ಆಗುಂಬೆ ಘಾಟ್ ನಲ್ಲಿ ಬೈಕ್‌ - ಬಸ್‌ ಮುಖಾಮುಖಿ ಢಿಕ್ಕಿ ; ಉಡುಪಿ  ಮೂಲದ ಯುವಕ ಸ್ಥಳದಲ್ಲೇ ಸಾವು, ಯುವತಿ ಪಾರು 

18-06-23 10:25 pm       HK News Desk   ಕರ್ನಾಟಕ

ಬೈಕ್‌ ಮತ್ತು ಬಸ್‌ ಮುಖಾಮುಖಿ ಢಿಕ್ಕಿಯಾಗಿ ಯುವಕ ಸ್ಥಳದಲ್ಲೆ ಸಾವನ್ನಪ್ಪಿದ್ದು, ಯುವತಿ ಗಂಭೀರವಾಗಿ ಗಾಯಗೊಂಡಿದ್ದ ಘಟನೆ ಭಾನುವಾರ ಆಗುಂಬೆ ಘಾಟಿಯ ಹನ್ನೆರಡನೇ ತಿರುವಿನಲ್ಲಿ ನಡೆದಿದೆ.

ತೀರ್ಥಹಳ್ಳಿ, ಜೂನ್ 18: ಬೈಕ್‌ ಮತ್ತು ಬಸ್‌ ಮುಖಾಮುಖಿ ಢಿಕ್ಕಿಯಾಗಿ ಯುವಕ ಸ್ಥಳದಲ್ಲೆ ಸಾವನ್ನಪ್ಪಿದ್ದು, ಯುವತಿ ಗಂಭೀರವಾಗಿ ಗಾಯಗೊಂಡಿದ್ದ ಘಟನೆ ಭಾನುವಾರ ಆಗುಂಬೆ ಘಾಟಿಯ ಹನ್ನೆರಡನೇ ತಿರುವಿನಲ್ಲಿ ನಡೆದಿದೆ.

ಉಡುಪಿ ಜಿಲ್ಲೆ ಬಾರ್ಕೂರು ಮೂಲದ ಶಶಾಂಕ್‌ 28 ಮೃತ ಯುವಕ. ನಿರ್ಮಿತಾ ಎಂಬಾಕೆಗೆ ಗಂಭೀರ ಗಾಯವಾಗಿದೆ.

ತೀರ್ಥಹಳ್ಳಿಯಿಂದ ಉಡುಪಿಗೆ ಶಶಾಂಕ್‌ ಮತ್ತು ನಿರ್ಮಿತಾ ಬೈಕಿನಲ್ಲಿ ತೆರಳುತ್ತಿದ್ದರು. ಖಾಸಗಿ ಬಸ್‌ ಮಂಗಳೂರಿನಿಂದ ಉಡುಪಿ ಮಾರ್ಗವಾಗಿ ಶಿವಮೊಗ್ಗಕ್ಕೆ ತೆರಳುತ್ತಿತ್ತು. ಆಗುಂಬೆ ಘಾಟಿಯ 12ನೇ ತಿರುವಿನಲ್ಲಿ ಅಪಘಾತವಾಗಿದೆ. ಹೆಬ್ರಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

A bike rider lost his life on the spot and the pillion rider was injured critically when a bus collided with the two-wheeler on the 12th turn on the Agumbe Ghat between the Udupi-Shivamoogga border on June 18.