KARAVE, Narayana Gowda arrested again: ಕರವೇ ನಾರಾಯಣ ಗೌಡಗೆ ಶಾಕ್ ಮೇಲೆ ಕರೆಂಟ್ ಶಾಕ್ ; ಜೈಲಿನಿಂದ ರಿಲೀಸ್ ಆಗ್ತಿದ್ದಂತೆ ಮತ್ತೆ ಅರೆಸ್ಟ್, 2017ರ ಹಳೆ ಕೇಸ್ ನಲ್ಲಿ ಕರವೇ ಮುಖ್ಯಸ್ಥನನ್ನ ಲಿಫ್ಟ್ ಮಾಡಿದ ಪೊಲೀಸ್ರು, ಕಂಗಲಾದ ಕಾರ್ಯಕರ್ತರು

09-01-24 01:54 pm       Bangalore Correspondent   ಕರ್ನಾಟಕ

ಕನ್ನಡ ನಾಮಫಲಕ ಅಳವಡಿಕೆ ವಿಚಾರದಲ್ಲಿ ನಡೆಸಲಾದ ಪ್ರತಿಭಟನೆಯ ಸಂದರ್ಭದಲ್ಲಿ ಬಂಧಿತರಾಗಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಅವರನ್ನ ಸೋಮವಾರ ಬೆಳಗ್ಗೆ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.

ಬೆಂಗಳೂರು, ಜ 09: ಕನ್ನಡ ನಾಮಫಲಕ ಅಳವಡಿಕೆ ವಿಚಾರದಲ್ಲಿ ನಡೆಸಲಾದ ಪ್ರತಿಭಟನೆಯ ಸಂದರ್ಭದಲ್ಲಿ ಬಂಧಿತರಾಗಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಅವರನ್ನ ಸೋಮವಾರ ಬೆಳಗ್ಗೆ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಆದರೆ, ಬಿಡುಗಡೆಯಾಗುತ್ತಿದ್ದಂತೆಯೇ ಪೊಲೀಸರು ಅವರನ್ನು ಮತ್ತೊಂದು ಪ್ರಕರಣದಲ್ಲಿ ಬಂಧಿಸಿದ್ದು, ಇನ್ನೊಮ್ಮೆ ಕೋರ್ಟ್‌ ಮುಂದೆ ಹಾಜರುಪಡಿಸಿ ಜೈಲಿಗಟ್ಟಲು ಸಿದ್ಧತೆ ನಡೆಸುತ್ತಿದ್ದಾರೆ.

ಕರವೇ ನಾರಾಯಣ ಗೌಡ ಸೇರಿದಂತೆ ವೇದಿಕೆಯ 28 ಮಂದಿ ಕಾರ್ಯಕರ್ತರಿಗೆ ಕೋರ್ಟ್‌ ಕಳೆದ ಶುಕ್ರವಾರವೇ ಜಾಮೀನು ನೀಡಿತ್ತು. ಆದರೆ, ಜಾಮೀನು ಆದೇಶದ ಪ್ರತಿ ಸಿಕ್ಕಿಲ್ಲ ಎಂಬ ಕಾರಣ ನೀಡಿ ಶುಕ್ರವಾರ ರಾತ್ರಿವರೆಗೂ ಕಾಯಿಸಲಾಗಿತ್ತು. ಶನಿವಾರ -ಭಾನುವಾರ ರಜೆ ಇದ್ದ ಕಾರಣ ಬಿಡುಗಡೆ ಆಗಿರಲಿಲ್ಲ. ಸೋಮವಾರ ಕೂಡಾ ಕಾನೂನಾತ್ಮಕ ಪ್ರಕ್ರಿಯೆಗಳ ಹೆಸರಿನಲ್ಲಿ ದಿನ ದೂಡಿದ ಅಧಿಕಾರಿಗಳು ಮಂಗಳವಾರ ಬೆಳಗ್ಗೆಯಷ್ಟೇ ಬಿಡುಗಡೆ ಮಾಡಿದ್ದಾರೆ. ಆದರೆ, ಪೊಲೀಸರು ಮತ್ತೆ ಬಂಧಿಸಿದ್ದಾರೆ. 
ಯಾವುದದು ಇನ್ನೊಂದು ಪ್ರಕರಣ?

KRV president Narayana Gowda arrested for vandalism over Kannada signboards  in Bengaluru | Narayana Gowda arrest, Karnataka Rakshana Vedike, Jail:  ಬೆಂಗಳೂರಿನಲ್ಲಿ ಇಂಗ್ಲೀಷ್ ಬೋರ್ಡ್‌‌‌ ವಿರುದ್ಧ ಕರವೇ ಕಿಚ್ಚು ...

ನಾರಾಯಣ ಗೌಡ ಜೈಲಿನಿಂದ ಬಿಡುಗಡೆ ಆಗೋ ವೇಳೆ ಅಲ್ಲೇ ಕಾದು ಕೂತಿದ್ದ ಕುಮಾರಸ್ವಾಮಿ ಲೇಔಟ್ ಪೊಲೀಸರು ಮತ್ತೆ ಗೌಡ್ರನ್ನ ಬಂಧಿಸಿದ್ದಾರೆ. 2017ರ ಕನ್ನಡ ನಾಮಫಲಕ ಹೋರಾಟಕ್ಕೆ ಸಂಬಂಧಿಸಿ ಅವರ ಬಂಧನ ನಡೆದಿದೆ.

2017ರಲ್ಲಿ ಯಲಚೇನಹಳ್ಳಿ ಮೆಟ್ರೋ ಸ್ಟೇಷನ್ ನಾಮ ಫಲಕಗಳಿಗೆ ಮಸಿ ಬಳಿಯಲು ಮುಂದಾಗಿದ್ದ ನಾರಾಯಣಗೌಡ ಹಾಗೂ ಸಂಗಡಿಗರು ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅವರ ಮೇಲೆ ಚಾರ್ಜ್ ಶೀಟ್ ಕೂಡಾ ಸಲ್ಲಿಕೆಯಾಗಿತ್ತು. ಆದರೆ ನಾರಾಯಣ ಗೌಡರು ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಿರಲಿಲ್ಲ. ಇದಕ್ಕೆ ಸಂಬಂಧಿಸಿ 16 ಬಾರಿ ಜಾಮೀನುರಹಿತ ಬಂಧನ ವಾರಂಟ್‌ ಜಾರಿಯಾಗಿತ್ತು. ಈ ನಡುವೆ, ಜನವರಿ 12ರೊಳಗೆ ನಾರಾಯಣ ಗೌಡರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ನ್ಯಾಯಾಧೀಶರು ಸೂಚಿಸಿದ್ದರು. ಈ ಹಿನ್ನಲೆಯಲ್ಲಿ ಕುಮಾರಸ್ವಾಮಿ ಲೇಔಟ್ ಪೊಲೀಸರು ಅವರನ್ನು ಬಂಧಿಸಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಗೊಂಡ 27 ಕನ್ನಡ ಕಾರ್ಯಕರ್ತರನ್ನು ಪೊಲೀಸರ ಬೆಂಗಾವಲಿನಲ್ಲಿ ಬಿಎಂಟಿಸಿ ಬಸ್‌ನಲ್ಲಿ ಅವರವರ ಮನೆಗೆ ಬಿಡುವ ಕೆಲಸ ನಡೆಯುತ್ತಿದೆ. ಈ ನಡುವೆ, ಮರಳಿ ಬಂಧಿತರಾದ ನಾರಾಯಣ ಗೌಡ ಅವರನ್ನು ಸೈಂಟ್‌ ಮಾರ್ಥಾಸ್‌ ಆಸ್ಪತ್ರೆಗೆ ಕರೆತಂದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ನಾರಾಯಣಗೌಡ ಪುತ್ರಿ ಹಾಗೂ ಪುತ್ರ ಆಸ್ಪತ್ರೆ ಬಳಿ ಆಗಮಿಸಿದ್ದಾರೆ. ವೈದ್ಯಕೀಯ ಪರೀಕ್ಷೆ ಮುಗಿದ ಬಳಿಕ ಪೊಲೀಸರು ಅವರನ್ನು ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರು ಪಡಿಸಲಿದ್ದಾರೆ.

ನಾರಾಯಣ ಗೌಡರ ಮೇಲಿರುವುದು ವಿಚಾರಣೆಗೆ ಹಾಜರಾಗದ ಕಾರಣಕ್ಕಾಗಿ ಹೊರಡಿಸಿದ ಬಂಧನ ಆದೇಶ. ಈಗ ಅವರನ್ನು ಹಾಜರು ಮಾಡುವಲ್ಲಿಗೆ ಬಂಧನ ವಾರಂಟ್‌ ರದ್ದಾಗುವ ಸಾಧ್ಯತೆ ಇದೆ. ಅಥವಾ ಒಂದೊಮ್ಮೆ ಕೋರ್ಟ್‌ ಬಯಸಿದರೆ ನ್ಯಾಯಾಂಗ ಬಂಧನವನ್ನು ವಿಧಿಸುವ ಸಾಧ್ಯತೆಗಳೂ ಇವೆ.

Karnataka Rakshana Vedike Narayana Gowda arrested again after release from jail in old case. Vedike Narayana Gowda who was released on bail was once again arrested by the Kumaraswamy Layout Police Station in connection to 2017 case.