ಯುವ ಬ್ರಿಗೇಡ್ ಕಾರ್ಯಕರ್ತ ಹತ್ಯೆ ; ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವಹೇಳನ ಪೋಸ್ಟ್, ಪ್ರಕರಣ ದಾಖಲು 

16-07-23 02:48 pm       HK News Desk   ಕರ್ನಾಟಕ

ಮೈಸೂರಿನ ಟಿ.ನರಸೀಪುರದಲ್ಲಿ ವೇಣು ಗೋಪಾಲ್ ಹತ್ಯೆಗೆ ಸಂಬಂಧಿಸಿ, ಸಿಎಂ ಸಿದ್ದರಾಮಯ್ಯ ಅವರನ್ನು ನಿಂದಿಸಿ ಇನ್ಟಾಗ್ರಾಂ ನಲ್ಲಿ ಪೋಸ್ಟ್ ಹಾಕಲಾಗಿದ್ದು ಈ ಬಗ್ಗೆ ಪೊಲೀಸ್ ದೂರು ನೀಡಲಾಗಿದೆ. 

ಮೈಸೂರು, ಜುಲೈ 16: ಮೈಸೂರಿನ ಟಿ.ನರಸೀಪುರದಲ್ಲಿ ವೇಣು ಗೋಪಾಲ್ ಹತ್ಯೆಗೆ ಸಂಬಂಧಿಸಿ, ಸಿಎಂ ಸಿದ್ದರಾಮಯ್ಯ ಅವರನ್ನು ನಿಂದಿಸಿ ಇನ್ಟಾಗ್ರಾಂ ನಲ್ಲಿ ಪೋಸ್ಟ್ ಹಾಕಲಾಗಿದ್ದು ಈ ಬಗ್ಗೆ ಪೊಲೀಸ್ ದೂರು ನೀಡಲಾಗಿದೆ. 

ರಾಜೀ ಹಿಂದೂ ಎಂಬ ಹೆಸರಲ್ಲಿ  ಇನ್ಸ್ ಟಾ ಗ್ರಾಂ ಜಾಲತಾಣದಲ್ಲಿ ಪೋಸ್ಟ್ ಹಾಕಿರುವುದು ವೈರಲ್ ಆಗಿದೆ. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಿದ್ದೆ ತಡ ಕೊಲೆಗಳು ನಡೀತಿದೆ, ಸಿದ್ರಾಮುಲ್ಲ ಖಾನ್ ಸರ್ಕಾರದಲ್ಲಿ ಹಿಂದೂಗಳಿಗೆ ಉಳಿಗಾಲವಿಲ್ಲ.‌ ಹಿಂದೂ ಕಾರ್ಯಕರ್ತರ ಶಕ್ತಿ ದಮನ ಮಾಡಲು ಈ ಸರ್ಕಾರ ಹೊರಟಿದೆ ಎಂದು ಬರೆಯಲಾಗಿದೆ. 

ಇನ್ನೊಂದು ಪೋಸ್ಟ್ ನಲ್ಲಿ ನಾವೆಲ್ಲ ಒಗ್ಗಟ್ಟಾಗಿ ನಮ್ಮ ಕಾರ್ಯಕರ್ತರ ಬೆನ್ನಿಗೆ ನಿಲ್ಲಬೇಕಿದೆ. ನಾವೆಲ್ಲರೂ ಸೇರಿ ಸ್ವಯಂಪ್ರೇರಿತವಾಗಿ ತಿ.ನರಸೀಪುರದಲ್ಲಿ ಬಂದ್ ಮಾಡೋಣ‌. ಸಿದ್ದರಾಮಯ್ಯ ಡ್ಯಾಶ್ ಡ್ಯಾಶ್ ಎಂದು ಕೆಟ್ಟದಾಗಿ ಬರೆಯಲಾಗಿದೆ. ಈ ಬಗ್ಗೆ ಮೈಸೂರು ಸೈಬರ್ ಕ್ರೈಮ್ ಬ್ರಾಂಚ್ ಠಾಣೆಯಲ್ಲಿ ವರುಣ ಹೋಬಳಿಯ ಮೆಲ್ಲಹಳ್ಳಿ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತ ರವಿ ಕುಮಾರ್ ಎಂಬವರು ದೂರು ದಾಖಲಿಸಿದ್ದಾರೆ. ಪೊಲೀಸರು ಎಫ್ಐಆರ್ ದಾಖಲಿಸಿದ್ದು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.‌

In connection with the murder of Venugopal at T. Narasipur in Mysuru, a police complaint has been lodged against Chief Minister Siddharamaiah for allegedly posting derogatory remarks against him on Instagram.