ಬ್ರೇಕಿಂಗ್ ನ್ಯೂಸ್
06-06-23 05:54 pm Bangalore Correspondent ಕರ್ನಾಟಕ
ಬೆಂಗಳೂರು, ಜೂ.06: ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ವೇ ಕುಂಬಳಗೋಡು ಬಳಿಯ ಕಣಮಿಣಿಕಿ ಟೋಲ್ ಪ್ಲಾಜಾದಲ್ಲಿ ಮಳವಳ್ಳಿ ಕ್ಷೇತ್ರದ ಶಾಸಕ ನರೇಂದ್ರ ಸ್ವಾಮಿ ಅವರ ಕಾರನ್ನು ತಡೆದ ಟೋಲ್ ಸಿಬ್ಬಂದಿ, ನಿಮಗೆ ಹೈವೆಯಲ್ಲಿ ಹೋಗೋದಕ್ಕೆ ಬಿಟ್ಟಿಯಾಗಿ ಬಿಡ್ತೀವಿ. ನಾವು ಕಳಿಸಿದಾಗ ಹೋಗಬೇಕು, ಎಂದು ಅವಾಜ್ ಹಾಕಿದ್ದಾರೆ.
ಬೆಂಗಳೂರು ಮೈಸೂರು ದಶಪಥ ಹೆದ್ದಾರಿಯಲ್ಲಿ ಸಂಚಾರ ಮಾಡುವ ಶಾಸಕರು, ಸಚಿವರು, ಸಂಸದರು ಹಾಗೂ ಕೆಲವು ಜನಪ್ರತಿನಿಧಿಗಳಿಗೆ ಉಚಿತವಾಗಿ ಪ್ರಯಾಣ ಮಾಡುವ ಅವಕಾಶವಿದೆ. ಆದರೆ, ಮಳವಳ್ಳಿ ಶಾಸಕ ನರೇಂದ್ರಸ್ವಾಮಿ ಅವರು ಬೆಂಗಳೂರಿನಿಂದ ಮಳವಳ್ಳಿಗೆ ಹೋಗುವಾಗ ಬೆಂಗಳೂರು ಹೊರವಲಯದ ಕುಂಬಳಗೋಡು ಬಳಿಯ ಕಣಮಿಣಿಕಿ ಟೋಲ್ ದಾಟಿ ಹೋಗುವ ಮುನ್ನ ಶಾಸಕರ ಪಾಸ್ ಕೂಡ ತೋರಿಸಲಾಗಿದೆ. ಆದರೂ, ನಿಮ್ಮನ್ನ ಬಿಟ್ಟಿಯಾಗಿ ಹೈವೇಯಲ್ಲಿ ಹೋಗೋಕೆ ಬಿಡ್ತೀವಿ ನಾವು ಅನುಮತಿ ಕೊಟ್ಟಾಗಲೇ ನೀವು ಟೋಲ್ ದಾಟಿ ಹೋಗಬೇಕು ಎಂದು ಶಾಸಕರಿಗೆ ಅವಾಜ್ ಹಾಕಿದ್ದಾನೆ.
ಪಾಸ್ ಇದ್ದರೂ ಶಾಸಕರ ಕಾರು ತಡೆದು ನಿಲ್ಲಿಸಿದ ಸಿಬ್ಬಂದಿ:
ಬೆಂಗಳೂರು- ದಶಪಥ ಹೆದ್ದಾರಿಯಲ್ಲಿ ಟೋಲ್ ಸಿಬ್ಬಂದಿಗಳ ಕಿರಿಕ್ ಹೆಚ್ಚಾಗುತ್ತಿದೆ. ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ವೇಳೆ ಜನಸಾಮಾನ್ಯರ ಜೊತೆಗೆ ಮಾತ್ರವಲ್ಲದೇ ಈಗ ಶಾಸಕರ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ. ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ ಜೊತೆ ಭಾನುವಾರ ಸಂಜೆ ಟೋಲ್ ಸಿಬ್ಬಂದಿ ಕ್ಯಾತೆ ತೆಗೆದು ಶಾಸಕರಿಗೇ ಅವಾಜ್ ಹಾಕಿದ್ದಾರೆ. ಬೆಂಗಳೂರಿನಿಂದ ಮಳವಳ್ಳಿ ಕಡೆ ಹೋಗ್ತಿದ್ದ ಶಾಸಕ ನರೇಂದ್ರ ಸ್ವಾಮಿಗೆ ಕುಂಬಳಗೂಡು ಬಳಿಯ ಕಣಮಿಣಿಕಿ ಟೋಲ್ ಪ್ಲಾಜಾ ಸಿಬ್ಬಂದಿ ಕಾರನ್ನು ತಡೆದು ನಿಲ್ಲಿಸಿದ್ದಾರೆ. ಕಾರಿನಲ್ಲಿ ಶಾಸಕರ ವಾಹನ ಪಾಸ್ ಇದ್ರೂ, ತಡೆದು ನಿಲ್ಲಿಸಿದ್ದ ಟೋಲ್ ಸಿಬ್ಬಂದಿಗೆ ಶಾಸಕರು ಪ್ರಶ್ನೆ ಮಾಡಿದ್ದಾರೆ.
