ಬ್ರೇಕಿಂಗ್ ನ್ಯೂಸ್
06-05-23 03:59 pm Bangalore Correspondent ಕರ್ನಾಟಕ
ಬೆಂಗಳೂರು, ಮೇ 6 : ಬೆಂಗಳೂರಿನ ಜಯನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಭರ್ಜರಿ ರೋಡ್ ಶೋ ನಡೆಸಿದ್ದಾರೆ. ಈ ವೇಳೆ, ರಸ್ತೆಯ ಇಕ್ಕೆಲದಲ್ಲೂ ಸಾವಿರಾರು ಜನ ಜಮಾಯಿಸಿದ್ದು, ತೆರೆದ ವಾಹನದಲ್ಲಿ ಬಂದ ಪ್ರಧಾನಿಗೆ ಹೂಮಳೆ ಸುರಿಸಿ ಹಾರೈಸಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ರೋಡ್ ಶೋ ನಡೆಸಲಿದ್ದಾರೆ. ಶನಿವಾರ ಹಾಗೂ ಭಾನುವಾರ ನಗರದಲ್ಲಿ ರೋಡ್ ಶೋ ಹಮ್ಮಿಕೊಳ್ಳಲಾಗಿದೆ. ಮೋದಿ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇಲ್ಲ ಎನ್ನುವಂತಾಗಿದೆ. ಒಂದೇ ಕುಟುಂಬದ 15 ಜನರು ಮೋದಿ ಫೋಟೋಗಳನ್ನು ಇಟ್ಟುಕೊಂಡು ಸ್ವಾಗತಿಸಿದ ರೀತಿ ಗಮನ ಸೆಳೆಯಿತು. ರಾಮಕೃಷ್ಣ ಆಶ್ರಮದ ಬಳಿ ಒಂದೇ ಕುಟುಂಬದ ಸದಸ್ಯರು ವಿಭಿನ್ನವಾಗಿ ಮೋದಿಯನ್ನು ಸ್ವಾಗತಿಸಿದರು.
ರೋಡ್ ಶೋ ನಡೆಯುವ ರಸ್ತೆಯುದ್ದಕ್ಕೂ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಚೆಂಡೆ ವಾದನ, ಕೀಲುಗೊಂಬೆಗಳು, ಹುಲಿವೇಷ, ಜಾನಪದ ನೃತ್ಯಗಳನ್ನು ಆಯೋಜನೆ ಮಾಡಲಾಗಿತ್ತು. ಮೋದಿ ರೋಡ್ ಶೋ ಹಿನ್ನಲೆಯಲ್ಲಿ ವ್ಯಾಪಕ ಭದ್ರತೆಯನ್ನು ಕೈಗೊಳ್ಳಲಾಗಿದೆ. ರೋಡ್ ಶೋ ನೋಡಲು ಬರುವವರನ್ನು ತಪಾಸಣೆ ಮಾಡಿ ಬಿಡಲಾಗುತ್ತಿದೆ. ಖಾಕಿ ಸರ್ಪಗಾವಲು ಹಾಕಿದ್ದು, ಯಾವುದೇ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಿದೆ.
ಮೊಳಗಿದ ಜೈ ಭಜರಂಗಿ ಘೋಷಣೆ
ಹಿಂದು ಸಂಘಟನೆಗಳ ಕಾರ್ಯಕರ್ತರು ಕೇಸರಿ ಹಾಗೂ ಬಜರಂಗದಳದ ಬಾವುಟ ಹಿಡಿದು ಪ್ರಧಾನಿಗೆ ಸ್ವಾಗತ ಕೋರಿದರು. ಇತ್ತೀಚೆಗಷ್ಟೇ ಬಜರಂಗದಳ ಬ್ಯಾನ್ ಮಾಡುವ ಕುರಿತು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿದ್ದರಿಂದ ಬಿಜೆಪಿ ಇದನ್ನೇ ಅಸ್ತ್ರವನ್ನಾಗಿ ಬಳಸಿಕೊಂಡಿದೆ. ಹೋದಲ್ಲಿ ಬಂದಲ್ಲಿ ಜೈ ಭಜರಂಗಿ ಎನ್ನುವ ಮೂಲಕ ಪ್ರಧಾನಿ ತಮ್ಮ ಭಾಷಣ ಆರಂಭಿಸುತ್ತಿದ್ದಾರೆ. ನಾನೂ ಭಜರಂಗಿ ಎಂದು ಬಿಜೆಪಿ ಕಾರ್ಯಕರ್ತರು ಅಭಿಯಾನ ಆರಂಭಿಸಿದ್ದಾರೆ.
ಹೆಜ್ಜೆ ಹೆಜ್ಜೆಗೂ ಸೇರಿದ್ದ ಅಭಿಮಾನಿಗಳ ಹೂವಿನ ಮಳೆ, ಕೇಸರಿ, ಕೆಂಪು ಹೂಗಳ ಹಾರಾಟ ಮೋದಿ ರೋಡ್ ಶೋವನ್ನು ಅದ್ದೂರಿಯಾಗಿಸಿತ್ತು. ರಸ್ತೆಯುದ್ದಕ್ಕೂ ಜೈ ಭಜರಂಗಿ ಘೋಷಣೆ, ಹಿಂದುಗಳ ಓಲೈಕೆಯ ಝೇಂಕಾರ, ರಣಘೋಷ ಸೇರಿದ್ದ ಜನರಲ್ಲಿ ರೋಮಾಂಚನ ಸೃಷ್ಟಿಸಿತ್ತು. ಮೋದಿ ರೋಡ್ ಶೋ ರಂಗಿನ ರಂಗವಲ್ಲಿಯ ಚಿತ್ರ ಕ್ಯಾಮರಾ ಕಣ್ಣುಗಳಲ್ಲಿ ವಿಭಿನ್ನವಾಗಿ ಮೂಡಿಬಂದಿದೆ.
The roadshow by Prime Minister Narendra Modi on Saturday (May 6) is likely to throw traffic out of gear in the city. Bengaluru Traffic Police have issued an advisory to avoid 35 key roads and junctions between 8 a.m. and 1 p.m. While they usually issue traffic diversions, this time, the advisory asks commuters to avoid these roads entirely.
04-08-25 01:00 pm
Bangalore Correspondent
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
Ravi Poojary Aide Kaviraj Arrested, Kolar Pol...
03-08-25 10:52 am
Dharmasthala News, High Court; ಧರ್ಮಸ್ಥಳ ಸುದ್ದ...
01-08-25 11:34 pm
‘Comedy Kiladigalu’, Chandrashekhar Siddi Sui...
01-08-25 10:45 pm
04-08-25 05:11 pm
HK News Desk
ಗೆಳೆಯನೊಂದಿಗೆ ಪತ್ನಿಯ ಸರಸ ; ಪರಿ ಪರಿ ಬೇಡಿಕೊಂಡರೂ...
04-08-25 02:16 pm
ವಿಮಾನದಲ್ಲಿ ಸಹ ಪ್ರಯಾಣಿಕನಿಗೆ ಕಪಾಳಮೋಕ್ಷ ; ಅಶಿಸ್ತ...
03-08-25 05:44 pm
ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ನರೇಂದ್ರ ಮೋದಿ, ಭಾಗ...
03-08-25 04:25 pm
ಮಾಲೆಗಾಂವ್ ಪ್ರಕರಣದಲ್ಲಿ ಮೋಹನ್ ಭಾಗವತ್ ಬಂಧಿಸುವುದಕ...
01-08-25 10:48 pm
04-08-25 06:05 pm
Mangalore Correspondent
VK Furniture & Electronics Launches 4th Annua...
04-08-25 04:48 pm
Dharmasthala Skeleton Mystery: ಧರ್ಮಸ್ಥಳ ಅಸ್ತಿ...
04-08-25 01:58 pm
Dharmasthala Case: ಧರ್ಮಸ್ಥಳ ಪ್ರಕರಣ ; ಆರನೇ ಪಾಯ...
04-08-25 01:24 pm
MCC Bank Inaugurates 20th Branch in Byndoor,...
04-08-25 12:40 pm
03-08-25 10:11 pm
Mangalore Correspondent
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm
Mangalore Massive Lucky Scheme Fraud: ಸುರತ್ಕಲ...
02-08-25 10:04 pm
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm