Mysuru Dasara 2024, Prathap simha: ಮೈಸೂರು ದಸರಾ ವಿಭಿನ್ನ ಅಲ‌ಂಕಾರಕ್ಕೆ ಆಕ್ಷೇಪ ; ಹಸಿರಿನ ಬಣ್ಣದ ಚಪ್ಪರ, ಗುಂಬಜ್ ಆಕೃತಿಗೆ ವಿರೋಧ, ತೆರವುಗೊಳಿಸಲು ಪ್ರತಾಪಸಿಂಹ ಆಗ್ರಹ 

03-10-24 02:52 pm       HK News Desk   ಕರ್ನಾಟಕ

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನೆಲೆ ಹಾಕಿರುವ ಹಸಿರು ಚಪ್ಪರ ಮತ್ತು ಗುಂಬಜ್ ಆಕೃತಿ ಮತ್ತೆ ವಿವಾದಕ್ಕೆ ಕಾರಣವಾಗಿದೆ. ನಗರದ ಸಯ್ಯಜಿ ರಾವ್ ರಸ್ತೆಯಲ್ಲಿನ ಹಸಿರು ಚಪ್ಪರದಲ್ಲಿ ಈ ಬಾರಿ ವಿಭಿನ್ನವಾಗಿ ಹಸಿರಿನ ಬಣ್ಣದಲ್ಲಿ ವಿದ್ಯುತ್ ಅಲಂಕಾರ ಮಾಡಿದ್ದು ನಡುವೆ ಗುಂಬಜ್ ಆಕೃತಿ ಬಿಡಿಸಲಾಗಿದೆ. ಇದನ್ನು ಮಾಜಿ ಸಂಸದ ಪ್ರತಾಪಸಿಂಹ ಆಕ್ಷೇಪಿಸಿದ್ದಾರೆ.‌

ಮೈಸೂರು, ಅ.3: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನೆಲೆ ಹಾಕಿರುವ ಹಸಿರು ಚಪ್ಪರ ಮತ್ತು ಗುಂಬಜ್ ಆಕೃತಿ ಮತ್ತೆ ವಿವಾದಕ್ಕೆ ಕಾರಣವಾಗಿದೆ. ನಗರದ ಸಯ್ಯಜಿ ರಾವ್ ರಸ್ತೆಯಲ್ಲಿನ ಹಸಿರು ಚಪ್ಪರದಲ್ಲಿ ಈ ಬಾರಿ ವಿಭಿನ್ನವಾಗಿ ಹಸಿರಿನ ಬಣ್ಣದಲ್ಲಿ ವಿದ್ಯುತ್ ಅಲಂಕಾರ ಮಾಡಿದ್ದು ನಡುವೆ ಗುಂಬಜ್ ಆಕೃತಿ ಬಿಡಿಸಲಾಗಿದೆ. ಇದನ್ನು ಮಾಜಿ ಸಂಸದ ಪ್ರತಾಪಸಿಂಹ ಆಕ್ಷೇಪಿಸಿದ್ದಾರೆ.‌

ಹಸಿರು ಬಣ್ಣದ ಅಲ‌ಂಕಾರ ಜೊತೆಗೆ ಚಪ್ಪರದ ಮೇಲ್ಭಾಗದಲ್ಲಿ ಹಸಿರಿನ ‘ಗುಂಬಜ್’ ಹೋಲುವ ಮಾದರಿಯನ್ನು ನಿರ್ಮಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಸಂಬಂಧ ಫೇಸ್‌ಬುಕ್ ಖಾತೆಯಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಫೋಟೋ ಹಂಚಿಕೊಂಡಿದ್ದು ಇದನ್ನು ಬದಲಾಯಿಸಲು ಹೇಳಿದ್ದೇನೆ ಎಂದು ಪೋಸ್ಟ್ ಹಾಕಿದ್ದಾರೆ. 

ಈ ಬಗ್ಗೆ ಜಾಲತಾಣದಲ್ಲಿ ಪರ, ವಿರೋಧ ಚರ್ಚೆ ವ್ಯಕ್ತವಾಗಿದೆ. ಈ ಹಿಂದೆ ನಗರದ ಊಟಿ ರಸ್ತೆಯ ಜೆಎಸ್‌ಎಸ್ ಕಾಲೇಜಿನ ಬಳಿಯ ಬಸ್ ನಿಲ್ದಾಣದಲ್ಲಿ ಗುಂಬಜ್ ಮಾದರಿ ನಿರ್ಮಿಸಿದ್ದು, ವಿವಾದಕ್ಕೆ ಕಾರಣವಾಗಿತ್ತು. ಬಳಿಕ ಬಸ್ ನಿಲ್ದಾಣದ ಮೇಲಿನ ಮೂರು ಗುಂಬಜ್‌ಗಳಲ್ಲಿ ಎರಡನ್ನು ತೆರವುಗೊಳಿಸಲಾಗಿತ್ತು. ಇದೀಗ ದಸರಾ ಮಹೋತ್ಸವದ ಉದ್ಘಾಟನೆ ವೇಳೆ ಅಂತಹದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

Objection to different decoration of Mysore Dasara 2024, prathap simha sparks controversy in Mysuru.