ಬ್ರೇಕಿಂಗ್ ನ್ಯೂಸ್
28-06-24 07:06 pm HK News Desk ಕರ್ನಾಟಕ
ಬೆಳಗಾವಿ, ಜೂ 28: ಹಣಕ್ಕೆ ಬೇಡಿಕೆಯಿಟ್ಟು ಹೆಸ್ಕಾಂ ಅಧಿಕಾರಿ ವಿರುದ್ಧ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸಿದ ಆರೋಪದ ಮೇಲೆ ದೂರುದಾರೆ ಸೇರಿದಂತೆ 13 ಮಂದಿಗೆ ಆರೋಪಿಗಳಿಗೆ ಬೆಳಗಾವಿ ಜಿಲ್ಲಾ ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ಹಾಗೂ 86 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.
ಬಿ.ವಿ.ಸಿಂಧು ಸುಳ್ಳು ಕೇಸ್ ದಾಖಲಿಸಿ ಜೈಲು ಸೇರಿರುವ ಮಹಿಳೆ. ಅಪರಾಧಿ ಸಿಂಧು ಅಂದಿನ ಹೆಸ್ಕಾಂ ಸಹಾಯಕ ಅಧೀಕ್ಷಕ ಅಭಿಯಂತರರಾದ ತುಕಾರಾಮ್ ಮಜ್ಜಿಗೆ ವಿರುದ್ಧ ಅತ್ಯಾಚಾರ ಹಾಗೂ ಜೀವ ಬೆದರಿಕೆ ಕೇಸ್ ದಾಖಲಿಸಿದ್ದಳು. ಸುಳ್ಳು ಕೇಸ್ ಎಂದು ವಿಚಾರಣೆ ವೇಳೆ ಸಾಬೀತಾದ ಹಿನ್ನೆಲೆ ದೂರುದಾರೆ ಬಿ.ವಿ ಸಿಂಧು ಸೇರಿ 13 ಜನರಿಗೆ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ.
2014ರ ನವೆಂಬರ್ 19ರಂದು ಬೆಳಗಾವಿ ಜಿಲ್ಲೆಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ, ಜೀವ ಬೆದರಿಕೆ, ಆತ್ಮಹತ್ಯೆ ಪ್ರಚೋದನೆ ಆರೋಪ ಮಾಡಿ ಮಹಿಳೆಯೊಬ್ಬರು ಕೇಸ್ ದಾಖಲು ಮಾಡಿದ್ದರು. ಈ ಪ್ರಕರಣದಲ್ಲಿ ವಿಚಾರಣೆ ನಡೆಸಿದ ಮಾಳಮಾರುತಿ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದರು. ಅತ್ಯಾಚಾರ, ಜೀವ ಬೆದರಿಕೆ ಹಾಕಿದ್ದು ಸುಳ್ಳು ಎಂದು ತನಿಖೆಯಲ್ಲಿ ಬಯಲಾಗಿತ್ತು. ವಿಚಾರಣೆ ವೇಳೆ ಪ್ರಕರಣದ ಇತರೆ ಆರೋಪಿಗಳಿಂದ ಪ್ರಭಾವಿತಳಾಗಿ ಸುಳ್ಳು ದೂರು ದಾಖಲಿಸಿದ್ದಾಗಿ ಸಿಂಧು ತಪ್ಪೊಪ್ಪಿಕೊಂಡಿದ್ದಳು.
2017ರಲ್ಲಿ ದೂರುದಾರೆ ಸಿಂಧು ಸೇರಿದಂತೆ ಪ್ರಕರಣದ ಇತರೆ ಆರೋಪಿಗಳ ವಿರುದ್ಧ ತುಕಾರಾಮ್ ಮಜ್ಜಿಗೆ ನ್ಯಾಯಾಲಯದ ಮೆಟ್ಟಿಲೇರಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ 13 ಜನ ಸಾಕ್ಷಿದಾರರಿಂದ 81 ಸಾಕ್ಷಿಗಳನ್ನು ಪೊಲೀಸರು ಸಂಗ್ರಹಿಸಿದ್ದರು. ಏಳು ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ಆರೋಪಿಗಳಿಗೆ 3 ವರ್ಷ ಜೈಲು ಶಿಕ್ಷೆ, ತಲಾ 86 ಸಾವಿರ ರೂಪಾಯಿ ದಂಡ ವಿಧಿಸಿ ನ್ಯಾಯಮೂರ್ತಿ ಆದೇಶ ಹೊರಡಿಸಿದ್ದಾರೆ.
The principal district and sessions court of Belagavi on Thursday sentenced 13 people to imprisonment in a case of false rape accusations against their superior officer at the local Hescom office. The court sentenced them, including a woman - the main accused - to three years and six months of imprisonment and fined them Rs 86,000 each. The district and session court judge L Vijayalakshmi Devi pronounced the verdict on Thursday.
30-06-24 10:41 pm
Bangalore Correspondent
Pranavanandasree Agraha, BK Hariprasad: ಸಿದ್ದ...
30-06-24 09:56 pm
Veerappa Moily daughter Hamsa death: ಮಾಜಿ ಮುಖ...
30-06-24 06:46 pm
Byrathi Suresh, S. R. Vishwanath; ಕಾಂಗ್ರೆಸ್ ಸ...
29-06-24 07:46 pm
2028ರಲ್ಲಿ ನಾನೇ ಮುಖ್ಯಮಂತ್ರಿ ಆಗುತ್ತೇನೆ ; ಸಿಎಂ ಹ...
29-06-24 04:47 pm
30-06-24 11:48 pm
Headline Karnataka News
Lonavalas Bhushi Dam: ಲೋನಾವಾಲಾ ಜಲಪಾತಕ್ಕೆ ಜಾರಿ...
30-06-24 09:43 pm
ಚೀನಾ ಗಡಿಯಲ್ಲಿ ತರಬೇತಿ ನಿರತ ಐವರು ಯೋಧರು ಪ್ರವಾಹಕ್...
29-06-24 07:21 pm
NTA, UGC, NET exam; ನೆಟ್ ಮರು ಪರೀಕ್ಷೆಗೆ ದಿನಾಂಕ...
29-06-24 02:56 pm
48 ವರ್ಷಗಳ ಬಳಿಕ ಸ್ಪೀಕರ್ ಸ್ಥಾನಕ್ಕೆ ಚುನಾವಣೆ ; ಎನ...
26-06-24 05:50 pm
30-06-24 10:55 pm
Udupi Correspondent
Mangalore rain, bajal: ಮಳೆ ಅವಾಂತರ ; ಬಜಾಲ್ನಲ್...
30-06-24 09:00 pm
CAMPCO L. N. Kudoor: ಕ್ಯಾಂಪ್ಕೋ ಸಂಸ್ಥೆಯ ಮಾಜಿ ಅ...
30-06-24 12:57 pm
ಪ್ರಮಾಣ ಸ್ವೀಕರಿಸಿ ಬಂದ ನೂತನ ಸಂಸದ ಕ್ಯಾಪ್ಟನ್ ಬ್ರಿ...
29-06-24 11:17 pm
Mangalore MLC Ivan D'Souza: ನೀಟ್ ವ್ಯವಸ್ಥೆಯಿಂ...
29-06-24 10:54 pm
30-06-24 08:12 pm
Bangalore Correspondent
Prison officer having sex, Linda De Sousa ; ಕ...
29-06-24 09:52 pm
Online fraud, Srilanka; ಆನ್ಲೈನ್ ವಂಚನೆ ; ಶ್ರೀಲ...
29-06-24 01:21 pm
Bangalore crime, baby, train: ರೈಲು ಬೋಗಿಯ ಡಸ್ಟ...
27-06-24 05:10 pm
Tumkur police, crime, Child Trafficking: ತುಮಕ...
27-06-24 01:34 pm