ಕುದುರೆಮುಖಕ್ಕೆ ಟ್ರಕ್ಕಿಂಗ್ ಹೋಗಿದ್ದ ಮೈಸೂರು ಮೂಲದ ಪ್ರವಾಸಿಗ ಕುಸಿದು ಬಿದ್ದು ಸಾವು 

30-06-23 08:24 pm       HK News Desk   ಕರ್ನಾಟಕ

ಕುದುರೆಮುಖಕ್ಕೆ ಟ್ರಕ್ಕಿಂಗ್ ಹೋಗಿದ್ದ ಮೈಸೂರು ಮೂಲದ ಪ್ರವಾಸಿಗ ಹೃದಯಘಾತಕ್ಕೆ ಒಳಗಾಗಿ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ರಕ್ಷಿತ್ (27) ಹೃದಯಘಾತದಿಂದ ಮೃತಪಟ್ಟ ಯುವಕ.

ಚಿಕ್ಕಮಗಳೂರು, ಜೂನ್ 30: ಕುದುರೆಮುಖಕ್ಕೆ ಟ್ರಕ್ಕಿಂಗ್ ಹೋಗಿದ್ದ ಮೈಸೂರು ಮೂಲದ ಪ್ರವಾಸಿಗ ಹೃದಯಘಾತಕ್ಕೆ ಒಳಗಾಗಿ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ರಕ್ಷಿತ್ (27) ಹೃದಯಘಾತದಿಂದ ಮೃತಪಟ್ಟ ಯುವಕ. 

ಮೈಸೂರು ಮೂಲದ ಏಳು ಮಂದಿ ಯುವಕರ ತಂಡ ಶುಕ್ರವಾರ ಟ್ರಕ್ಕಿಂಗ್ ತೆರಳಲು ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖಕ್ಕೆ ಆಗಮಿಸಿದ್ದರು. ಕುದುರೆಮುಖದಿಂದ ನೇತ್ರಾವತಿ ನದಿ ಹುಟ್ಟುವ ಪೀಕ್ ಸ್ಪಾಟ್ ಗೆ ನಡೆದು ತೆರಳಿದ್ದರು. ಎತ್ತರದ ಪ್ರದೇಶದಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಾರ್ಗದಲ್ಲಿ ರಕ್ಷಿತ್ ಗೆ ಹೃದಯಾಘಾತ ಆಗಿದ್ದು ಕುಸಿದು ಬಿದ್ದಿದ್ದಾರೆ. 

ಚಿಕ್ಕಮಗಳೂರು - ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದ ಸಂಸೆ, ಎಳನೀರು ಪ್ರದೇಶದಲ್ಲಿ ನೇತ್ರಾವತಿ ಪೀಕ್ ಸ್ಪಾಟ್ ಇದೆ. ಕುಸಿದು ಬಿದ್ದ ರಕ್ಷಿತ್ ನನ್ನು ಜೊತೆಗಿದ್ದವರು ಶಿಖರದ ತುದಿಯಿಂದ ಕೆಳಕ್ಕೆ ಹೊತ್ತು ತಂದಿದ್ದಾರೆ. ಅಷ್ಟರಲ್ಲಿ ಯುವಕ ಮೃತಪಟ್ಟಿದ್ದು ಮೃತದೇಹವನ್ನ ಕಳಸಕ್ಕೆ ತಂದಿದ್ದಾರೆ. ‌ದ.ಕ. ಜಿಲ್ಲೆಯ ಬೆಳ್ತಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮಳೆಗಾಲ ಆಗಿದ್ದರಿಂದ ಕುದುರೆಮುಖ ಪ್ರದೇಶದಲ್ಲಿ ತೀವ್ರ ಮಂಜು ಮುಸುಕಿದ್ದು ಟ್ರಕ್ಕಿಂಗ್ ಅಪಾಯಕಾರಿ ಎನಿಸಿದೆ.

Kudremukh trekking, 27 year old youth dies after collapsing in Chikmagalur. The diseased as been identified as Rakshit. It is said that he has died of heart attack