Shobha Karandlaje car accident, Bangalore: ಪ್ರಚಾರದ ವೇಳೆ ಸಂಸದೆ ಶೋಭಾ ಕಾರಿನಿಂದ ಎಡವಟ್ಟು ; ಡೋರ್ ಓಪನ್ ವೇಳೆ ಬೈಕ್ ಡಿಕ್ಕಿ, ಬಿಜೆಪಿ ಕಾರ್ಯಕರ್ತ ಬಲಿ ! 

08-04-24 04:36 pm       Bangalore Correspondent   ಕರ್ನಾಟಕ

ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ಪ್ರಚಾರ ನಡೆಸುತ್ತಿದ್ದಾಗ ಅವಘಡ ನಡೆದಿದ್ದು ಪ್ರಚಾರದಲ್ಲಿ ಜೊತೆಗಿದ್ದ ಯುವಕನೊಬ್ಬ ಕಾರಿಗೆ ಡಿಕ್ಕಿಯಾಗಿ ಜೀವ ತೆತ್ತಿದ್ದಾನೆ.‌

ಬೆಂಗಳೂರು, ಎ.8: ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ಪ್ರಚಾರ ನಡೆಸುತ್ತಿದ್ದಾಗ ಅವಘಡ ನಡೆದಿದ್ದು ಪ್ರಚಾರದಲ್ಲಿ ಜೊತೆಗಿದ್ದ ಯುವಕನೊಬ್ಬ ಕಾರಿಗೆ ಡಿಕ್ಕಿಯಾಗಿ ಜೀವ ತೆತ್ತಿದ್ದಾನೆ.‌

ಮೃತನನ್ನು ಟಿಸಿ ಪಾಳ್ಯ ನಿವಾಸಿ ಪ್ರಕಾಶ್ (35) ಎಂದು ಗುರುತಿಸಲಾಗಿದೆ. ಬೆಂಗಳೂರಿನ ಕೆ.ಆರ್ ಪುರಂ ಸಮೀಪದ ದೇವಸಂದ್ರ ವಿನಾಯಕ ದೇವಸ್ಥಾನ ಬಳಿ ಕಾರನ್ನು ದಿಢೀರ್ ರಸ್ತೆ ಬದಿ ನಿಲ್ಲಿಸಿ ಡೋರ್ ಓಪನ್ ಮಾಡಿದಾಗ ಬೈಕಿನಲ್ಲಿ ಹಿಂಬದಿಯಿಂದ ಬಂದ ಸವಾರ ನೇರವಾಗಿ ಕಾರಿನ ಡೋರ್ ಗೆ ಡಿಕ್ಕಿಯಾಗಿದ್ದಾನೆ. ಕಾರ್ ಡೋರ್ ಗೆ ಡಿಕ್ಕಿಯಾಗಿ ಬೈಕ್ ಸಹಿತ ಕೆಳಗೆ ಬಿದ್ದಿದ್ದು ಸವಾರನ ಮೇಲೆ ಬಸ್ ಹರಿದು ಸಾವು ಕಂಡಿದ್ದಾನೆ. ಕೂಡಲೇ ಸ್ಥಳೀಯರು ಆಟೋದಲ್ಲಿ ಆಸ್ಪತ್ರೆಗೆ ದಾಖಲಿಸಿದರೂ ಬೈಕ್ ಸವಾರ ಬದುಕುಳಿಯಲಿಲ್ಲ. ಘಟನೆ ಬಳಿಕ ಪೊಲೀಸರು ಶೋಭಾ ಕರಂದ್ಲಾಜೆ ಕಾರನ್ನು ವಶಕ್ಕೆ ಪಡೆದಿದ್ದಾರೆ.

Chauvinist males want power only to be vested in them', Shobha Karandlaje  on 'Go Back' campaign against her - Mangalorean.com

ಘಟನೆ ಬಗ್ಗೆ ಸಂಸದೆ ಶೋಭಾ ಪ್ರತಿಕ್ರಿಯಿಸಿದ್ದು ಕಾರು ಅಪಘಾತದಲ್ಲಿ ಬಿಜೆಪಿ ಕಾರ್ಯಕರ್ತ ಪ್ರಕಾಶ್ ಸಾವನ್ನಪ್ಪಿದ್ದಾರೆ.‌ ಅಚಾನಕ್ ಕ್ಕಾಗಿ ಅವಘಡ ಸಂಭವಿಸಿದೆ. ಅವರ ಕುಟುಂಬದ ಜೊತೆ ನಾವಿದ್ದೇವೆ, ಎಲ್ಲ ಸವಲತ್ತುಗಳನ್ನು ಮಾಡಿಕೊಡುತ್ತೇವೆ ಎಂದು ತಿಳಿಸಿದ್ದಾರೆ.

Shobha Karandlaje car accident, BJP worker killed on spot. A BJP worker on a bike was killed after he reportedly crashed into the open door of a car belonging to Union Minister of State for Agriculture Shobha Karandlaje at KR Puram in Bengaluru, Karnataka on Monday.