ಬ್ರೇಕಿಂಗ್ ನ್ಯೂಸ್
28-03-24 04:14 pm HK News Desk ಕರ್ನಾಟಕ
ದಾವಣಗೆರೆ, ಮಾ.28: ಬಿಜೆಪಿ ಬಂಡಾಯ ಮುಗಿಯುತ್ತಿದ್ದಂತೆ ದಾವಣಗೆರೆ ಕಾಂಗ್ರೆಸ್ ನಲ್ಲಿ ಭಿನ್ನಮತ ಭುಗಿಲೆದ್ದಿದೆ. ಕೈ ಟಿಕೆಟ್ ವಂಚಿತ ವಿನಯ್ ಕುಮಾರ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದಾರೆ.
ಅಹಿಂದ ವರ್ಗದ ಕಾಂಗ್ರೆಸ್ ನಾಯಕ ವಿನಯ್ ಕುಮಾರ್ ಪಕ್ಷದಿಂದ ದಾವಣಗೆರೆ ಟಿಕೆಟ್ ಪಡೆಯಲು ನಿರಂತರ ಪ್ರಯತ್ನ ನಡೆಸಿದ್ದರು. ಶಾಮನೂರು ಕುಟುಂಬಕ್ಕೆ ಟಿಕೆಟ್ ಘೋಷಣೆಯಾದ ನಂತರವೂ ದೆಹಲಿ ಮಟ್ಟದಲ್ಲಿ ಲಾಬಿ ನಡೆಸಿದ್ದರು. ಟಿಕೆಟ್ ಸಿಗಲ್ಲ ಎನ್ನೋದು ಖಾತ್ರಿಯಾಗುತ್ತಿದ್ದಂತೆ ಪಕ್ಷೇತರ ಸ್ಪರ್ಧೆಗೆ ಮುಂದಾಗಿದ್ದಾರೆ. ಹಿಂದೆ ಚೆನ್ನಯ್ಯ ಒಡೆಯರ್ ಗೆ ಆದಂತೆ ಮತ್ತೊಮ್ಮೆ ಘೋರ ಅನ್ಯಾಯ ಅಹಿಂದ ವರ್ಗಕ್ಕೆ ಆಗಿದೆ. ಬಹುತೇಕ ಡಿಸೈಡ್ ಮಾಡಿದ್ದೇನೆ, 100% ಬಂಡಾಯ ಸ್ಪರ್ಧಿಸಿ ಗೆಲ್ಲುತ್ತೇನೆ. ಒಂದು ಹೆಜ್ಜೆ ಮುಂದೇ ಇಟ್ಟರೆ ಹಿಂದೇ ತೆಗೆಯಲ್ಲ. ಶೀಘ್ರದಲ್ಲೆ ನಾಮಿನೇಷನ್ ದಿನಾಂಕ ತಿಳಿಸುತ್ತೇನೆ ಎಂದು ವಿನಯ ಕುಮಾರ್ ತಿಳಿಸಿದ್ದಾರೆ.
ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರೇ ನನಗೆ ಟಿಕೆಟ್ ತಪ್ಪಿಸಿದ್ದಾರೆ. ಅವರ ಪತ್ನಿಗೆ ಟಿಕೆಟ್ ಕೊಡಿಸಲು ನನ್ನನ್ನು ದೂರ ಇಟ್ಟಿದ್ದಾರೆ ಎಂದು ವಿನಯ ಕುಮಾರ್ ಆರೋಪಿಸಿದ್ದಾರೆ. ವಿನಯ್ ಕುಮಾರ್ ದಾವಣಗೆರೆಯವನು ಅಲ್ಲ ಎಂಬ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಹೇಳಿಕೆಗೆ ಪ್ರತಿಕ್ರಿಯಿಸಿದ ವಿನಯ್, ನಾನು ದಾವಣಗೆರೆಯಲ್ಲೇ ಹುಟ್ಟಿ ಬೆಳೆದಿರೋದು. ಸಚಿವರ ಒಡೆತನದ ಬಾಪೂಜಿ ಅಸ್ಪತ್ರೆಯಲ್ಲೆ ಹುಟ್ಟಿರೋದು. ದಾವಣಗೆರೆಯವನು ಅಲ್ಲ ಎಂದು ಟಿಕೆಟ್ ತಪ್ಪಿಸಿದ್ದೇವೆ ಎಂದು ಹೇಳಿದ್ದಾರೆ. ನಾನು ದಾವಣಗೆರೆಯವನೇ, ಮದುವೆ ಆಗಿರೋದು ದಾವಣಗೆರೆಯಲ್ಲೇ. ಈಗ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನನಗೆ ತಪ್ಪಿಸಿ ಅವರು ಟಿಕೆಟ್ ತಗೊಂಡಿದ್ದಾರೆ, ಅನ್ಯಾಯ ಮಾಡಿದ್ದಾರೆ ಎಂದು ಹೇಳಿದ್ದಾರೆ.
As soon as the BJP's rebellion ended, differences erupted in the Davanagere Congress. Vinay Kumar, who was denied a ticket, has announced that he will contest the elections as an independent.
17-05-25 01:44 pm
Bangalore Correspondent
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
19-05-25 01:46 pm
HK News Desk
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
ಡೊನಾಲ್ಡ್ ಟ್ರಂಪ್ ಟೀಕಿಸಿದ್ದ ಪೋಸ್ಟ್ ಡಿಲೀಟ್ ಮಾಡಿದ...
16-05-25 04:45 pm
19-05-25 12:31 pm
Mangalore Correspondent
Akanksha Death, Punjab, Dharmasthala, Mangalo...
18-05-25 12:42 pm
Ullal, U T Khader, Mangalore: ಎರಡು ವರ್ಷವಾದರೂ...
17-05-25 10:09 pm
Mangalore Balmatta Accident, Bus, Video: ನಿಂತ...
17-05-25 08:52 pm
Sakleshpur Subrahmanya Railway Electrificatio...
17-05-25 01:01 pm
18-05-25 07:45 pm
Mangaluru HK Staff
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm
Mangalore Stabbing, Panemangalore, Crime, Att...
16-05-25 11:06 pm
Belagavi Protest, Quran Burnt, Police, Crime:...
16-05-25 09:20 pm