ಬೆಂಗಳೂರು ; ಪೀಣ್ಯ ಸಬ್​ ಇನ್ಸ್​ಪೆಕ್ಟರ್​ ಗೆ ಕಾಲಲ್ಲಿ ಒದ್ದು ಆರೋಪಿ ಪರಾರಿ 

14-06-23 03:13 pm       Bangalore Correspondent   ಕರ್ನಾಟಕ

ಪೊಲೀಸ್​ ಠಾಣೆಯಲ್ಲೇ ಸಬ್​ ಇನ್ಸ್​ಪೆಕ್ಟರ್​ ಮೇಲೆ ಆರೋಪಿಯೊಬ್ಬ ದಾಳಿ ಮಾಡಿರುವ ಆತಂಕಕಾರಿ ಘಟನೆ ಪೀಣ್ಯ ಠಾಣೆಯಲ್ಲಿ ನಡೆದಿದೆ.

ಬೆಂಗಳೂರು, ಜೂನ್ 14: ಪೊಲೀಸ್​ ಠಾಣೆಯಲ್ಲೇ ಸಬ್​ ಇನ್ಸ್​ಪೆಕ್ಟರ್​ ಮೇಲೆ ಆರೋಪಿಯೊಬ್ಬ ದಾಳಿ ಮಾಡಿರುವ ಆತಂಕಕಾರಿ ಘಟನೆ ಪೀಣ್ಯ ಠಾಣೆಯಲ್ಲಿ ನಡೆದಿದೆ.

ಸಿದ್ದು ಹೂಗಾರ ದಾಳಿಗೆ ಒಳಗಾದ ಸಬ್​ ಇನ್ಸ್​​ಪೆಕ್ಟರ್​. ಪೊಲೀಸ್ ಠಾಣೆಯ ಬಾಗಿಲಲ್ಲೇ ಕಾಲಲ್ಲಿ ಒದ್ದು ಎಸ್​ಐ ಮೇಲೆ ಹಲ್ಲೆ ಮಾಡಲಾಗಿದೆ. ಈ ಘಟನೆ ಇಂದು ಬೆಳಗ್ಗೆ ಪೀಣ್ಯ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಬಸ್​ ನಿಲ್ಲಿಸುವ ಸಂಬಂಧ ಗಲಾಟೆ ಶುರುವಾಗಿತ್ತು. ಗಲಾಟೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆತಲಾಗಿತ್ತು. ಈ ವೇಳೆ ಠಾಣೆಯಲ್ಲೆ ಎಸ್​ಐ ಮೇಲೆ ಹಲ್ಲೆ ಮಾಡಿ ಆರೋಪಿ ಪರಾರಿಯಾಗಿದ್ದಾನೆ

ಗಾಯಗೊಂಡಿರುವ ಎಸ್​ಐ ಸಿದ್ದು ಹೂಗಾರ್​ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆಯ ಬೆನ್ನಲ್ಲೇ ಹಿರಿಯ ಪೊಲೀಸ್ ಅಧಿಕಾರಿಗಳು ಪೀಣ್ಯ ಠಾಣೆಗೆ ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ ಮತ್ತು ಎಸ್​ಐ ಆರೋಗ್ಯವನ್ನು ವಿಚಾರಿಸಿದ್ದಾರೆ.

ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತನ ಪತ್ತೆಗೆ ಬೆಂಗಳೂರು ಪೊಲೀಸರು ಬಲೆ ಬೀಸಿದ್ದಾರೆ.

Peenya Police Sub Inspector attacked by accused, escaped from Station in Bangalore. Sub inspector has been admitted to hospital. Seaech for accused is on