ಸಿ.ಟಿ.ರವಿ ಅಧಿಕಾರ ಕಳೆದುಕೊಂಡು ವಿಲವಿಲ ಅಂತ ಒದ್ದಾಡುತ್ತಿದ್ದಾರೆ, ಅಧಿಕಾರ ಇದ್ದಾಗ ಭೂಮಿ ಮೇಲೆ ನಡೆಯುತ್ತಿರಲಿಲ್ಲ, ಆಕಾಶದ ಮೇಲೆ ಹಾರಾಡುತ್ತಿದ್ದರು ; ಎಚ್.ಡಿ.ತಮ್ಮಯ್ಯ ವ್ಯಂಗ್ಯ

30-05-23 06:56 pm       HK News Desk   ಕರ್ನಾಟಕ

ಸಿ.ಟಿ.ರವಿ ಅವರು ಅಧಿಕಾರ ಕಳೆದುಕೊಂಡು ವಿಲವಿಲ ಒದ್ದಾಡುತ್ತಿದ್ದಾರೆ. ಮೀನನ್ನು ನೀರಿನಿಂದ ನೀರಿನಿಂದ ಹೊರತಗೆದಂತಾಗಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ವ್ಯಂಗ್ಯವಾಡಿದರು.

ಚಿಕ್ಕಮಗಳೂರು, ಮೇ 30: ಸಿ.ಟಿ.ರವಿ ಅವರು ಅಧಿಕಾರ ಕಳೆದುಕೊಂಡು ವಿಲವಿಲ ಒದ್ದಾಡುತ್ತಿದ್ದಾರೆ. ಮೀನನ್ನು ನೀರಿನಿಂದ ನೀರಿನಿಂದ ಹೊರತಗೆದಂತಾಗಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ವ್ಯಂಗ್ಯವಾಡಿದರು.

ಮಂಗಳವಾರ ಗ್ರಾಮೀಣ ಪ್ರದೇಶಗಳ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಗ್ರಾಮಗಳಿಗೆ ತೆರಳಿದ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಿ.ಟಿ.ರವಿ ಅವರು 20ವರ್ಷದಿಂದ ಅಂಡಾ-ಬಂಡಾ ಅಧಿಕಾರದಲ್ಲಿ ಇದ್ದರು. ಈಗ ಅಧಿಕಾರ ಕಳೆದುಕೊಂಡು ವಿಲವಿಲ ಅಂತ ಒದ್ದಾಡುತ್ತಿದ್ದಾರೆ. ಅಧಿಕಾರ ಇದ್ದಾಗ ಅವರು ಭೂಮಿ ಮೇಲೆ ನಡೆಯುತ್ತಿರಲಿಲ್ಲ. ಆಕಾಶದ ಮೇಲೆ ಹಾರಾಡುತ್ತಿದ್ದರು. ಈಗ ಅಧಿಕಾರವಿಲ್ಲ ಹಾಗಾಗೀ ಅವರು ಮಾತನಾಡುತ್ತಿದ್ದಾರೆ ಎಂದರು.

ಸಿ.ಟಿ.ರವಿಯವರು ಬಹಿರಂಗ ಪತ್ರ ಬರೆದಿದ್ದಾರೆ. ನನಗೆ ಖುಷಿ ಇದೆ. ಸಾಮಾನ್ಯ ಜನರು, ಹಿಂದುಳಿದ ವರ್ಗದವರು, ದೀನ ದಲಿತರು ಬಡವರ ಬದುಕಿನ ಬಗ್ಗೆ ಅವರಿಗೆ ನೆನಪಿರಲಿಲ್ಲ. 19 ವರ್ಷ ಬಳಿಕ ಜನರ ಬದುಕಿನ ಬಗ್ಗೆ ಎಚ್ಚರವಾಗಿದ್ದಾರೆ. ಅದಕ್ಕೆ ನನಗೆ ಸಂತೋಷವಿದೆ ಎಂದು ಹೇಳಿದರು.

ನಾನು ಕಾಫಿತೋಟದ ಶ್ರೀಮಂತ ಕುಟುಂಬದಲ್ಲಿ ನಾನು ಹುಟ್ಟಿಲ್ಲ. ನಾನು ಸಾಮಾನ್ಯ ರೈತನ ಮಗನಾಗಿದ್ದು, ಜನರ ಬಗ್ಗೆ ಅವರಿಗಿಂತ ಜಾಸ್ತಿ ನನಗೆ ಕಾಳಜಿ ಇದೆ ಎಂದ ಅವರು, ಕೆಲಸ ಚೆನ್ನಾಗಿದ್ದರೇ ಯಾರೇ ಕಂಟ್ರಾಕ್ಟರ್ ಆಗಿದ್ದರೂ ನನ್ನ ತಕರಾರಿಲ್ಲ. ಕಾಮಗಾರಿ ಚೆನ್ನಾಗಿಲ್ಲ ಎಂದರೆ ಸಂಬಂಧಿಕರೇ ಆದರೂ ನಾನು ಒಪ್ಪುವುದಿಲ್ಲ. ಕಾಮಗಾರಿ ಕಳಪೆಯಾಗಿದ್ದರೇ ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ಬಿಡುವುದಿಲ್ಲ ಎಂದರು.

Chikkamagaluru H.D. Thammaiah slams C T Ravi, says he is suffering, unable to bear the victory of Congress. He was floating in the air during power and now he has fallen down he added.