ಬ್ರೇಕಿಂಗ್ ನ್ಯೂಸ್
26-09-24 06:11 pm Bangalore Correspondent ಕರ್ನಾಟಕ
ಬೆಂಗಳೂರು, ಸೆ.26: ಪತ್ರಕರ್ತರ ದಶಕಗಳ ಬೇಡಿಕೆಯಾದ ಗ್ರಾಮೀಣ ಪತ್ರಕರ್ತರಿಗೆ ಆಯಾ ಜಿಲ್ಲೆಯಲ್ಲಿ ವೃತ್ತಿ ಸಂಬಂಧಿತ ಉದ್ದೇಶಕ್ಕಾಗಿ ಸಂಚರಿಸಲು ಸಾರಿಗೆ ನಿಗಮದಿಂದ ಉಚಿತ ಬಸ್ ಪಾಸ್ ಒದಗಿಸುವ ಸೌಲಭ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆಯಂತೆ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವಾಲಯದಿಂದ ಅಧಿಕೃತ ಆದೇಶ ಹೊರಬಿದ್ದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024-25ರ ಬಜೆಟ್ ಸಂದರ್ಭದಲ್ಲಿ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡಲಾಗುವುದು ಎಂದು ಘೋಷಣೆ ಮಾಡಿದ್ದರು. ಇದೀಗ ಭರವಸೆಯನ್ನು ಈಡೇರಿಸಿ ನುಡಿದಂತೆ ನಡೆದು ಬದ್ಧತೆ ತೋರಿಸಿದ್ದಾರೆ. ಉಚಿತ ಬಸ್ ಪಾಸ್ ಬೇಡಿಕೆಯನ್ನು ದಡ ಮುಟ್ಟಿಸುವಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರ ನಿರಂತರ ಶ್ರಮಕ್ಕೆ ಸಾರ್ಥಕತೆ ದೊರೆತಿದೆ.
ಪಾಸ್ ಪಡೆಯಲು ಮಾನದಂಡ ಏನೇನು ?
ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿ ಹೆಸರು ಹೊಂದಿರಬೇಕು. ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮೀಣ ಭಾಗದ ಪತ್ರಕರ್ತರಿಗೆ ವೃತ್ತಿ ಸಂಬಂಧಿತ ಉದ್ದೇಶಕ್ಕೆ ಸಂಚರಿಸಲು ಉಚಿತ ಬಸ್ ಪಾಸ್ ನೀಡಲಾಗುವುದು. ರಾಜ್ಯಾದ್ಯಂತ ಇಲಾಖೆಯ ಮಾಹಿತಿ ಅನುಸಾರ ಅಧಿಕೃತ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡುವ 5222 ಗ್ರಾಮೀಣ ಪತ್ರಕರ್ತರಿದ್ದು ಕೆಎಸ್ಸಾರ್ಟಿಸಿಯಿಂದ ಒಬ್ಬರಿಗೆ ತಿಂಗಳಿಗೆ ಅಂದಾಜು 2500 ರೂ. ವ್ಯಯಿಸಲು ಒಪ್ಪಿಗೆ ನೀಡಿದೆ. ಇದಕ್ಕಾಗಿ ರಾಜ್ಯದಲ್ಲಿ ತಿಂಗಳಿಗೆ 1.30 ಕೋಟಿ ರೂ. ಹಾಗೂ ವರ್ಷಕ್ಕೆ 15.66 ಕೋಟಿಯ ಲೆಕ್ಕ ಹಾಕಲಾಗಿದೆ. ಈ ಯೋಜನೆಯನ್ನು ರಾಜ್ಯ ಸಾರಿಗೆ ಸಂಸ್ಥೆಯ ಸಹಯೋಗದಲ್ಲಿ ಕಾರ್ಯರೂಪಕ್ಕೆ ತರಲು ಯೋಜಿಸಲಾಗಿದೆ.
