ಬ್ರೇಕಿಂಗ್ ನ್ಯೂಸ್
15-04-24 06:47 pm HK News Desk ಕರ್ನಾಟಕ
ಬೆಳಗಾವಿ, ಏ.15: ಮಿಸ್ಟರ್ ಕುಮಾರಸ್ವಾಮಿ, ಮಿಸ್ಟರ್ ಕುಮಾರಸ್ವಾಮಿ, ನೀನು ಲೋಕಸಭಾ ಚುನಾವಣೆ ಗೆಲ್ಲಲ್ಲ. ನನ್ನ ಆಸ್ತಿ ಬಗ್ಗೆ ಮಾತಾಡ್ತೀಯಾ? ನಿಂದು ಎಷ್ಟಿತ್ತು, ನಿಮ್ಮ ಅಣ್ಣಂದು ಎಷ್ಟಿತ್ತು, ನಿಮ್ಮ ಕುಟುಂಬದ ಆಸ್ತಿ ಎಷ್ಟಿದೆ. ಬಾ ಅಸೆಂಬ್ಲಿಯಲ್ಲಿ ಮಾತಾಡೋಣ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಎಚ್ಡಿ ಕುಮಾರಸ್ವಾಮಿಗೆ ಬಹಿರಂಗ ಸವಾಲು ಹಾಕಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೆಣ್ಮಕ್ಳೆಲ್ಲಾ ತಿರುಗಿ ಬಿದ್ದಮೇಲೆ ಎಚ್ಡಿ ಕುಮಾರಸ್ವಾಮಿ ಅವರಿಗೆ ಈಗ ಜ್ಞಾನೋದಯವಾಗಿದೆ. ನನ್ನ ಮೇಲೂ ಹರಿಹಾಯ್ದಿದ್ದಾರೆ, ಇರಲಿ ಅವರಿಗೂ ನನಗೂ ಇದ್ದಿದ್ದೆ. ನಾನು ಅವರಿಗೆ ಈ ಹಿಂದೆನೆ ಹೇಳಿದ್ದೇನೆ, ನೀನು ಹೇಗಿದ್ರು ಎಂಪಿಯಾಗಿ ಹೋಗೋದಿಲ್ಲ, ಅದು ಬೇರೆ ಮಾತು ಬಿಡಿ. ಈ ಹಿಂದೆಯೇ ನನ್ನ ಬಗ್ಗೆ ಚರ್ಚೆ ಮಾಡೋಕೆ ಟಿವಿಗೆ ಕರೀರಿ ಬರ್ತಿನಿ, ಇಲ್ಲ ವಿಧಾನಸಭೆಯಲ್ಲೇ ಮಾತಾಡೋಣ ಎಂದಿದ್ದೆ. ಯಾಕಂದ್ರೆ ಆಸ್ತಿ ಬಗ್ಗೆ ಮಾತನಾಡುವಾಗ ದಾಖಲೆ ಇರಬೇಕಲ್ಲ ಎಂದರು.
ನಾನ್ಯಾವುದೋ ಹೆಣ್ಮಗಳನ್ನು ಕರ್ಕೊಂಡು ಹೋಗಿ ಆಸ್ತಿ ಬರೆಸಿಕೊಂಡಿದ್ದೇನೆ ಅಂತೆ. ಮಿಸ್ಟರ್ ಕುಮಾರಸ್ವಾಮಿ, ಮಿಸ್ಟರ್ ಕುಮಾರಸ್ವಾಮಿ, ನೀನು ಲೋಕಸಭಾ ಚುನಾವಣೆ ಗೆಲ್ಲಲ್ಲ. ಹೆದರಿಕೊಂಡು ನಿನ್ನ ಕ್ಷೇತ್ರ ಬಿಟ್ಟು, ಪಕ್ಕದ ಕ್ಷೇತ್ರಕ್ಕೆ ಹೋಗಿದೀಯಾ ಹೋಗು. ನಿಂಗೆ ಹೋಗೋಕೆ ಹಕ್ಕಿದೆ, ಹೋಗಿದೀಯಾ. ಇದನ್ನು ವಿಧಾನಸಭೆಯಲ್ಲಿ ಚರ್ಚೆ ಮಾಡೋಣ ಬನ್ನಿ. ಯಾಕೆಂದ್ರೆ ನಮ್ಮ ಜನರೇಷನ್ ನೀನೆಂಥ ಸುಳ್ಳುಗಾರ, ನೀನೆಂಥ ಮೋಸಗಾರ ಎಂಬುದನ್ನು ನೋಡಬೇಕು. ನಿಂದು ಎಷ್ಟಿತ್ತು, ನಿಮ್ಮ ಅಣ್ಣಂದು ಎಷ್ಟಿತ್ತು, ನಿಮ್ಮ ಕುಟುಂಬದ ಆಸ್ತಿ ಎಷ್ಟಿದೆ. ಬಾ ಅಸೆಂಬ್ಲಿಯಲ್ಲಿ ಮಾತಾಡೋಣ ಎಂದು ಬಹಿರಂಗ ಸವಾಲು ಹಾಕಿದ ಅವರು, ನಾನು ಕಲ್ಲು ಮಾರಿದ್ನೋ, ಕಳ್ಳತನ ಮಾಡಿದ್ನೋ ಎಂಬುದು ಅಸೆಂಬ್ಲಿಯಲ್ಲೇ ತೀರ್ಮಾನ ಆಗಲಿ ಎಂದು ಹೇಳಿದರು.
