ತುಮಕೂರು ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ ; ಟಿಕೆಟ್ ಸಿಗದ್ದಕ್ಕೆ ಮುನಿಸು, ಪ್ರಭಾವಿ ಲಿಂಗಾಯತ ಮುಖಂಡ ಸೊಗಡು ಶಿವಣ್ಣ ರಾಜಿನಾಮೆ, ಬಂಡಾಯ ಸ್ಪರ್ಧೆ ನಿರ್ಧಾರ 

12-04-23 08:39 pm       HK News Desk   ಕರ್ನಾಟಕ

ರಾಜ್ಯ ಬಿಜೆಪಿಗೆ ಮತ್ತೊಂದು ಶಾಕ್ ಎದುರಾಗಿದೆ. ತುಮಕೂರು ಜಿಲ್ಲೆಯ ಪ್ರಭಾವಿ ಮುಖಂಡ ಸೊಗಡು ಶಿವಣ್ಣ ಬಿಜೆಪಿ ಟಿಕೆಟ್ ಸಿಗದ ಕಾರಣಕ್ಕೆ ಮುನಿಸಿಕೊಂಡು ಪಕ್ಷಕ್ಕೆ ರಾಜಿನಾಮೆ ಘೋಷಣೆ ಮಾಡಿದ್ದಾರೆ. 

ತುಮಕೂರು, ಎ.12 : ರಾಜ್ಯ ಬಿಜೆಪಿಗೆ ಮತ್ತೊಂದು ಶಾಕ್ ಎದುರಾಗಿದೆ. ತುಮಕೂರು ಜಿಲ್ಲೆಯ ಪ್ರಭಾವಿ ಮುಖಂಡ ಸೊಗಡು ಶಿವಣ್ಣ ಬಿಜೆಪಿ ಟಿಕೆಟ್ ಸಿಗದ ಕಾರಣಕ್ಕೆ ಮುನಿಸಿಕೊಂಡು ಪಕ್ಷಕ್ಕೆ ರಾಜಿನಾಮೆ ಘೋಷಣೆ ಮಾಡಿದ್ದಾರೆ. 

ತುಮಕೂರಿನಲ್ಲಿ  ಬೆಂಬಲಿಗರೊಂದಿಗೆ ಸಭೆ ನಡೆಸಿದ ಮಾಜಿ ಸಚಿವ ಸೊಗಡು ಶಿವಣ್ಣ ಪಕ್ಷಕ್ಕೆ ರಾಜಿನಾಮೆ ನೀಡುವ ನಿರ್ಧಾರ ಪ್ರಕಟಿಸಿದ್ದಾರೆ. ನಾನು ರಾಜೀನಾಮೆ ಕೊಡೋದು ಸತ್ಯ. ನೂರಕ್ಕೆ ನೂರು ಪಾಲು ನಾಳೆ ರಾಜೀನಾಮೆ ಕೊಡ್ತೀನಿ. ಚುನಾವಣೆಗಾಗಿ ಜೋಳಿಗೆ ಹಾಕಿಕೊಂಡು ನಿಂತ್ಕೋಳ್ತೀನಿ. 

ನಮ್ಮ ಕ್ಷೇತ್ರದ ಮತದಾರ ದೇವರ ಸತ್ಯ ಮಾಡಿ ಹೇಳ್ತೀನಿ. ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತೀನಿ. ನನಗೆ ಇವತ್ತು ರಾತ್ರಿಯ ವರೆಗೆ ಸಮಯ ಬೇಕು. ನನ್ನ ಪಕ್ಷದ ಬಾವುಟಗಳು ನನ್ನ ಮನೆಯಲ್ಲಿವೆ. ನಾನು ಕೊನೆಯವರೆಗೂ ಅದಕ್ಕೆ ಗೌರವ ಕೊಡಬೇಕು. ಹೀಗಾಗಿ ಅವುಗಳನ್ನ ಬೇರೆ ಕಡೆಗೆ ಶಿಫ್ಟ್ ಮಾಡಬೇಕಿದೆ. ಅದಾದ ನಂತರ ರಾಜೀನಾಮೆ ಘೋಷಿಸುತ್ತೇನೆ. 

ನಂತರ ನಿಮ್ಮ ಆಶಯದಂತೆಯೇ ಪಕ್ಷೇತರನಾಗಿ ಚುನಾವಣೆಗೆ ಸ್ಪರ್ಧಿಸುತ್ತೇನೆ. ನೀವೇನು ರಾಜೀನಾಮೆ ಪತ್ರಗಳಿಗೆ ಸಹಿ ಹಾಕಿ ಇಟ್ಟುಕೊಂಡಿದ್ದೀರಿ, ಅದನ್ನೆಲ್ಲ ಜಿಲ್ಲಾ ಕಚೇರಿಗೆ ಕೊಟ್ಟು ಬನ್ನಿ. ಅದನ್ನೆಲ್ಲ ಅವರ ಮುಖದ ಮೇಲೆ ಬಿಸಾಕಿ ಬನ್ನಿ. ನಾನು ಅಲ್ಲಿ ಬರಲ್ಲ. ಯಾಕಂದ್ರೆ ನಾನು ಇನ್ಮೇಲೆ ಅಲ್ಲಿಗೆ ಕಾಲು ಹಾಕಲ್ಲ ಎಂದು ಬೆಂಬಲಿಗರ ಮುಂದೆ ಖಡಕ್ ಮಾತುಗಳನ್ನು ಹೇಳಿದ ಶಿವಣ್ಣ ನಾಳೆಯೇ ಪಕ್ಷೇತರ ಸ್ಪರ್ಧೆ ಘೋಷಣೆ ಮಾಡುತ್ತೇನೆ ಎಂದರು.

Influential Lingayat Leader, Sogadu Shivanna quits Bjp in Tumkuru.