಪಾಟೀಲ್,  
  • ಕುಡಚಿ - ಪಿ.ರಾಜೀವ್
  • ರಾಯಭಾಗ ದುರ್ಯೋಧನ
  • ಹುಕ್ಕೇರಿ – ನಿಖಿಲ್ ಕತ್ತಿ
  • ಹರಭಾವಿ – ಬಾಲಚಂದ್ರ ಜಾರಕಿಹೊಳಿ
  • ಗೋಕಾಕ್ ರಮೇಶ್ ಜಾರಕಿಹೊಳಿ
  • ಯಮಕನಮರಡಿ – ಬಸವರಾಜ್
  • ಚಿಕ್ಕೋಡಿ ರಮೇಶ್ ಕತ್ತಿ
  • ಬೆಳಗಾವಿ ಉತ್ತರ - ರವಿ ಪಾಟೀಲ್
  • ಬೆಳಗಾವಿ ದಕ್ಷಿಣ ಅಭಯ ಪಾಟೀಲ್
  • ಬೆಳಗಾವಿ ಗ್ರಾಮೀಣ – ನಾಗೇಶ್
  • ಸವದತ್ತಿ - ರತ್ನಾ ವಿಶ್ವನಾಥ್ ಮಾಮನಿ
  • ಶಿರಸಿ – ವಿಶ್ವೇಶ್ವರ ಹೆಗಡೆ
  • ಯಲ್ಲಾಪುರ- ಶಿವರಾಮ ಹೆಬ್ಬಾರಿ
  • ಹುಬ್ಬಳ್ಳಿ ಧಾರವಾಡ – ಅರವಿಂದ ಬೆಲ್ಲದ್  
  • ಹಡಗಲಿ- ಶ್ರೀಕೃಷ್ಣ ನಾಯಕ್
  • ವಿಜಯಪುರ ನಗರ – ಬಸವನಗೌಡ ಪಾಟೀಲ್ ಯತ್ನಾಳ್
  • ಬಳ್ಳಾರಿ ಗ್ರಾಮೀಣ – ಶ್ರೀರಾಮುಲು
  • ಬಳ್ಳಾರಿ ನಗರ- ಗಣಿ ಸೋಮಶೇಖರ ರೆಡ್ಡಿ
  • ಸಂಡೂರು – ಶಿಲ್ಪಾ ರಾಘವೇಂದ್ರ
  • ಮೊಳಕಾಲ್ಮೂರು – ಎಸ್ ತಿಪ್ಪೇಸ್ವಾಮಿ
  • ಹಿರಿಯೂರು – ಪೂರ್ಣಿಮಾ ಶ್ರೀನಿವಾಸ್
  • ಶಿಕಾರಿಪುರ – ವಿಜಯೇಂದ್ರ
  • ಸೊರಬ ಕುಮಾರ್ ಬಂಗಾರಪ್ಪ
  • ಹರತಾಳು ಹಾಲಪ್ಪ
  • ಕುಂದಾಪುರ - ಕಿರಣ್ ಕೊಡ್ಗಿ
  • ಉಡುಪಿ - ಯಶಪಾಲ್ ಸುವರ್ಣ
  • ಕಾಪು - ಗುರ್ಮೆ ಸುರೇಶ್ ಶೆಟ್ಟಿ
  • ಕಾರ್ಕಳ - ಸುನಿಲ್ ಕುಮಾರ್
  • ಶೃಂಗೇರಿ-  ಜಿಎನ್ ದೇವರಾಜ್
  • ಚಿಕ್ಕಮಗಳೂರು - ಸಿಟಿ ರವಿ  
  • ಕುಣಿಗಲ್ – ಜಿಬಿ ಜ್ಯೋತಿಗಣೇಶ್
  • ಚಾಮರಾಜಪೇಟೆ ಭಾಸ್ಕರ ರಾವ್
  • ಬಸವನಗುಡಿ ರವಿ ಸುಬ್ರಹ್ಮಣ್ಯ
  • ಪದ್ಮನಾಭ ನಗರ - ಆರ್ ಅಶೋಕ್
  • ಜಯನಗರ - ಸಿಕೆ ರಾಮಮೂರ್ತಿ  
  • ಹೊಸಕೋಟೆ ಎಂಟಿಬಿ ನಾಗರಾಜ್
  • ದೊಡ್ಡಬಳ್ಳಾಪುರ – ಧೀರಜ್ ಮುನಿರಾಜು
  • ಕನಕಪುರ – ಆರ್. ಅಶೋಕ್
  • ಚನ್ನಪಟ್ಟಣ- ಸಿಪಿ ಯೋಗೀಶ್ವರ್
  • ಮಳವಳ್ಳಿ – ಮುನಿರಾಜು
  • ಮಂಡ್ಯ - ಅಶೋಕ್ ಜಯರಾಂ
  • ನಾಗಮಂಗಲ – ಸುಧಾ ಶಿವರಾಂ
  • ಕೆಆರ್ ಪೇಟೆ – ಕೆಸಿ ನಾರಾಯಣ ಗೌಡ
  • ಹಾಸನ - ಪ್ರೀತಂ ಗೌಡ
  • ಹೊಳೆನರಸೀಪುರ- ದೇವರಾಜು ಗೌಡ
  • ಅರಕಲಗೂಡು - ಯೋಗ ರಮೇಶ್
  • ಬೆಳ್ತಂಗಡಿ - ಹರೀಶ್ ಪೂಂಜ
  • ಮೂಡುಬಿದ್ರೆ- ಉಮಾನಾಥ ಕೋಟ್ಯಾನ್
  • ಮಂಗಳೂರು ಸಿಟಿ ಉತ್ತರ-  ಭರತ್ ಶೆಟ್ಟಿ
  • ಮಂಗಳೂರು ದಕ್ಷಿಣ - ವೇದವ್ಯಾಸ ಕಾಮತ್
  • ಮಂಗಳೂರು- ಸತೀಶ್ ಕುಂಪಲ
  • ಬಂಟ್ವಾಳ - ರಾಜೇಶ್ ನಾಯ್ಕ್
  • ಪುತ್ತೂರು - ಆಶಾ ತಿಮ್ಮಪ್ಪ ಗೌಡ
  • ಸುಳ್ಯ- ಭಾಗೀರಥಿ ಮುರುಳ್ಯ
  • ಮಡಿಕೇರಿ - ಅಪ್ಪಚ್ಚು ರಂಜನ್
  • ವಿರಾಜಪೇಟೆ- ಕೆಜಿ ಬೋಪಯ್ಯ
  • ಹುಣಸೂರು – ದೇವರಹಳ್ಳಿ ಸೋಮಶೇಖರ್
  • ನಂಜನಗೂಡು - ಹರ್ಷವರ್ಧನ್
  • ಚಾಮುಂಡೇಶ್ವರಿ - ಕವೀಶ್ ಗೌಡ
  • ಚಾಮರಾಜನಗರ – ಎಲ್ ನಾಗೇಂದ್ರ
  • ವರುಣಾ – ವಿ.ಸೋಮಣ್ಣ
  • ಟಿ ನರಸೀಪುರ – ಡಾ. ರೇವಣ್ಣ
  • ಹನೂರು - ಪ್ರೀತಂ ನಾಗಪ್ಪ
  • ಚಾಮರಾಜನಗರ - ವಿ. ಸೋಮಣ್ಣ

The Central Election Committee of the BJP has decided the names of 189 candidates, in the first list, for the ensuing general elections to the legislative assembly of Karnataka. (1/2) pic.twitter.com/RhGFuhCWwS

— BJP (@BJP4India) April 11, 2023

The Bharatiya Janata Party (BJP) released the first list of 189 candidates who will be contesting the Karnataka Assembly polls. Of the 189 candidates, 52 are new faces who have been given the tickets. Asha Thimmappa for Puttur, Bhagirathi Muruly for Sullia, Yashpal Suvarna for udupi, The list includes 32 candidates from the OBC community, 30 from SC and 16 from the ST community. The list has 31 PhD holders and 31 candidates who have post-graduate degrees.