ಮಹಿಳೆಯರಿಗೆ ಅನುಕೂಲ ಆಗಲಿ ಎಂದು ಉಚಿತ ಬಸ್ ಹಾಗೂ 2 ಸಾವಿರ ರೂ. ಕೊಡುತ್ತಿದ್ದೇವೆ. ಅದನ್ನು ನೀನು ಹೋಗಿ ಹೆಣ್ಮಕ್ಳು ದಾರಿ ತಪ್ತಿದ್ದಾರೆ ಅಂದ್ರೇ ಏನರ್ಥ. ನಮ್ಮ ಹೆಣ್ಮಕ್ಳೇನು ದಡ್ಡರು ಅನ್ಕೊಂಡಿದೀರಾ ಎಂದು ಪ್ರಶ್ನಿಸಿದರು.
DK Shivakumar slams Kumaraswamy says he wont win, we will discuss how much money you and your brother did, lets discuss that in the assembly he added.
02-09-25 11:04 pm
Bangalore Correspondent
Sowjanya Case, Dharmasthala: ಸೌಜನ್ಯಾ ಪ್ರಕರಣ ;...
02-09-25 08:37 pm
ಮಕ್ಕಳ ಕಳ್ಳರು ಹೀಗೂ ಮಾಡುತ್ತಾರೆ..! ಶಾಲಾ ವಾಹನ ಎಂದ...
02-09-25 08:00 pm
Ranya Rao: ಚಿನ್ನ ಸ್ಮಗ್ಲರ್ ರನ್ಯಾ ರಾವ್ ಗೆ ಮತ್ತೆ...
02-09-25 06:22 pm
Dharmasthala ED: ಧರ್ಮಸ್ಥಳ ಪ್ರಕರಣದಲ್ಲಿ ಇಡಿ ಎಂಟ...
02-09-25 02:37 pm
01-09-25 01:06 pm
HK News Desk
ಮೋದಿ ಜಪಾನ್ ಪ್ರವಾಸದಲ್ಲಿ 13 ಒಪ್ಪಂದಗಳಿಗೆ ಸಹಿ ; ರ...
31-08-25 01:32 pm
Kannur Blast ; ಕಣ್ಣೂರಿನ ಮನೆಯಲ್ಲಿ ಭಾರೀ ಸ್ಫೋಟ ;...
31-08-25 01:04 pm
ಟ್ರಂಪ್ ಸುಂಕ ನೀತಿ ಕಾನೂನುಬಾಹಿರ ; ಅಮೆರಿಕದ ಫೆಡರಲ್...
31-08-25 12:00 pm
ಹಿಮಂತ ಬಿಸ್ವ ಶರ್ಮಗೆ ಟಿಕೆಟ್ ಕೊಡಬೇಡಿ ಎಂದು ಸೋನಿಯಾ...
30-08-25 06:44 pm
02-09-25 10:26 pm
Mangalore Correspondent
Mangalore Mukka Accident: ಮುಕ್ಕ ಜಂಕ್ಷನ್ನಲ್ಲಿ...
02-09-25 04:44 pm
Bribe Puttur, Tahsildar Absconding, Lokayukta...
02-09-25 02:17 pm
ಮಗನಿಗೆ ಇಲ್ಲ ಉದ್ಯೋಗ ; ಮುಂಬೈನಿಂದ ಉಡುಪಿಗೆ ಬಂದು ಆ...
02-09-25 01:05 pm
ಧರ್ಮಸ್ಥಳ ಚಲೋ ಬೆನ್ನಲ್ಲೇ ಸೌಜನ್ಯಾ ಮನೆಗೆ ಭೇಟಿಯಿತ್...
01-09-25 10:01 pm
02-09-25 07:09 pm
Mangalore Correspondent
Valachil, Rape, College, Mangalore Crime: ಇನ್...
02-09-25 04:31 pm
Mangalore Auto Driver, Fake story, Falnir att...
02-09-25 11:22 am
Udupi, Brahmavar Suicide: 16 ವರ್ಷ ಹಿಂದಿನ ಕೊಲೆ...
01-09-25 09:21 pm
ಹೌಸಿಂಗ್ ಫೈನಾನ್ಸ್ ಹೆಸರಲ್ಲಿ ಬ್ಯಾಂಕ್ ಸಿಬಂದಿಯಿಂದಲ...
01-09-25 03:07 pm