ಬ್ರೇಕಿಂಗ್ ನ್ಯೂಸ್
10-07-23 03:10 pm Bangalore Correspondent ಕರ್ನಾಟಕ
ಬೆಂಗಳೂರು, ಜುಲೈ 10: ಕೆಲ ದಿನಗಳ ಹಿಂದಷ್ಟೇ ಹಾಸನದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಟೊಮ್ಯಾಟೋ ಕಳ್ಳತನವಾಗಿರುವ ಬಗ್ಗೆ ಓದಿದ್ದೀರಿ. ಈಗ ಬೆಂಗಳೂರಿನಲ್ಲಿ ಟೊಮ್ಯಾಟೋ ಸಾಗಿಸುತ್ತಿದ್ದ ವಾಹನವನ್ನೇ ಖದೀಮರು ಎಸ್ಕೇಪ್ ಮಾಡಿದ್ದಾರೆ. ಟೊಮ್ಯಾಟೋಗೆ ಚಿನ್ನದ ಬೆಲೆ ಬಂದಿದ್ದರಿಂದ ಇಂತಹ ಪ್ರಕರಣಗಳು ಕರ್ನಾಟಕದಲ್ಲಿ ನಡೆಯುತ್ತಿವೆ. ರೈತ ಹಾಗೂ ವಾಹನ ಚಾಲಕನ ಮೇಲೆ ಹಲ್ಲೆ ಕೂಡ ನಡೆದಿದೆ.
ಯಲಹಂಕ ಸಮೀಪದ ಚಿಕ್ಕಜಾಲ ಗ್ರಾಮದ ಬಳಿ ಘಟನೆ ನಡೆದಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಸುಮಾರು 250 ಕೆಜಿ ಟೊಮ್ಯಾಟೋ ಕಳ್ಳರ ಪಾಲಾಗಿದೆ. ಹಿರಿಯೂರಿನಿಂದ ಕೋಲಾರಕ್ಕೆ ರೈತರು ಬೊಲೆರೋ ವಾಹನದಲ್ಲಿ ಟೊಮ್ಯಾಟೋ ಸಾಗಿಸುತ್ತಿದ್ದರು. ಇದನ್ನು ಕಂಡ ಮೂವರು ಖದೀಮರು ಟೊಮ್ಯಾಟೋ ತುಂಬಿದ್ದ ಬೊಲೆರೋ ವಾಹನವನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ.
ಬಳಿಕ ಆರ್ಎಂ.ಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಪೀಣ್ಯದ ಬಳಿ ವಾಹನ ಅಡ್ಡಗಟ್ಟಿ ತಮ್ಮ ವಾಹನಕ್ಕೆ ಟಚ್ ಮಾಡಿದ್ದೀರಿ ಎಂದು ಗಲಾಟೆ ಮಾಡಿದ್ದಾರೆ. ಈ ವೇಳೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಣ ಇಲ್ಲ ಎಂದು ಗೊತ್ತಾದಾಗ ಡಿಜಿಟಲ್ ಪೇಮೆಂಟ್ ಮೂಲಕ ಹಣವನ್ನು ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಬಳಿಕ ಬಳಿಕ ರೈತ ಹಾಗೂ ಚಾಲಕನನ್ನು ವಾಹನದಲ್ಲಿಯೇ ಕೂರಿಸಿಕೊಂಡು ಹೋಗಿದ್ದು, ಚಿಕ್ಕಜಾಲ ಬಳಿ ರೈತನನ್ನು ಇಳಿಸಿ ವಾಹನ ಸಮೇತ ಕಳ್ಳರು ಪರಾರಿಯಾಗಿದ್ದಾರೆ. ಆರ್ಎಂಸಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಾಸನದಲ್ಲಿ ಟೊಮ್ಯಾಟೋ ಕಳ್ಳತನ!
ಇನ್ನು, ಕೆಲ ದಿನಗಳ ಹಿಂದಷ್ಟೇ ಹಾಸನದಲ್ಲಿ 2 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಸುಮಾರು 2 ಲಕ್ಷ ರೂಪಾಯಿ ಮೌಲ್ಯದ ಟೊಮ್ಯಾಟೋವನ್ನು ದುಷ್ಕರ್ಮಿಗಳು ಕಳ್ಳತನ ಮಾಡಿದ್ದರು. ಬೇಲೂರು ತಾಲೂಕಿನ ಗೋಣಿ ಸೋಮನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿತ್ತು. ಗೋಣಿ ಸೋಮನಹಳ್ಳಿಯ ಸೋಮಶೇಖರ್ ಎಂಬುವವರು ಟೊಮ್ಯಾಟೋ ಬೆಳೆದಿದ್ದರು. ಆದರೆ, ಟೊಮ್ಯಾಟೋ ಕಳ್ಳತನದಿಂದ ರೈತರು ಕಂಗಾಲಾಗಿದ್ದಾರೆ.
Van carrying tomatoes worth Rs 2 lakh hijacked in Bangalore after assault on Farmer. In one peculiar incident, thieves hijacked a Bolero, which contained over 250 kg of tomato trays. This incident was recorded at the Yelahanka of Bengaluru district on Saturday.
13-05-24 03:02 pm
Bangalore Correspondent
Shivamogga Accident: ಶಿವಮೊಗ್ಗ ; ಆಟೋಗೆ ಡಿಕ್ಕಿ...
13-05-24 01:04 pm
ಪರಿಷತ್ ಟಿಕೆಟ್ ಕೈತಪ್ಪಿದ್ದಕ್ಕೆ ರಘುಪತಿ ಭಟ್ ಅಸಮಾಧ...
12-05-24 07:08 pm
Congress MLA Kadalur Uday gowda vs Kumaraswam...
12-05-24 03:45 pm
Devaraje Gowda arrested; ರಾಜ್ಯಕ್ಕೆ ಪ್ರಜ್ವಲ್ ಪ...
12-05-24 10:51 am
11-05-24 09:43 pm
HK News Desk
Kareena Kapoor, Bible Book, court: “ಪ್ರೆಗ್ನೆನ...
11-05-24 03:13 pm
Ram Mandir, Nana Patole, Nrendra modi: ಮೋದಿಯಿ...
10-05-24 10:05 pm
Arvind Kejriwal, Supreme court: ಸಿಎಂ ಕೇಜ್ರಿವಾ...
10-05-24 03:46 pm
Kerala Arali Flower death: ಮೊಬೈಲ್ ನಲ್ಲಿ ಮಾತನಾ...
10-05-24 10:06 am
13-05-24 02:27 pm
Mangalore Correspondent
Tv Serial Helmet Fine Police: ಟಿವಿ ಸೀರಿಯಲ್ನಲ್...
12-05-24 06:30 pm
ಕುಂದಾಪುರದ ಫೈನಾನ್ಶಿಯರ್ ಹತ್ಯೆ ಆರೋಪಿಗೆ ಹಿರಿಯಡ್ಕ...
12-05-24 05:41 pm
Kadaba illegal sand raid, Mangalore crime: ಕಡ...
12-05-24 04:34 pm
Mangalore University: ಮಂಗಳೂರು ವಿವಿ ಕಾಲೇಜಿನಲ್ಲ...
12-05-24 03:04 pm
12-05-24 01:53 pm
Mangalore Correspondent
Mangalore Crime, Sexual Assult: ಅನ್ಯಕೋಮಿನ ಬಾಲ...
11-05-24 10:18 pm
Bangalore Crime, Cyber, Roopa Iyer: ಸೆಲೆಬ್ರಿಟ...
10-05-24 05:04 pm
Kalaburgi youth murdered: ಕಲಬುರಗಿ ; ಕಾಂಗ್ರೆಸ್...
10-05-24 02:04 pm
Cyber fraud Kodagu, Kerala, Sim card: ಸೈಬರ್ ವ...
10-05-24 12:44 pm