ಬ್ರೇಕಿಂಗ್ ನ್ಯೂಸ್
06-06-23 10:38 pm Bangalore Correspondent ಕರ್ನಾಟಕ
ಬೆಂಗಳೂರು, ಜೂನ್ 6: ಪಕ್ಷದ 13 ಮಂದಿ ಸಂಸದರ ವಿರುದ್ಧ ವ್ಯವಸ್ಥಿತ ರೀತಿಯ ಅಪಪ್ರಚಾರ ನಡೆದಿದೆ. ನಮಗೆಲ್ಲ ವಯಸ್ಸಾಗಿದೆ, ಅನಾರೋಗ್ಯದ ಕಾರಣ ನೀಡಿ ಟಿಕೆಟ್ ನಿರಾಕರಣೆಯ ಸುದ್ದಿ ಹಬ್ಬಿಸಲಾಗುತ್ತಿದೆ. ಇದಕ್ಕೆಲ್ಲ ರಾಷ್ಟ್ರೀಯ ನಾಯಕರು ತೆರೆ ಎಳೆಯಬೇಕಾಗಿದೆ ಎಂದು ಸಂಸದ, ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಹೇಳಿದ್ದಾರೆ.
ಲೋಕಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿಯಿದೆ. ಇದರ ನಡುವಲ್ಲೇ ಚುನಾವಣೆ ಸೋಲಿನ ನೆಪದಲ್ಲಿ ನಾಯಕರ ಮನೋ ಸ್ಥೈರ್ಯವನ್ನು ಕುಗ್ಗಿಸುವ ಯತ್ನ ನಡೆದಿದೆ. ಪಕ್ಷದ ನಾಯಕರನ್ನು ನಿರ್ವೀರ್ಯಗೊಳಿಸುವ ಪ್ರಯತ್ನ ನಡೆದಿದೆ. ಈ ಬಗ್ಗೆ ರಾಷ್ಟ್ರೀಯ ನಾಯಕರು ಸ್ಪಷ್ಟನೆ ನೀಡಬೇಕಾಗಿದೆ ಎಂದರು.
ಈ ರೀತಿಯ ಸುದ್ದಿಯನ್ನು ಯಾರು ಹರಿಯಬಿಟ್ಟಿದ್ದಾರೋ ಗೊತ್ತಿಲ್ಲ. ಪಕ್ಷದ 25 ಸಂಸದರ ಪೈಕಿ 13 ಮಂದಿ ಕೆಲಸವನ್ನೇ ಮಾಡಿಲ್ಲ. ಮುದುಕರಾಗಿದ್ದಾರೆ. ಈ ಬಾರಿ ಟಿಕೆಟ್ ಸಿಗುವುದಿಲ್ಲ ಎಂದು ವ್ಯಾಖ್ಯಾನಿಸಲಾಗುತ್ತಿದೆ. ನಾವೆಲ್ಲ ಜನರಿಂದ ಗೆದ್ದು ಬಂದವರು. ಈ ಗೊಂದಲಗಳಿಗೆ ಸ್ಪಷ್ಟನೆ ನೀಡಬೇಕಾದವರು ಮಾತನಾಡುತ್ತಿಲ್ಲ. ಹೀಗಾದಲ್ಲಿ ಬೇರೆ ರೀತಿಯ ಸಂದೇಶ ಹೋಗುತ್ತದೆ ಎಂದರು. ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನಿರೀಕ್ಷಿತ. ಕಾಂಗ್ರೆಸಿಗೆ ರಾಜ್ಯದ ಜನತೆ ಜನಾದೇಶ ನೀಡಿದ್ದಾರೆ. ನಾವು ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಹಿಂದೆಲ್ಲ ಆತ್ಮಾವಲೋಕನ ನಡೆಯುತ್ತಿತ್ತು. ಈಗೆಲ್ಲ ಆತ್ಮಾವಲೋಕನ ಮಾಡಲು ಆತ್ಮಗಳೇ ಇಲ್ಲದಾಗಿವ ಎಂದು ಮಾರ್ಮಿಕವಾಗಿ ನುಡಿದರು.
ಸೋಲು ಹೊಸದಲ್ಲ. ಹಿಂದೆ ವಾಜಪೇಯವರು ಕೂಡ ಚುನಾವಣೆ ಸೋತಿದ್ದಾರೆ. ಆನಂತರ ಗೆದ್ದು ಬಂದಿದ್ದಾರೆ. ಕಾರ್ಯಕರ್ತರು ಧೃತಿಗೆಡಬೇಕಾಗಿಲ್ಲ. ತಾತ್ಕಾಲಿಕ ಹಿನ್ನಡೆಯಾಗಿದೆ. ಕಾರ್ಯಕರ್ತರ ಮನೋಬಲ ಕುಸಿಯದಂತೆ ನಾಯಕರು ನೋಡಿಕೊಳ್ಳಬೇಕಾಗಿದೆ ಎಂದು ಡಿವಿ ಹೇಳಿದ್ದಾರೆ.
Taking exception to reports in a section of the media that 13 incumbent MPs of the BJP may not get the ticket this time, the former Chief Minister D.V. Sadananda Gowda has urged the party’s State and central leadership to intervene and counter such reports. Addressing a press conference here on Tuesday, a visibly upset Mr. Gowda wondered, “How do these media persons know that the party is not giving the ticket to 13 MPs? Are they party spokespersons?”
19-04-24 11:17 pm
HK NEWS
Actress Priya Savadi, Hubballi Neha Murder: ಅ...
19-04-24 07:58 pm
Hubbali Neha Murder, CM Siddaramaiah: ವೈಯಕ್ತಿ...
19-04-24 04:27 pm
Hubballi Murder Neha, Parameshwar: ಹುಬ್ಬಳ್ಳಿ...
19-04-24 04:08 pm
ಶಿವಮೊಗ್ಗ ಸಂಸದ ರಾಘವೇಂದ್ರ 73 ಕೋಟಿ ಆಸ್ತಿ ; ಪತ್ನಿ...
19-04-24 01:41 pm
17-04-24 08:42 pm
HK News Desk
Gujarat, Road Accident: ನಿಂತಿದ್ದ ಟ್ರಕ್ಗೆ ಗುದ...
17-04-24 07:07 pm
Dubai, Oman Rain, flood; ಧಾರಾಕಾರ ಮಳೆಗೆ ಕೊಚ್ಚಿ...
17-04-24 12:53 pm
29 Naxalites killed in Kanker encounter, Chha...
16-04-24 07:50 pm
ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ ; ಏಳು ಮಂದಿ ದುರ್...
16-04-24 05:09 pm
19-04-24 10:11 pm
Mangalore Correspondent
Mangalore accident, Kulur: ಕೋಡಿಕಲ್ ಕ್ರಾಸ್ ನಲ್...
19-04-24 09:55 pm
Mangalore election, 144 section: ಲೋಕಸಭೆ ಚುನಾವ...
19-04-24 08:32 pm
Kalakul, diploma course: ಕಲಾಕುಲ್ ನಾಟಕ ತಂಡದಿಂದ...
19-04-24 05:18 pm
Congress MP Padmaraj, Bantwal: ಬಂಟ್ವಾಳ ಕ್ಷೇತ್...
19-04-24 02:30 pm
19-04-24 10:25 pm
Mangalore Correspondent
Mangalore Acid Attack, EXAM: ಆ್ಯಸಿಡ್ ದಾಳಿಗೀಡಾ...
19-04-24 09:25 pm
Hubballi student Neha murder: ಹುಬ್ಬಳ್ಳಿ ಕಾಲೇ...
19-04-24 03:43 pm
Gadag Murder news, four killed; ನಗರ ಸಭೆ ಉಪಾಧ್...
19-04-24 09:27 am
Bangalore Double Murder: 'ಕರಿಮಣಿ ಮಾಲೀಕ'ನಿಗೆ ತ...
18-04-24 10:03 pm