ಸಿದ್ದರಾಮಯ್ಯ ಮತಾಂತರ ಭಾಗ್ಯ, ಇನ್ನು ಮಹದೇವಪ್ಪನೂ ಕನ್ವರ್ಟ್, ಕಾಕಪಾಟೀಲನೂ ಕನ್ವರ್ಟ್ ; ಯತ್ನಾಳ್ ವ್ಯಂಗ್ಯ 

15-06-23 10:45 pm       Bangalore Correspondent   ಕರ್ನಾಟಕ

ಮತಾಂತರ ನಿಷೇಧ ಕಾಯ್ದೆ ರದ್ದು ನಿರ್ಣಯದ ವಿರುದ್ಧ ಕಿಡಿಕಾರಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ಇದು ಸಿದ್ದರಾಮಯ್ಯನವರ ಮತಾಂತರ ಭಾಗ್ಯ, ಇನ್ಮುಂದೆ ಮಹದೇವಪ್ಪನೂ ಕನ್ವರ್ಟ್‌, ಕಾಕಾ ಪಾಟೀಲನೂ ಕನ್ವರ್ಟ್‌ ಎಂದು ವ್ಯಂಗ್ಯವಾಡಿದ್ದಾರೆ.

ಬೆಂಗಳೂರು, ಜೂನ್ 15:  ಮತಾಂತರ ನಿಷೇಧ ಕಾಯ್ದೆ ರದ್ದು ನಿರ್ಣಯದ ವಿರುದ್ಧ ಕಿಡಿಕಾರಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ಇದು ಸಿದ್ದರಾಮಯ್ಯನವರ ಮತಾಂತರ ಭಾಗ್ಯ, ಇನ್ಮುಂದೆ ಮಹದೇವಪ್ಪನೂ ಕನ್ವರ್ಟ್‌, ಕಾಕಾ ಪಾಟೀಲನೂ ಕನ್ವರ್ಟ್‌ ಎಂದು ವ್ಯಂಗ್ಯವಾಡಿದ್ದಾರೆ.
 
ಈ ಬಗ್ಗೆ ಟ್ವೀಟ್ ಮಾಡಿರುವ ಪಾಟೀಲ್, ಆಮಿಷದ ಮತಾಂತರಕ್ಕೆ ಬೆಂಬಲ ನೀಡಲು ಸಿದ್ದರಾಮಯ್ಯನವರು ಸಜ್ಜಾಗಿದ್ದಾರೆ. ಇದು ಸಿದ್ದರಾಮಯ್ಯನವರ ಮತಾಂತರ ಭಾಗ್ಯ. ಇನ್ಮುಂದೆ ಮಹದೇವಪ್ಪನೂ ಮತಾಂತರ, ಕಾಕಾ ಪಾಟೀಲನೂ ಮತಾಂತರ ಎಂದು ಕಿಡಿಕಾರಿದ್ದಾರೆ.

Siddaramaiah interview: HDK was responsible for coalition govt's fall in  2021 | Latest News India - Hindustan Times

ಮತಾಂತರ ನಿಷೇಧ ಕಾಯ್ದೆಯನ್ನು ಹಿಂಪಡೆಯುವುದರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಿಂದೂ ವಿರೋಧಿ ನಿಲುವನ್ನು ಮತ್ತೆ ಕಾಂಗ್ರೆಸ್ ಸರ್ಕಾರ ಅನುಸರಿಸಿದೆ. ಆಮಿಷದ ಮತಾಂತರವನ್ನು ನಿರ್ಬಂಧಿಸುವ ಮತಾಂತರ ನಿಷೇಧ ಕಾಯ್ದೆಯನ್ನು ಹಿಂಪಡೆಯುವುದು "ಹಿಂದೂ" ಸಮಾಜವನ್ನು ಮತಾಂತರಗೊಳಿಸುವವರಿಗೆ ಬೆಂಬಲ ನೀಡಿದಂತೆ ಅಲ್ಲವೇ? ಯಾವ "ಮಾಫಿಯಾ" ಈ ಮತಾಂತರ ನಿಷೇಧ ಕಾಯ್ದೆಯನ್ನು ವಾಪಸ್ ಪಡೆಯಲು ಒತ್ತಡ ಹೇರಿದೆ ಎಂದು ಯತ್ನಾಳ್‌ ಪ್ರಶ್ನಿಸಿದ್ದಾರೆ.

ಅದಲ್ಲದೇ, ರಾಹುಲ್‌ ಗಾಂಧಿಯವರೇ ಪ್ರೀತಿಯ ಅಂಗಡಿ ಅಂದ್ರೇ ಇದೇನಾ? ಸಿದ್ದರಾಮಯ್ಯನವರ ಹಿಂದೂ ವಿರೋಧಿ ನಿಲುವು ಬಹಿರಂಗವಾಗಿದೆ. ನಿಮಗೆ ಹಿಂದೂ ಸಮುದಾಯ ನಾಶವಾಗಬೇಕಾ? ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಮತಾಂತರ ನಿಷೇಧ ಕಾಯ್ದೆಯನ್ನು ಹಿಂಪಡೆಯಲು ಮತಾಂತರ ಮಾಫಿಯಾ ಸಿದ್ದರಾಮಯ್ಯ ಮತ್ತು ಅವರ ಸಚಿವ ಸಂಪುಟವನ್ನು ಪ್ರಭಾವಿಸಿದೆ ಎಂದು ಕಿಡಿಕಾರಿದ್ದಾರೆ.

The Siddaramaiah-led Congress government has decided to withdraw the Prohibition of Conversion Act brought by the BJP government. BJP MLA Basanagowda Patil Yatnal of Vijaypura has criticized this decision of the state government and quipped that this is Siddaramaiah's conversion luck, henceforth Mahadevappa will convert and Kaka Patil will also convert.