ಅರ್ಜಿದಾರರು ಅಧಿಕೃತ ಮಾಧ್ಯಮ ಸಂಸ್ಥೆಗಳಲ್ಲಿ ಪೂರ್ಣಾವಧಿಗೆ ನೇಮಕವಾಗಿದ್ದು ಕನಿಷ್ಠ ನಾಲ್ಕು ವರ್ಷ ಆಗಿರಬೇಕು. ನೇಮಕಾತಿ ಪತ್ರ, ಬ್ಯಾಂಕ್ ಸ್ಟೇಟ್ ಮೆಂಟ್ ಹಾಗೂ ಸೇವಾನುಭವಕ್ಕೆ ದಾಖಲೆ ಒದಗಿಸಬೇಕು. ಸಾಮಾನ್ಯ ಮನರಂಜನೆ ಇನ್ನಿತರ ವಿದ್ಯುನ್ಮಾನ ಮಾಧ್ಯಮಗಳಿಗೆ ಬಸ್ ಪಾಸ್ ನೀಡಲಾಗುವುದಿಲ್ಲ. ಈ ಯೋಜನೆ ಜಿಲ್ಲಾ ಮಟ್ಟದಲ್ಲಿ ಸಂಚರಿಸುವ ಸಾರಿಗೆ ನಿಗಮದ ಎಲ್ಲ ರೀತಿಯ ಬಸ್ ಗಳಿಗೆ ಅನ್ವಯ ಆಗಲಿದೆ. ಆಸಕ್ತರು ಮಾಧ್ಯಮ ಸಂಸ್ಥೆಯ ಮುಖ್ಯಸ್ಥರ ಶಿಫಾರಸಿನೊಂದಿಗೆ ನಿಗದಿತ ನಮೂನೆಯ ಅರ್ಜಿಗಳನ್ನು ಭರ್ತಿಗೊಳಿಸಿ ವಾರ್ತಾ ಇಲಾಖೆಯ ಜಿಲ್ಲಾ ಕಚೇರಿಗೆ ತಲುಪಿಸಬೇಕು. ಜಿಲ್ಲಾ ಕೇಂದ್ರಗಳ ಪಟ್ಟಿಯನ್ನು ಕ್ರೋಡೀಕರಿಸಿ ಆಯಾ ಜಿಲ್ಲೆಗಳ ಸಾರಿಗೆ ನಿಗಮಕ್ಕೆ ಒಪ್ಪಿಸಲಾಗುವುದು. ಸದರಿ ಸಂಸ್ಥೆಯು ಮುದ್ರಿಸಿ ಕೊಡುವ ಬಸ್ ಪಾಸ್ ಗಳನ್ನು ವಾರ್ತಾ ಇಲಾಖೆಯಿಂದ ವಿತರಿಸಲಾಗುವುದು. ಈ ಬಸ್ ಪಾಸ್ ಅವಧಿ ಎರಡು ವರ್ಷ ಆಗಿರುತ್ತದೆ. ಜಿಲ್ಲಾ ಮಾಧ್ಯಮ ಪಟ್ಟಿಯಲ್ಲಿರುವ ಸುದ್ದಿ ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವ, ಮಾಧ್ಯಮ ಮಾನ್ಯತೆ ಪತ್ರ ಪಡೆಯದ ಪತ್ರಕರ್ತರು ಈ ಸೌಲಭ್ಯ ಪಡೆಯಬಹುದು. ಅರ್ಜಿದಾರರು ತಹಸೀಲ್ದಾರ್ ರಿಂದ ಪಡೆಯುವ ವಾಸಸ್ಥಳದ ಪ್ರಮಾಣಪತ್ರವನ್ನು ಅರ್ಜಿಯ ಜೊತೆಗೆ ಲಗತ್ತಿಸಬೇಕು ಎಂದು ಈ ಕುರಿತ ಮಾರ್ಗದರ್ಶಿ ಸೂತ್ರದಲ್ಲಿ ತಿಳಿಸಲಾಗಿದೆ.
Official order issued for free bus pass by CM to Rural Journalists in karnataka.
26-09-24 06:11 pm
Bangalore Correspondent
Sandhya Pavitra Nagaraj, Honeytrap, Bhaskar P...
25-09-24 10:48 pm
Bangalore train traffic, Video: ರೈಲಿಗೂ ತಟ್ಟಿದ...
25-09-24 09:46 pm
Siddaramaiah, Muda scam, Lokayukta: ಸಿದ್ದರಾಮಯ...
25-09-24 09:19 pm
ರಾಜ್ಯ ಸರ್ಕಾರಕ್ಕೆ ಮತ್ತೊಂದು ಸಂಕಷ್ಟ ; ವಾಲ್ಮೀಕಿ ಹ...
25-09-24 06:23 pm
25-09-24 05:36 pm
HK News Desk
ಪ್ರಾಣಿಜನ್ಯ ಕೊಬ್ಬಿನ ಬೆನ್ನಲ್ಲೇ ತಿರುಪತಿ ಲಡ್ಡಿನಲ್...
23-09-24 07:01 pm
Arjun missing truck, Shiruru: ಶಿರೂರು ಗುಡ್ಡ ಕು...
21-09-24 08:05 pm
ರಾಜಕೀಯ ಬಿರುಗಾಳಿ ಎಬ್ಬಿಸಿದ ತಿರುಪತಿ ಲಡ್ಡು ವಿವಾದ ...
21-09-24 06:36 pm
ಲೆಬನಾನಲ್ಲಿ ಪೇಜರ್ ಸ್ಫೋಟ ; ವಯನಾಡಿನಲ್ಲಿ ಸುದ್ದಿ ಸ...
21-09-24 05:49 pm
26-09-24 10:49 pm
Mangalore Correspondent
VHP Mangalore, Tirupati Laddu: ತಿರುಪತಿ ಲಡ್ಡು...
26-09-24 08:59 pm
Manjunath Bhandary, Mangalore, CM Siddaramaia...
26-09-24 07:36 pm
Brijesh Chowta, Mangalore, Hardeep Singh: ಮಂಗ...
25-09-24 09:03 pm
PB Desa Death, Mangalore: ಕರಾವಳಿಯ ಖ್ಯಾತ ಮಾನವ...
25-09-24 08:54 pm
26-09-24 11:07 pm
Richard, HK News Desk
Bangalore Murder case, Suicide, Death Note; ಮ...
26-09-24 02:41 pm
Bangalore Murder, Accused Suicide: ಮಹಾಲಕ್ಷ್ಮಿ...
26-09-24 12:34 pm
ಉಪ್ಪಳದ ನಟೋರಿಯಸ್ ಗ್ಯಾಂಗ್ ಲೀಡರ್ ಕಾಲಿಯಾ ರಫೀಕ್ ಹತ...
25-09-24 11:28 pm
Karwar Murder, Crime, Suicide: ಹಣಕೋಣ ಉದ್ಯಮಿ ಕ...
25-09-24 10:32 pm