ಬ್ರೇಕಿಂಗ್ ನ್ಯೂಸ್
26-05-23 04:46 pm Bangalore Correspondent ಕರ್ನಾಟಕ
ಬೆಂಗಳೂರು, ಮೇ 26 : ರಾಮನಗರ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನು ಹಣಬಲದಿಂದ ಸೋಲಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚುನಾವಣೆ ದಿನ ಬೆಳಗಿನ ಜಾವ ಕಾಂಗ್ರೆಸ್ ಅಭ್ಯರ್ಥಿ ಗಿಫ್ಟ್ ಕೂಪನ್ ಹಂಚಿದ್ದಾರೆ ಎಂದು ಆರೋಪಿಸಿದ್ದಾರೆ.
ಬೆಂಗಳೂರಿನಲ್ಲು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಮುಗಿದು ಎರಡು ದಿನಗಳ ಬಳಿಕ ಇದು ನನಗೆ ಸಿಕ್ಕಿದೆ. ನಮ್ಮ ಕಡೆಯವರು ಬಂದು ಈ ರೀತಿ ಕೂಪನ್ ಹಂಚಿದ್ದು ಸೋಲಿಗೆ ಕಾರಣ ಎಂದು ಹೇಳಿದ್ದಾರೆ. ರಾಮನಗರದಲ್ಲಿ ನಿಖಿಲ್ ಅವರನ್ನು ಸೋಲಿಸಿದ್ದಾರೆ ಅಂತಾರಲ್ಲ ಅವರನ್ನು ಸೋಲಿಸಿದ್ದು ಇದೇ ಎಂದು ಕೂಪನ್ಗಳನ್ನು ತೋರಿಸಿದರು.
ಇದೇ ಆ ಕೂಪನ್ ಗೆದ್ದಮೇಲೆ ಕೊಡ್ತೀವಿ ಎಂದು ಹೇಳಿದ್ದಾರೆ. ನ್ಯಾಯಯುತವಾಗಿ ಅವರು ನಮ್ಮನ್ನು ಸೋಲಿಸಿಲ್ಲ, 20-30 ಕೋಟಿ ರುಪಾಯಿ ಎಲ್ಲಿಂದ ತರ್ತೀರಾ ಇವರಿಗೆ ಕೊಡೋಕೆ, ಇದಕ್ಕೆಲ್ಲಾ ದುಡ್ಡು ಎಲ್ಲಿ ಬರುತ್ತೆ ಎಂದು ಕಿಡಿ ಕಾರಿದರು.
ಸಿದ್ದರಾಮಯ್ಯ ಇದಕ್ಕೆ ಉತ್ತರ ಕೊಡ್ತಾರ, ಸರ್ಕಾರದ ಗ್ಯಾರಂಟಿ ಕಾರ್ಯಕ್ರಮ ಬಿಡಿ ಇದಕ್ಕೆ ದುಡ್ಡು ಎಲ್ಲಿ ಬರುತ್ತೆ. ಕಮಿಷನ್ ದುಡ್ಡು ಹೊಡೆದ್ರೆ ಅಲ್ವಾ ಶಾಸಕರಿಗೆ ಹಣ ಬರೋದು, ಯೋಜನೆಗಳ ಹೆಸರಿನಲ್ಲು ಹಣ ಲೂಟಿ ಮಾಡೋಕೆ ನೀವು ಆದೇಶ ಕೊಡಬೇಕಲ್ವಾ ಈಗ, 40 ಪರ್ಸೆಂಟ್ ಮಾಡ್ತೀರೊ 80 ಪರ್ಸೆಂಟ್ ಮಾಡ್ತಿರೊ? ನಿಮ್ಮ ರಾಜೀವ್ ಗಾಂಧಿಯವರೇ ಹೇಳಿದ್ರಲ್ಲಾ, ಅಭಿವೃದ್ಧಿ ಕಾರ್ಯಕ್ರಮಕ್ಕೆ ಕೊಟ್ಟರೆ 85 ಪರ್ಸೆಂಟ್ ಹಣ ದುರ್ಬಳಕೆ ಆಗ್ತದೆ ಎಂದು ಹೇಳಿದ್ದರು. ಅದನ್ನು ನೀವು ಕಾರ್ಯರೂಪಕ್ಕೆ ತರ್ತೀರಾ ಸಿದ್ದರಾಮಯ್ಯನರವೇ ಎಂದು ಪ್ರಶ್ನೆ ಮಾಡಿದರು.
ನಮ್ಮ ಪಕ್ಷವನ್ನು ವಿಸರ್ಜನೆ ಮಾಡಬೇಕು, ಅಂತ್ಯ ಸಂಸ್ಕಾರ ಮಾಡಬೇಕು ಅಂತೀರಾ ನಿಮಗೆ ಕೇರ್ ಮಾಡ್ತೀನಾ? ದೇವೇಗೌಡರು ಇನ್ನೂ ಬದುಕಿದ್ದಾರೆ, ನನ್ನ ಕಾರ್ಯಕರ್ತರು ಇನ್ನೂ ಬದುಕಿದ್ದಾರೆ. ಇದಕ್ಕಿಂತ ಕೆಟ್ಟ ಅನುಭವ ನಮ್ಮ ರಾಜಕೀಯ ಜೀವನದಲ್ಲಾಗಿದೆ, ಅವತ್ತೂ ಹೆದರಿಲ್ಲ, ಇವತ್ತೂ ಹೆದರಲ್ಲಿ ಹೋರಾಟಕ್ಕೆ ತಯಾರಾಗಿದ್ದೇವೆ ಎಂದು ಹೇಳಿದರು.
ಪಾರ್ಲಿಮೆಂಟ್ ಚುನಾವಣೆ ಬಳಿಕ ದೇಶದಲ್ಲಿ ಕಾಂಗ್ರೆಸ್ ಇರಬೇಕೊ ಬೇಡವೋ ಎನ್ನುವ ನಿರ್ಧಾರ ನೀವು ಮಾಡಬೇಕಾಗುತ್ತದೆ ಎಚ್ಚರಿಕೆಯಿಂದ ಇರಿ ಎಂದು ಖಡಕ್ಕಾಗಿಯೇ ಹೇಳಿದರು.
ರಾಮನಗರದಲ್ಲಿ ಕೂಪನ್ ಹಂಚಿಕೆ ವಿಚಾರವನ್ನು ಇಲ್ಲಿಗೇ ಬಿಡಲ್ಲ ಕಾನೂನು ಹೋರಾಟ ಮಾಡುತ್ತೇವೆ. ಸಿದ್ದರಾಮಯ್ಯನವರು ಈಗ ಹಲವಾರು ತನಿಖೆಗೆ ಆದೇಶ ಮಾಡ್ತಿದ್ದಾರೆ, ಕೂಪನ್ ಹಂಚಿದ ಚುನಾವಣೆ ಕರ್ಮಕಾಂಡದ ಬಗ್ಗೆ ತನಿಖೆ ನಡೆಸ್ತೀರಾ ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನೆ ಮಾಡಿದ್ದಾರೆ.
My son Nikil lost because of Congress Money Power, Congress Coupon power has brought them victory slams Kumaraswamy.
19-09-25 09:45 am
Bangalore Correspondent
ಬೆಂಗಳೂರು ಗಬ್ಬೆದ್ದು ನಾರುತ್ತಿದೆ, ರಾಜಧಾನಿ ಈಗ ಗುಂ...
19-09-25 09:42 am
Traffic Violation, Bangalore: ರಾಜ್ಯದಲ್ಲಿ ಸಂಚಾ...
18-09-25 05:34 pm
Ksrtc Bus, Driver, Heart Attack: ಬಸ್ ಓಡಿಸುವಾಗ...
17-09-25 06:02 pm
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
18-09-25 08:14 pm
HK News Desk
ಎರಡು ಬಾರಿ ಕಚ್ಚಿದ್ರೆ ಬೀದಿ ನಾಯಿಗೆ ಜೀವಾವಧಿ ಶಿಕ್ಷ...
16-09-25 10:11 pm
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
18-09-25 11:11 pm
Mangalore Correspondent
Mangalore, UT Khader: ಹಿಂದುಳಿದ ವರ್ಗಗಳ ಆಯೋಗ ಸ್...
18-09-25 09:12 pm
ಮಾಜಿ ಸೈನಿಕರಿಗೆ ಸರ್ಕಾರಿ ಸವಲತ್ತು ನೀಡದೆ ನಿರ್ಲಕ್ಷ...
18-09-25 09:09 pm
Banglegudde, Dharmasthala, SIT: ಬಂಗ್ಲೆಗುಡ್ಡೆ...
18-09-25 07:40 pm
Ajith Kumar Rai, Mangalore: ಬಂಟ- ನಾಡವರು ಒಂದೇ,...
18-09-25 06:11 pm
18-09-25 11:44 am
HK News Desk
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm