Dinesh Gundu Rao, Dinesh Gundu Rao: ಡಿಕೆಶಿಗೆ ಬೆಂಗಳೂರು ಹೊಣೆ ; ದ. ಕನ್ನಡಕ್ಕೆ ದಿನೇಶ್ ಗುಂಡೂರಾವ್, ಉಡುಪಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಉಸ್ತುವಾರಿ, ಮಧುಗೆ ಶಿವಮೊಗ್ಗ ಜವಾಬ್ದಾರಿ

09-06-23 04:39 pm       Bangalore Correspondent   ಕರ್ನಾಟಕ

ಮುಖ್ಯಮಂತ್ರಿ ಸಿದ್ದರಾಮಯ್ಯ ವಿವಿಧ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನು ನೇಮಕ ಮಾಡಿದ್ದಾರೆ. ಬೆಂಗಳೂರು ನಗರ ಉಸ್ತುವಾರಿಯನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಹಿಸಿಕೊಂಡಿದ್ದಾರೆ.

ಬೆಂಗಳೂರು, ಜೂನ್ 9: ಮುಖ್ಯಮಂತ್ರಿ ಸಿದ್ದರಾಮಯ್ಯ ವಿವಿಧ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನು ನೇಮಕ ಮಾಡಿದ್ದಾರೆ. ಬೆಂಗಳೂರು ನಗರ ಉಸ್ತುವಾರಿಯನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಹಿಸಿಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಉಡುಪಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಉಸ್ತುವಾರಿ ಆಗಿ ನೇಮಕಗೊಂಡಿದ್ದಾರೆ. ಕಂದಾಯ ಸಚಿವ ಕೃಷ್ಣ ಭೈರೇಗೌಡ ಹಾಗೂ ಪೌರಾಡಳಿತ ಸಚಿವ ಬೀದರಿನ ರಹೀಮ್ ಖಾನ್ ಅವರಿಗೆ ಯಾವುದೇ ಜಿಲ್ಲೆಯ ಉಸ್ತುವಾರಿ ನೀಡಿಲ್ಲ. 

ಯಾವ ಜಿಲ್ಲೆಗೆ ಯಾರು ಉಸ್ತುವಾರಿ? 

ಡಿ.ಕೆ.ಶಿವಕುಮಾರ್‌ – ಬೆಂಗಳೂರು ನಗರ
ಡಾ. ಜಿ.ಪರಮೇಶ್ವರ – ತುಮಕೂರು
ಹೆಚ್‌.ಕೆ.ಪಾಟೀಲ – ಗದಗ
ಕೆ.ಹೆಚ್‌.ಮುನಿಯಪ್ಪ – ಬೆಂಗಳೂರು ಗ್ರಾಮಾಂತರ
ರಾಮಲಿಂಗಾ ರೆಡ್ಡಿ – ರಾಮನಗರ
ಕೆ.ಜೆ.ಜಾರ್ಜ್‌ – ಚಿಕ್ಕಮಗಳೂರು
ಎಂ.ಬಿ.ಪಾಟೀಲ – ವಿಜಯಪುರ
ದಿನೇಶ್‌ ಗುಂಡೂರಾವ್‌ – ದಕ್ಷಿಣ ಕನ್ನಡ
ಹೆಚ್‌.ಸಿ.ಮಹಾದೇವಪ್ಪ – ಮೈಸೂರು
ಸತೀಶ್‌ ಜಾರಕಿಹೊಳಿ – ಬೆಳಗಾವಿ
ಪ್ರಿಯಾಂಕ್‌ ಖರ್ಗೆ – ಕಲಬುರಗಿ
ಶಿವಾನಂದ ಪಾಟೀಲ – ಹಾವೇರಿ
ಜಮೀರ್‌ ಅಹ್ಮದ್‌ – ವಿಜಯನಗರ
ಶರಣ ಬಸಪ್ಪ ದರ್ಶನಾಪುರ್‌ – ಯಾದಗಿರಿ
ಈಶ್ವರ್‌ ಖಂಡ್ರೆ – ಬೀದರ್‌
ಎನ್.ಚಲುವರಾಯಸ್ವಾಮಿ – ಮಂಡ್ಯ
ಎಸ್.ಎಸ್‌.ಮಲ್ಲಿಕಾರ್ಜುನ – ದಾವಣಗೆರೆ
ಸಂತೋಷ್‌ ಲಾಡ್‌ – ಧಾರವಾಡ
ಶರಣ ಪ್ರಕಾಶ್‌ ಪಾಟೀಲ್‌ – ರಾಯಚೂರು
ಆರ್‌.ಬಿ.ತಿಮ್ಮಾಪೂರ – ಬಾಗಲಕೋಟೆ
ಕೆ.ವೆಂಕಟೇಶ್‌ – ಚಾಮರಾಜನಗರ
ತಂಗಡಗಿ ಶಿವರಾಜ್‌ ಸಂಗಪ್ಪ – ಕೊಪ್ಪಳ
ಡಿ.ಸುಧಾಕರ್‌ – ಚಿತ್ರದುರ್ಗ
ಬಿ.ನಾಗೇಂದ್ರ – ಬಳ್ಳಾರಿ
ಕೆ.ಎನ್.ರಾಜಣ್ಣ – ಹಾಸನ
ಬಿ.ಎಸ್‌.ಸುರೇಶ್‌ – ಕೋಲಾರ
ಲಕ್ಷ್ಮಿ ಹೆಬ್ಬಾಳ್ಕರ್‌ – ಉಡುಪಿ
ಮಂಕಾಳ್‌ ವೈದ್ಯ – ಉತ್ತರ ಕನ್ನಡ
ಮಧು ಬಂಗಾರಪ್ಪ – ಶಿವಮೊಗ್ಗ
ಡಾ. ಎಂ.ಸಿ.ಸುಧಾಕರ್‌ – ಚಿಕ್ಕಬಳ್ಳಾಪುರ
ಎನ್.ಎಸ್‌.ಭೋಸರಾಜು – ಕೊಡಗು

The Karnataka government announced the district-in-charge ministers on Friday, June 9. Dinesh Gundu Rao been appointed as the district in-charge minister of Dakshina Kannada (DK) while Laxmi Hebbalkar is given the in-charge of Udupi district.