ಗೋಕಾಕ; ಮದುವೆಗಾಗಿ ಊರಿಗೆ ಬರುತ್ತಿದ್ದ ಯೋಧ ಆಕಸ್ಮಿಕವಾಗಿ ರೈಲಿನಿಂದ ಬಿದ್ದು ಸಾವು !

11-06-23 01:15 pm       HK News Desk   ಕರ್ನಾಟಕ

ರೈಲಿನಿಂದ ಬಿದ್ದು ಯೋಧ ಸಾವು ತಮ್ಮ ಮದುವೆಗಾಗಿ ಊರಿಗೆ ಬರುತ್ತಿದ್ದ ಯೋಧರೊಬ್ಬರು ಮಾರ್ಗ ಮಧ್ಯೆ ರೈಲಿನಿಂದ ಬಿದ್ದು ಮೃತಪಟ್ಟಿದ್ದು, ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಬೆಳಗಾವಿ, ಜೂನ್ 11: ರೈಲಿನಿಂದ ಬಿದ್ದು ಯೋಧ ಸಾವು ತಮ್ಮ ಮದುವೆಗಾಗಿ ಊರಿಗೆ ಬರುತ್ತಿದ್ದ ಯೋಧರೊಬ್ಬರು ಮಾರ್ಗ ಮಧ್ಯೆ ರೈಲಿನಿಂದ ಬಿದ್ದು ಮೃತಪಟ್ಟಿದ್ದು, ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕನಸಗೇರಿ ಗ್ರಾಮದ ನಿವಾಸಿ ಕಾಶಿನಾಥ ಶಿಂಧಿಗಾರ (28) ಮೃತ ಯೋಧ. ಪಂಜಾಬ್‌ನಿಂದ ಸ್ವಗ್ರಾಮಕ್ಕೆ ರೈಲಿನಲ್ಲಿ ಬರುತ್ತಿದ್ದಾಗ ಲುಧಿಯಾನ ಬಳಿ ಆಕಸ್ಮಿಕವಾಗಿ ರೈಲಿನಿಂದ ಕೆಳಗೆ ಬಿದ್ದು ಅವರು ಮೃತಪಟ್ಟಿದ್ದಾರೆ. 8 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕಾಶಿನಾಥ ಅವರ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮ ಮೇ ತಿಂಗಳಲ್ಲಿ ನಡೆದಿತ್ತು.

ಅಂತಿಮ ನಮನ:

ಗ್ರಾಮದಲ್ಲಿ ಯೋಧನ ಪಾರ್ಥಿವ ಶರೀರದ ಮೆರವಣಿಗೆ ನಡೆಸಿ ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಯೋಧನ ಸಾವಿನಿಂದ ಕುಟುಂಬದ ಸದಸ್ಯರ ರೋಧನ ಮುಗಿಲು ಮುಟ್ಟಿದ್ದು, ಕನಸಗೇರಿ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

An armyman who was to get married in eight days and was returning to his native village, died after he slipped from the train he was travelling in. The deceased has been identified as Kashinath Shindigar (28).