ಮೈಸೂರಿನಲ್ಲಿ ಮೋದಿ ಸಾಗಿದ ರಸ್ತೆಗೆ ಸೆಗಣಿ ಹಾಕಿ ಶುಚಿಗೊಳಿಸಿದ ಕಾಂಗ್ರೆಸ್ ಕಾರ್ಯಕರ್ತರು ! 

14-05-23 10:18 pm       HK News Desk   ಕರ್ನಾಟಕ

ಮೈಸೂರಿನಲ್ಲಿ ಮೋದಿ ರೋಡ್ ಶೋ ನಡೆಸಿದ್ದ ಮಾರ್ಗ ಅಪವಿತ್ರ ಆಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ನಮೋ ಸಾಗಿದ ದಾರಿಯನ್ನು ಸಗಣಿ, ಗಂಜಲದಿಂದ ಕ್ಲೀನ್ ಮಾಡಿದ್ದಾರೆ. 

ಮೈಸೂರು, ಮೇ 14: ಮೈಸೂರಿನಲ್ಲಿ ಮೋದಿ ರೋಡ್ ಶೋ ನಡೆಸಿದ್ದ ಮಾರ್ಗ ಅಪವಿತ್ರ ಆಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ನಮೋ ಸಾಗಿದ ದಾರಿಯನ್ನು ಸಗಣಿ, ಗಂಜಲದಿಂದ ಕ್ಲೀನ್ ಮಾಡಿದ್ದಾರೆ. 

ಮೋದಿ ಮೆರವಣಿಗೆ ಮಾಡಿ ದಸರಾ ಸಾಗುವ ರಾಜಮಾರ್ಗಕ್ಕೆ ಕಳಂಕ ತಂದಿದ್ದಾರೆಂದು ಆರೋಪ ಮಾಡಿದ್ದಾರೆ. ಕೈ ಕಾರ್ಯಕರ್ತರು ಗಂಜಲ, ಸಗಣಿ ನೀರಿನಿಂದ ರಾಜ ಮಾರ್ಗವನ್ನ ಶುಚಿಗೊಳಿಸಿದ್ದಾರೆ. ಮೈಸೂರಿನ ಕೆ.ಆರ್ ವೃತ್ತ, ಸಯ್ಯಾಜಿರಾವ್ ರಸ್ತೆಯನ್ನ ಕಾರ್ಯಕರ್ತರು ಶುಚಿಗೊಳಿಸಿದ್ದಾರೆ. 

ಮೇ 7 ರಂದು ಮೈಸೂರಿನ ಗನ್‌ಹೌಸ್ ವೃತ್ತದಿಂದ ಹೈವೇ ವೃತ್ತದ ವರೆಗೆ ಮೋದಿ ರೋಡ್ ಶೋ ಮಾಡಿದ್ದರು. ರೋಡ್ ಶೋ ಮೂಲಕ ಚುನಾವಣಾ ಪ್ರಚಾರ ನಡೆಸಿದ್ದ ಪ್ರಧಾನಿ ಬಗ್ಗೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುತ್ತಿದ್ದಂತೆ ಮೋದಿ ಸಾಗಿದ ಮಾರ್ಗವನ್ನ ಶುಚಿಗೊಳಿಸುವ ಮೂಲಕ ಕೈ ಕಾರ್ಯಕರ್ತರ ವ್ಯಂಗ್ಯವಾಡಿದ್ದಾರೆ. 

ನಾಡದೇವಿ ಚಾಮುಂಡೇಶ್ವರಿ ಮೆರವಣಿಗೆ ಸಾಗುವ ದಾರಿಯಲ್ಲಿ ಮೋದಿ ಬಂದಿದ್ದು ಅಪವಿತ್ರ ಎಂದು ಕಾರ್ಯಕರ್ತರು ಆರೋಪಿಸಿದ್ದು ಚಾಮುಂಡೇಶ್ವರಿ ಶಾಪದಿಂದಲೇ ಕರ್ನಾಟಕದಲ್ಲಿ ಬಿಜೆಪಿ ನೆಲಕಚ್ಚಿದೆ ಎಂದು ಹೇಳಿದ್ದಾರೆ. ರಾಜ ಮಹಾರಾಜರು ಸಾಗಿದ್ದ ಮಾರ್ಗ, ಈಗ ತಾಯಿ ಚಾಮುಂಡೇಶ್ವರಿ ಸಾಗುವ ಮಾರ್ಗ. ಅಂತಹ ಮಾರ್ಗದಲ್ಲಿ ಮೋದಿ ಸಾಗಿದ್ದು ಅಪಶಕುನ. ಇದರಿಂದಾಗಿಯೇ ಬಿಜೆಪಿ ಸೋತಿದೆ. ನಮ್ಮ ಮೈಸೂರು ಪವಿತ್ರವಾಗಿರಬೇಕು. ಅದಕ್ಕೆ ಕ್ಲೀನ್ ಮಾಡಿದ್ದೇವೆ ಎಂದು ಕಾರ್ಯಕರ್ತರು ತಿಳಿಸಿದ್ದಾರೆ.

Mysuru Congress leader cleans Mysuru Raja Marga with cow dung and water where PM Modi held roadshow. Local Congress leader Kamsale Ravi said, “Modi conducting the roadshow on the Raja Marga was a big mistake. This is an insult to the Mysore Royal family. No other processions were held here except for the Ambari procession during the Mysuru Dasara. But the BJP, which claims to be a Hindutva party, conducted a roadshow her. It is an insult to the Nada Habba. That is why the BJP lost in the state”.