ಬ್ರೇಕಿಂಗ್ ನ್ಯೂಸ್
01-07-23 10:39 pm HK News Desk ಕರ್ನಾಟಕ
ಹುಬ್ಬಳ್ಳಿ, ಜುಲೈ 1: ಇಡೀ ಬಿಜೆಪಿ ಒಬ್ಬರ ಪಂಚೆಯಲ್ಲಿ ಬಂಧಿಯಾಗಿದೆ ಎಂದು ರಾಜ್ಯ ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿದ್ದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಇದು ಕಾಂಗ್ರೆಸ್ನ ಕೆಳಮಟ್ಟದ ಭಾಷೆ. ಈ ವಿಚಾರಕ್ಕೆ ನಮ್ಮ ಪಕ್ಷದ ಬೇರೆ ಬೇರೆಯವರು ಮಾತಾಡಿದ್ದಾರೆ. ಭಾರತ ಸರ್ಕಾರದ ಮಂತ್ರಿಯಾಗಿ ನಾನು ಆ ಪದ ಬಳಸಲ್ಲ. ಸಿಎಂ ಸಿದ್ದರಾಮಯ್ಯ ಲುಂಗಿ ಲೀಡರ್. ಅವರು ಅದನ್ನು ಮರೆಯಬಾರದು ಎಂದಿದ್ದಾರೆ.
ಅಸಭ್ಯ ಪದ ಬಳಸುವುದು ಸರಿಯಲ್ಲ. ಅಪ್ಪಿ ತಪ್ಪಿಯೂ ನನ್ನ ಬಾಯಿಂದ ಅಂತಹ ಭಾಷೆ ಬರುವುದಿಲ್ಲ. ಅದಕ್ಕೆಲ್ಲಾ ಜನರು ಮುಂದೆ ಉತ್ತರ ಕೊಡುತ್ತಾರೆ ಎಂದು ಹೇಳಿದರು. ವಿಪಕ್ಷ ನಾಯಕನ ಪ್ರಶ್ನೆಗೆ, ಎರಡು - ಮೂರು ದಿನಗಳಲ್ಲಿ ವಿಪಕ್ಷ ನಾಯಕನ ಆಯ್ಕೆ ಆಗಲಿದೆ ಎಂದು ಜೋಶಿ ಸ್ಪಷ್ಟಪಡಿಸಿದರು.
ಬಸ್ನಲ್ಲಿ ಮಹಿಳೆಯರು ಉಚಿತ ಅನ್ನೋದು ಬಿಟ್ರೆ ಉಳಿದ ಎಲ್ಲ ಗ್ಯಾರಂಟಿ ಜಾರಿಯಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಅಕ್ಕಿ ಕೊಡುತ್ತಿರೋದು ಪ್ರಧಾನಿ ಮೋದಿ. ದೇಶದ 80 ಕೋಟಿ ಜನರಿಗೆ ಕೇಂದ್ರ ಸರ್ಕಾರದಿಂದ ಅಕ್ಕಿ ಕೊಡ್ತಿದೀವಿ. ದೇಶದಲ್ಲಿ ಬರಗಾಲ ಆವರಿಸಿದೆ. ರಾಜ್ಯದಲ್ಲಿಯೂ ಆವರಿಸಿ ಭತ್ತದಲ್ಲಿ ಕಡಿತ ಆಗಬಹುದು ಎಂದು ತಜ್ಞರು ಹೇಳಿದ್ದಾರೆ. ಹೀಗಾಗಿ, ಸ್ವಲ್ಪ ಪ್ರಮಾಣದ ಅಕ್ಕಿ ಕೇಂದ್ರ ಸರ್ಕಾರದ ಕಡೆ ಇದೆ ಎಂದರು.
ಕಾಂಗ್ರೆಸ್ನವರು 10 ಕೆಜಿ ಅಕ್ಕಿ ಉಚಿತ ಘೋಷಣೆ ಮಾಡಿ ಭಾಷಣ ಮಾಡಿದರು. ಆಗ ಭಾರತ ಸರ್ಕಾರದ ಹೆಸರು ಹೇಳಲಿಲ್ಲ. ಈಗ ಅಕ್ಕಿ ಕೊಡುತ್ತಿಲ್ಲ ಎಂದು ದೂರುತ್ತಿದ್ದಾರೆ. ಜನ ಈಗಾಗಲೇ ಭ್ರಮ ನಿರಶನಗೊಂಡಿದ್ದಾರೆ. ಯುವನಿಧಿ ಯೋಜನೆಯಲ್ಲಿ ಎಲ್ಲ ನಿರುದ್ಯೋಗಿಗಳಿಗೆ ದುಡ್ಡು ಎಂದಿದ್ದರು. ಇವಾಗ ಸಾಕಷ್ಟು ನಿಯಮ ಹಾಕಿದ್ದೀರಾ. ಕಾಂಗ್ರೆಸ್ ಎಲ್ಲ ವಿಷಯದಲ್ಲಿಯೂ ಸುಳ್ಳು ಹೇಳುತ್ತಿದಾರೆ ಎಂದು ಆರೋಪಿಸಿದರು.
Union Minister Pralhad Joshi quipped that both the Congress government and its intelligence have been hacked. Talking to the reporters in Hubballi, he said that Congress has failed in all other issues except the issue of free allowance for women in buses. Modi is giving rice. But some say that UPA made this law. They did not make any legal rules. After BJP came to power, we implemented laws and made rules.
15-09-25 08:53 pm
Bangalore Correspondent
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
15-09-25 04:57 pm
HK News Desk
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
15-09-25 08:28 pm
Mangalore Correspondent
Mangalore Accident, Saudi, Ullal: ಸೌದಿ ಅರೇಬಿಯ...
15-09-25 02:08 pm
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
15-09-25 10:47 pm
Bangalore Correspondent
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm