ಬ್ರೇಕಿಂಗ್ ನ್ಯೂಸ್
01-03-24 10:11 pm Bangalore Correspondent ಕರ್ನಾಟಕ
ಬೆಂಗಳೂರು, ಮಾ.1: ವೈಟ್ ಫೀಲ್ಡ್ ನಲ್ಲಿರುವ ರಾಮೇಶ್ವರ ಕೆಫೆಯಲ್ಲಿ ಬಾಂಬ್ ಇಟ್ಟು ಹೋಗಿರುವ ವ್ಯಕ್ತಿಯ ಗುರುತು ಪತ್ತೆಯಾಗಿದ್ದು, ಪೊಲೀಸರು ಸಿಸಿಟಿವಿ ಚಹರೆ ಆಧರಿಸಿ ಆರೋಪಿಯ ಬೆನ್ನು ಬಿದ್ದಿದ್ದಾರೆ.
25- 30 ವರ್ಷ ವ್ಯಕ್ತಿ ಹೊಟೇಲಿಗೆ ಬಂದು ರವೆ ಇಡ್ಲಿ ಆರ್ಡರ್ ಮಾಡಿ ತಿಂದ ಬಳಿಕ ಕೈತೊಳೆಯುವ ಜಾಗದಲ್ಲಿ ತನ್ನಲ್ಲಿದ್ದ ಬ್ಯಾಗನ್ನು ಇಟ್ಟು ಹೋಗಿದ್ದ ಎಂಬುದು ಸಿಸಿಟಿವಿಯಲ್ಲಿ ತಿಳಿದುಬಂದಿದೆ. ಆರೋಪಿಯನ್ನು ಕೆಲವೇ ಗಂಟೆಯಲ್ಲಿ ಬಂಧಿಸುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಸಂಜೆ 7 ಗಂಟೆಯ ವೇಳೆ ಘಟನಾ ಸ್ಥಳಕ್ಕೆ ಬಂದ ಡಿಸಿಎಂ ಡಿಕೆ ಶಿವಕುಮಾರ್, ಸಿಸಿಟಿವಿಯಲ್ಲಿ ಆರೋಪಿ ಬಗ್ಗೆ ಚಹರೆ ಲಭ್ಯವಾಗಿದೆ. ಆರೋಪಿ ಮೊದಲು ಬಾಂಬ್ ಇಟ್ಟುಕೊಂಡಿದ್ದ ಬ್ಯಾಗಿನ ಜೊತೆಗೆ ಹೊಟೇಲಿಗೆ ಬಂದಿದ್ದಾನೆ. ಆನಂತರ, ರವೆ ಇಡ್ಲಿ ಆರ್ಡರ್ ಮಾಡಿ ತಿಂದಿದ್ದಾನೆ. ಹಿಂತಿರುಗಿ ಹೋಗುವಾಗ ಬ್ಯಾಗ್ ಬಿಟ್ಟು ಹೋಗಿದ್ದಾನೆ. ಸಿಸಿಟಿವಿಯಲ್ಲಿ ಸ್ಪಷ್ಟ ಚಹರೆ ಲಭ್ಯವಾಗಿದ್ದು, ಪೊಲೀಸರು ಶೀಘ್ರದಲ್ಲಿ ಆರೋಪಿ ಬಂಧಿಸಲಿದ್ದಾರೆ ಎಂದಿದ್ದಾರೆ.
ಬ್ಯಾಗನ್ನು ಇಟ್ಟು ಹೋಗುವ ಮೊದಲು ಅದರಲ್ಲಿ ಒಂದು ಗಂಟೆಯ ಬಳಿಕ ಬ್ಲಾಸ್ಟ್ ಆಗುವಂತೆ ಟೈಮರ್ ಇಟ್ಟಿದ್ದ. 25ರಿಂದ 30 ವರ್ಷ ಪ್ರಾಯದ ಯುವಕನ ಗುರುತು ಸಿಕ್ಕಿದ್ದು ಪೊಲೀಸರು ಕೆಲವೇ ಗಂಟೆಗಳಲ್ಲಿ ಬಂಧನ ಮಾಡಲಿದ್ದಾರೆ ಎಂದು ಡಿಕೆಶಿ ವಿವರಿಸಿದ್ದಾರೆ. ಆರೋಪಿ ಬಸ್ಸಿನಲ್ಲಿ ಬಂದಿದ್ದು ಹೊಟೇಲ್ ಒಳಹೊಕ್ಕಿದ್ದಾನೆ. ಆತನ ಪ್ರತಿ ಚಲನವಲನವೂ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು ಆರೋಪಿ ಬಂದು ಹೋದ ಒಂದು ಗಂಟೆಯ ನಂತರ ಬ್ಲಾಸ್ಟ್ ಆಗಿದೆ. ಪ್ರಕರಣ ಭೇದಿಸಲು ಏಳರಿಂದ ಎಂಟು ವಿಶೇಷ ಪೊಲೀಸ್ ತಂಡ ರಚನೆ ಮಾಡಲಾಗಿದೆ. ಜೊತೆಗೆ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆ ಹಿಂದಿನ ಶಕ್ತಿಯನ್ನು ಪೊಲೀಸರು ಪತ್ತೆ ಮಾಡಲಿದ್ದಾರೆ ಎಂದು ಡಿಕೆಶಿ ತಿಳಿಸಿದ್ದಾರೆ.
ಉಗ್ರವಾದಿ ಕೃತ್ಯವೋ, ದ್ವೇಷದ ಕೃತ್ಯವೋ ಅನ್ನುವುದು ತಿಳಿದುಬಂದಿಲ್ಲ. ಪ್ರಾಥಮಿಕ ತನಿಖೆಯ ಪ್ರಕಾರ, ಸಣ್ಣ ಮಟ್ಟದ ಸುಧಾರಿತ ಸ್ಫೋಟಕವನ್ನು ಸ್ಫೋಟಕ್ಕೆ ಬಳಸಲಾಗಿದೆ. ಆದರೆ ಯಾರು ಕೃತ್ಯ ಎಸಗಿದ್ದಾರೆ, ಆತನ ಉದ್ದೇಶ ಏನಿತ್ತು ಎಂಬುದು ಗೊತ್ತಾಗಿಲ್ಲ. ಗಾಯಗೊಂಡವರು ಅಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
Authorities have made a significant breakthrough in the investigation of the blast at Rameshwaram Cafe in Bengaluru's Kundalahalli area. The accused responsible for the explosion, which left several injured, has been identified through CCTV footage.
21-06-25 02:48 pm
Bengaluru Staff
ಗುತ್ತಿಗೆ ಮೀಸಲು ಹೆಚ್ಚಳ ಬೆನ್ನಲ್ಲೇ ಅಲ್ಪಸಂಖ್ಯಾತರಿ...
20-06-25 10:36 am
ಕಮಲ್ ನಟನೆಯ 'ಥಗ್ ಲೈಫ್' ಸಿನಿಮಾ ಪ್ರಸಾರಕ್ಕೆ ಸುಪ್ರ...
17-06-25 05:35 pm
Dk Shivakumar, Plan Crash: ವಿಮಾನ ದುರಂತ ; ಬಿಜೆ...
16-06-25 10:44 pm
Judge Heart Attack, Kalaburagi Court: ನ್ಯಾಯಾಲ...
16-06-25 02:56 pm
22-06-25 10:58 am
HK News Desk
IndiGo Flight News, Bangalore; ಇಂಡಿಗೋ ವಿಮಾನದಲ...
21-06-25 08:50 pm
Couple Caught at Jaipur Hotel, Video: ಹೋಟೆಲ್...
20-06-25 10:19 pm
Ayatollah Khamenei; ಭಾರತಕ್ಕೂ ಇರಾನ್ ಮುಖ್ಯಸ್ಥ ಅ...
20-06-25 09:15 pm
ದೆಹಲಿಯ ನ್ಯಾಯಾಧೀಶರ ನಿವಾಸದಲ್ಲಿ ಕಂತೆ ಕಂತೆ ನಗದು ;...
19-06-25 10:58 pm
21-06-25 11:04 pm
Mangaluru Correspondent
Krishnaveni Mines Geology, Mangalore;18 ದಿನ ಜ...
21-06-25 03:56 pm
Fake NEET Marksheet, Udupi Topper; ನಕಲಿ ನೀಟ್...
21-06-25 01:59 pm
Sakleshpur, Mangalore Bangalore Train; ಸಕಲೇಶಪ...
21-06-25 12:03 pm
Kudupu Murder, Sajith Shetty Post, Sudheer Ku...
20-06-25 11:04 pm
21-06-25 08:58 pm
Mangaluru Correspondent
Crime Mangalore, Bantwal Attack, Fake News; ಬ...
21-06-25 12:21 pm
Brahmavar, Udupi Murder, Crime: ಪತ್ನಿಗೆ ಮೊಬೈಲ...
20-06-25 02:04 pm
Mangalore, Bantwal Pregnant Woman Murder, Sui...
19-06-25 04:37 pm
Ccb Police, Bangalore, Drugs, crime: ಚೂಡಿದಾರ್...
17-06-25 05:06 pm