ನಾನು ನೋಡದ ಪೊಲೀಸಾ, ಯಾರು ಬರ್ತಾರೋ ಬರಲಿ:
ಈ ವೇಳೆ ಟೋಲ್ ಸಿಬ್ಬಂದಿ ಹಾಗೂ ಶಾಸಕರ ನಡುವೆ ಕೆಲಕಾಲ ವಾಗ್ವಾದ ನಡೆದಿದೆ. ಪೋಲಿಸರು ಬರಲಿ ಎಂದ ಶಾಸಕ ನರೇಂದ್ರ ಸ್ವಾಮಿ ಹೇಳಿದ್ದಕ್ಕೆ ಯಾವ ಪೋಲಿಸರು ಬೇಕಾದರೆ ಬರಲಿ, ನಾನು ನೋಡಿರದ ಪೋಲಿಸಾ ಎಂದು ಏಕವಚನದಲ್ಲೇ ಟೋಲ್ ಸಿಬ್ಬಂದಿ ಶಾಸಕರಿಗೆ ಅವಾಜ್ ಹಾಕಿದ್ದಾರೆ. ನಿಮ್ಮನ್ನ ಹೈವೆಯಲ್ಲಿ ಬಿಟ್ಟಿ, ಫ್ರೀಯಾಗಿ ಬಿಡ್ತಾ ಇದ್ದೀವಿ ಎಂದು ನೀವೂ ಬಂದ್ವಾ ಹೋದ್ವಾ ಅನ್ನೋದನ್ನು ಕಲೀಬೇಕು ಎಂದು ಶಾಸಕರಿಗೆ ಏರು ಧ್ವನಿಯಲ್ಲೇ ಟೋಲ್ ಸಿಬ್ಬಂದಿ ಅವಾಜ್ ಹಾಕಿದ್ದಾನೆ. ಜೊತೆಗೆ, ಟೋಲ್ ಸಿಬ್ಬಂದಿ ಶಾಸಕರಿಗೆ ಕೈ ತೋರಿಸುತ್ತಾ ಶಾಸಕ ನರೇಂದ್ರ ಸ್ವಾಮಿ ಜೊತೆ ಅನುಚಿತ ವರ್ತನೆ ತೋರಿದ್ದಾನೆ.
Malavalli Congress MLA PM Narendra Swamy was reportedly ill-treated by a toll plaza employee on the Bengaluru-Mysuru expressway on Sunday. The incident took place when Narendra Swamy was travelling from Mysuru to Bengaluru.
26-04-24 11:17 pm
Bangalore Correspondent
ಬಿಜೆಪಿ ತನ್ನ ಭದ್ರಕೋಟೆಯಲ್ಲೂ ಗೆದ್ದೇ ಗೆಲ್ಲುತ್ತೇವೆ...
26-04-24 09:10 pm
Madikeri, election, heart attack; ಮಡಿಕೇರಿ ; ಮ...
26-04-24 06:14 pm
Chamarajanagar, villagers, Booth: ಮತದಾನ ಬಹಿಷ್...
26-04-24 04:53 pm
ಚಿತ್ರದುರ್ಗ ; ಲೋ ಬಿಪಿಯಿಂದ ಅಸ್ವಸ್ಥ , ಮತಗಟ್ಟೆಯಲ್...
26-04-24 03:04 pm
26-04-24 02:58 pm
HK News Desk
Road Accident In Telangana: ಹಾಳಾಗಿ ನಿಂತಿದ್ದ ಲ...
25-04-24 03:49 pm
Groom electrocuted in Rajasthan: ರೆಸಾರ್ಟ್ ನಲ್...
24-04-24 05:01 pm
Pm Modi, Muslims: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ...
22-04-24 10:37 pm
ಮದುವೆ ಮುಗಿಸಿ ವಾಪಾಸ್ ಆಗುವ ವೇಳೆ ಭೀಕರ ಅಪಘಾತ ; ಓ...
21-04-24 03:23 pm
26-04-24 10:45 pm
Mangalore Correspondent
Mangalore Voting, Election 2024; ದಕ್ಷಿಣ ಕನ್ನಡ...
26-04-24 10:32 pm
Karkala, Horse ride to cast his vote: ಕಾರ್ಕಳ...
26-04-24 09:28 pm
ಸುಳ್ಯ ; 18 ನಕ್ಸಲ್ ಪೀಡಿತ ಮತಗಟ್ಟೆಗಳಲ್ಲಿ ಶಸ್ತ್ರಸ...
26-04-24 08:42 pm
Mangalore live voting percentage: ದಕ್ಷಿಣ ಕನ್ನ...
26-04-24 05:56 pm
26-04-24 03:59 pm
Mangalore Correspondent
Mangalore Fraud, crime, Krishnaprasad Shetty:...
25-04-24 10:18 pm
Bangalore crime, Dacoity gang, 40 lakhs, robb...
25-04-24 03:33 pm
Gang raped in Bengaluru: ಬೆಂಗಳೂರಿನಲ್ಲಿ ಯುವತಿ...
25-04-24 12:19 pm
Glide touist bus, Mangalore, crime: ಬೆಂಗಳೂರು...
24-04-24 10:48 pm