ಕಾಂಗ್ರೆಸ್ ಗಾಳಿ ಸೋಕಿದ್ದರಿಂದ ಬಿಜೆಪಿಯಲ್ಲಿ ಶಿಸ್ತು ಹೋಗಿದೆ, ಆಪರೇಶನ್ ಕಮಲ ಮಾಡಿದ್ದೇ ಸೋಲಿಗೆ ಕಾರಣ ; ಈಶ್ವರಪ್ಪ 

26-06-23 04:30 pm       HK News Desk   ಕರ್ನಾಟಕ

ಬಿಜೆಪಿ ಪಕ್ಷದಲ್ಲಿ ಅಲ್ಲಲ್ಲಿ ಸ್ವಲ್ಪ ಶಿಸ್ತು ಕಳೆದು ಹೋಗಿದೆ. ಕಾಂಗ್ರೆಸ್ ಗಾಳಿ ಸೋಕಿರುವುದರಿಂದ ನಮ್ಮಲ್ಲಿ ಶಿಸ್ತು ಕಳೆದು ಹೋಗಿದೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.

ಹುಬ್ಬಳ್ಳಿ, ಜೂನ್ 26: ಬಿಜೆಪಿ ಪಕ್ಷದಲ್ಲಿ ಅಲ್ಲಲ್ಲಿ ಸ್ವಲ್ಪ ಶಿಸ್ತು ಕಳೆದು ಹೋಗಿದೆ. ಕಾಂಗ್ರೆಸ್ ಗಾಳಿ ಸೋಕಿರುವುದರಿಂದ ನಮ್ಮಲ್ಲಿ ಶಿಸ್ತು ಕಳೆದು ಹೋಗಿದೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ. 

ಬಹಿರಂಗವಾಗಿ ಅಡ್ಜಸ್ಟ್ ಮೆಂಟ್ ರಾಜಕಾರಣದ ಬಗ್ಗೆ ಚರ್ಚೆ ಆಗ್ತಿರೋದು ದುರ್ದೈವ. ಯಾರು ಕೂಡ ಬಹಿರಂಗವಾಗಿ ಹೀಗೆ ಮಾತಾಡಬಾರದು. ಇದು ನಾಲ್ಕು ಗೋಡೆ ಮಧ್ಯೆ ಮಾತನಾಡೋ ವಿಷಯ. ನಾನು ಅಧ್ಯಕ್ಷರಿಗೆ ಮನವಿ ಮಾಡಿದ್ದೇನೆ, ನಿನ್ನೆಯ ಪ್ರಕರಣ ಇರಬಹುದು, ಯಾವುದೇ ಪ್ರಕರಣ ಇರಬಹುದು. ಕರ್ನಾಟಕ ರಾಜಕಾರಣದ ಇತಿಹಾಸದಲ್ಲಿ ಈ ರೀತಿ ನಡೆದಿಲ್ಲ. ಬಹಿರಂಗ ಹೇಳಿಕೆ ಕೊಡುವ ಬಗ್ಗೆ ಪಕ್ಷದ ನಾಯಕರ ಜೊತೆ ನಾನು ಮಾತನಾಡುತ್ತೇನೆ ಎಂದಿದ್ದಾರೆ. 

ಬಿಜೆಪಿಯಲ್ಲಿ ಶಿಸ್ತು ಹೋಗಿದ್ದಕ್ಕೆ ಕಾಂಗ್ರೆಸ್ ಗಾಳಿ ಸೋಕಿದ್ದೇ ಕಾರಣ. ಕಾಂಗ್ರೆಸ್ ನಾಯಕರನ್ನು ಕರೆದುಕೊಂಡು ಬಂದಿದ್ದಕ್ಕೆ ನಾವು ಅನುಭವಿಸ್ತೀದಿವಿ ಎಂದು ಪರೋಕ್ಷವಾಗಿ ಆಪರೇಶನ್ ಕಮಲದ ವಿರುದ್ಧ ಈಶ್ವರಪ್ಪ ಗರಂ ಆಗಿದ್ದಾರೆ. ಆಪರೇಶನ್ ಕಮಲವೇ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಮುಳುವಾಯ್ತು. ಕಾಂಗ್ರೆಸ್ ನಾಯಕರು ಬಂದ ಮೇಲೆ ಬಿಜೆಪಿಯಲ್ಲಿ ಶಿಸ್ತಿಗೆ ಧಕ್ಕೆಯಾಗಿದೆ. ಮುಂದೆ ನಮ್ಮ ನಾಯಕರು ಇಂಥದ್ದಕ್ಕೆಲ್ಲ ಬಾಲ ಕಟ್ ಮಾಡಿಸ್ತಾರೆ ಎಂದರು ಈಶ್ವರಪ್ಪ.

With statements from some Karnataka BJP leaders that “adjustment politics” contributed to the party’s rout in the Assembly elections sparking off a political debate, veteran leader K S Eshwarappa on Monday expressed displeasure about party discipline being “flouted”, and urged the state president to take necessary steps to curb it.