ಬ್ರೇಕಿಂಗ್ ನ್ಯೂಸ್
18-10-24 10:57 pm Bangalore Correspondent ಕರ್ನಾಟಕ
ಬೆಂಗಳೂರು, ಅ.18: ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಸೈಟ್ ಹಂಚಿಕೆ ಹಗರಣದಲ್ಲಿ ಇಡಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು ಮೈಸೂರಿನ ಮುಡಾ ಕಚೇರಿಗೆ ದಾಳಿ ನಡೆಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಪತ್ನಿಯ ಸೈಟ್ ಮೂಲ ದಾಖಲೆ ಪಡೆಯಲು ಮುಂದಾಗಿದ್ದಾರೆ. ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ಸೈಟ್ಗಳ ಮೂಲ ದಾಖಲೆ ಕೊಡುವಂತೆ ಮುಡಾ ಅಧಿಕಾರಿಗಳಿಗೆ ಇಡಿ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಮುಡಾ ಆಯುಕ್ತ ಹಾಗು ಕಾರ್ಯದರ್ಶಿಗೆ ಶುಕ್ರವಾರ ಇಡೀ ದಿನ ಇಡಿ ಅಧಿಕಾರಿಗಳು ಕ್ಲಾಸ್ ತೆಗೆದುಕೊಂಡಿದ್ದು, ಇಡಿ ಪ್ರಶ್ನೆಗೆ ಮುಡಾ ಅಧಿಕಾರಿಗಳು ತಬ್ಬಿಬ್ಬಾಗಿದ್ದಾರೆ. ಸಿದ್ದರಾಮಯ್ಯ ಅವರ ಪತ್ನಿ ಶ್ರೀಮತಿ ಪಾರ್ವತಿ ಅವ್ರ ಸೈಟು ಮೂಲ ದಾಖಲಾತಿ ಕೊಡಿ. ವೈಟ್ನರ್ ಹಾಕಿದ್ದ ದಾಖಲೆ ಕೊಡಿ. ಮೂಲ ದಾಖಲೆ ಎಲ್ಲಿದೆ? ಎಂದು ಪ್ರಶ್ನಿಸಿದ್ದಾರೆ.
ಸರಿಯಾದ ದಾಖಲೆ ಕೊಡಿ, ಇಲ್ಲದಿದ್ದರೆ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಅಂತ ಇಡಿ ಅಧಿಕಾರಿಗಳು ಮುಡಾ ಸಿಬಂದಿಯನ್ನು ಎಚ್ಚರಿಸಿದ್ದಾರೆ. ನಾವು ಹೊಸಬರು ಸರ್, ಕಳೆದ ತಿಂಗಳಷ್ಟೇ ಹೊಸದಾಗಿ ಮುಡಾಗೆ ಬಂದಿದ್ದೇವೆ. ನಮಗೂ ಇದಕ್ಕೂ ಸಂಬಂಧವಿಲ್ಲ. ದಯಮಾಡಿ ಈ ವಿಚಾರದಲ್ಲಿ ನಮ್ಮನ್ನು ಬಿಡಿ. ಇಲ್ಲಿರುವ ದಾಖಲೆಗಳನ್ನು ಕೊಡ್ತೇವೆ. ನೀವು ಕೇಳಿದ ಕೆಲ ದಾಖಲೆಗಳ ಪೈಕಿ ಇರುವ ದಾಖಲೆಯನ್ನು ಕೊಡ್ತೀವಿ ಅಂತ ಮುಡಾ ಅಧಿಕಾರಿಗಳು ಇಡಿ ಅಧಿಕಾರಿಗಳ ಮುಂದೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
2010ರ ವರೆಗೆ 800 ಪುಟಗಳ ದಾಖಲಾತಿಗಳ ಜೆರಾಕ್ಸ್ ಪ್ರತಿಗಳನ್ನು ಮುಡಾ ಅಧಿಕಾರಿಗಳು ನೀಡಿದ್ದಾರಂತೆ. ಆದರೆ ನಮಗೆ ಈ ದಾಖಲಾತಿ ಬೇಡ. ಪಾರ್ವತಿ ಅವರಿಗೆ ಸೈಟು ವರ್ಗಾವಣೆಯಾದ ದಾಖಲೆ ಕೊಡಿ. 50:50 ಅನುಪಾತದ ಅಡಿಯಲ್ಲಿ ಹಂಚಿಕೆಯಾಗಿರುವ ದಾಖಲೆ ಕೊಡಿ ಎಂದು ಪಟ್ಟು ಹಿಡಿದಿದ್ದಾರೆ.
A team of 12 Enforcement Directorate officials searched the city office of the Mysuru Urban Development Authority Friday in connection with the money laundering case against Karnataka Chief Minister Siddaramaiah. The Congress leader - who has refused to comment on the raids - and his family face state and federal charges over allegations they profited from an exchange of land allotments by MUDA.
18-10-24 10:57 pm
Bangalore Correspondent
Big boss Kannada, Colours: ಬಿಗ್ ಬಾಸ್ ಶೋಗೆ ಮತ್...
18-10-24 05:32 pm
ನಾಗೇಂದ್ರ ವಂಚನೆ ಮಾಡಿರೋದನ್ನ ಕಿರುಪುಸ್ತಕ ಮಾಡಿ ಹಂಚ...
18-10-24 04:12 pm
Pralhad Joshi, BJP, Ticket fraud: ಲೋಕಸಭೆ ಟಿಕೆ...
18-10-24 04:00 pm
Vijaypur, Baby dies pit: ಚರಂಡಿಗೆ ಬಿದ್ದು ಎರಡು...
17-10-24 05:29 pm
17-10-24 11:16 am
HK News Desk
Mumbai Road Rage Video; ಮುಂಬೈ ; ಕಾರಿಗೆ ಆಟೋ ರಿ...
15-10-24 03:51 pm
ಡಿ ಕಂಪನಿ ಹಾದಿಯಲ್ಲಿ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್...
14-10-24 10:12 pm
Actor Sanjay Dutt Mangalore,Baba Siddique; ಬಾ...
13-10-24 06:13 pm
ಮೈಸೂರು ದರ್ಭಾಂಗ್ ಬಾಗಮತಿ ಎಕ್ಸ್ ಪ್ರೆಸ್ ರೈಲು ಅಪಘಾ...
13-10-24 03:48 pm
18-10-24 09:34 pm
Mangalore Correspondent
By Election date, Mangalore: ಅ.21ರಂದು ದಕ್ಷಿಣ...
18-10-24 05:55 pm
Mangalore, Puttur forest officer: ಪುತ್ತೂರು ಡಿ...
18-10-24 05:00 pm
Tvs scooty fire, Kumpala, Mangalore: ತನ್ನಷ್ಟಕ...
18-10-24 02:12 pm
Mangalore Ullal News, Assult: ಉಳ್ಳಾಲ ಠಾಣೆಯಲ್ಲ...
17-10-24 10:29 pm
18-10-24 03:11 pm
Bangalore Correspondent
Mangalore cyber fraud, share market, crime: ಅ...
17-10-24 11:03 pm
Bangalore crime, Double Murder, Illecit affai...
17-10-24 08:02 pm
Fake Aadhar, Mangalore Fraud, Crime: ಹತ್ತು ಸಾ...
16-10-24 02:44 pm
Chikkamagaluru, Online Fraud: ಹಣ ಡಬಲ್ ಆಸೆಗೆ...
15-10-24 09:56 pm