ವೃತ್ತಿ ದುರ್ನಡತೆ ; ಮಂಗಳೂರು, ಬೆಳಗಾವಿಯ ಇಬ್ಬರು ವಕೀಲರ ಲೈಸನ್ಸ್ ರದ್ದು 

28-06-23 09:45 pm       Bangalore Correspondent   ಕರ್ನಾಟಕ

ವೃತ್ತಿ ದುರ್ನಡತೆ ತೋರಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ (ಕೆಎಸ್‌ಬಿಸಿ) ಇಬ್ಬರು ವಕೀಲರ ಪರವಾನಗಿ ರದ್ದುಗೊಳಿಸಿದೆ.

ಬೆಂಗಳೂರು, ಜೂನ್ 28: ವೃತ್ತಿ ದುರ್ನಡತೆ ತೋರಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ (ಕೆಎಸ್‌ಬಿಸಿ) ಇಬ್ಬರು ವಕೀಲರ ಪರವಾನಗಿ ರದ್ದುಗೊಳಿಸಿದೆ.

ಮಂಗಳೂರಿನ ವಕೀಲ ಡಿ.ಪದ್ಮನಾಭ ಕುಮಾರ್ ಅವರ ಸನ್ನದು ರದ್ದುಪಡಿಸಲಾಗಿದ್ದು, ದೇಶದ ಯಾವುದೇ ನ್ಯಾಯಾಲಯ ಅಥವಾ ಪ್ರಾಧಿಕಾರದ ಮುಂದೆ ವಕೀಲಿಕೆ ಮಾಡದಂತೆ ಶಾಶ್ವತವಾಗಿ ತಡೆ ಹಿಡಿಯಲಾಗಿದೆ.

ಬೆಳಗಾವಿಯ ಮತ್ತೊಬ್ಬ ವಕೀಲ ಪ್ರಭು ಶಿವಪ್ಪ ಯತ್ನಟ್ಟಿ ಅವರ ಸನ್ನದನ್ನೂ ಶಾಶ್ವತವಾಗಿ ರದ್ದುಪಡಿಸಲಾಗಿದ್ದು, ₹ 20 ಸಾವಿರ ದಂಡ ವಿಧಿಸಲಾಗಿದೆ‘ ಎಂದು ವಕೀಲರ ಪರಿಷತ್ ಅಧ್ಯಕ್ಷ ವಿಶಾಲ ರಘು ತಿಳಿಸಿದ್ದಾರೆ.

‘ಈ ಇಬ್ಬರ ವಿರುದ್ಧದ ವೃತ್ತಿ ದುರ್ನಡತೆ ಆರೋಪಗಳ ವಿಚಾರಣೆ ನಡೆಸಿದ ಪರಿಷತ್‌ನ ಶಿಸ್ತುಕ್ರಮ ಸಮಿತಿಯು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದೆ ಎಂದು ಪರಿಷತ್ ಕಾರ್ಯದರ್ಶಿ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Ksbc suspends Bar License of Two lawyers from Mangalore and Belagavi. Advocate lawyer D Padmanab Kumar from Mangalore and Shivappa Yatnatti from Belagavi.