Kengari body found, Bangalore: ಬಿಂದಿಗೆ ಎತ್ತಿಕೊಳ್ಳಲು ಹೋಗಿ ಕೆರೆಗೆ ಬಿದ್ದ ತಂಗಿ ; ಪ್ರಾಣ ಉಳಿಸಲು ಹೋಗಿ ಜೀವ ತೆತ್ತ ಅಣ್ಣ, ಬಿರುಮಳೆಯ ನಡುವೆ ಇಬ್ಬರ ದುರ್ಮರಣ

22-10-24 08:27 pm       Bangalore Correspondent   ಕರ್ನಾಟಕ

ಆಟವಾಡುವಾಗ ಕೆಂಗೇರಿ ಬಸ್‌ ನಿಲ್ದಾಣದ ಎದುರಿನ ಕೆರೆಗೆ ಬಿದ್ದು ನೀರನಲ್ಲಿ ಮುಳುಗಿ ನಾಪತ್ತೆಯಾಗಿದ್ದ ಅಣ್ಣ-ತಂಗಿ ಮೃತದೇಹ ಪತ್ತೆಯಾಗಿದೆ. ಹರ್ಷ ಲೇಔಟ್‌ನ ಶ್ರೀನಿವಾಸ್ (13), ಮಹಾಲಕ್ಷ್ಮೀ(11) ಮೃತದೇಹ ಪತ್ತೆಯಾಗಿದೆ

ಬೆಂಗಳೂರು, ಅ 22: ಆಟವಾಡುವಾಗ ಕೆಂಗೇರಿ ಬಸ್‌ ನಿಲ್ದಾಣದ ಎದುರಿನ ಕೆರೆಗೆ ಬಿದ್ದು ನೀರನಲ್ಲಿ ಮುಳುಗಿ ನಾಪತ್ತೆಯಾಗಿದ್ದ ಅಣ್ಣ-ತಂಗಿ ಮೃತದೇಹ ಪತ್ತೆಯಾಗಿದೆ. ಹರ್ಷ ಲೇಔಟ್‌ನ ಶ್ರೀನಿವಾಸ್ (13), ಮಹಾಲಕ್ಷ್ಮೀ(11) ಮೃತದೇಹ ಪತ್ತೆಯಾಗಿದೆ

ಜಯಮ್ಮ ಎಂಬುವವರ ಮಕ್ಕಳಾದ ಶ್ರೀನಿವಾಸ್ ಮತ್ತು ಮಹಾಲಕ್ಷ್ಮೀ ಸೋಮವಾರ ಸಂಜೆ 5.30ರ ಸುಮಾರು ಕೆರೆಯ ವಾಕಿಂಗ್‌ ಪಾತ್‌ನಲ್ಲಿ ಆಟವಾಡುತ್ತಿದ್ದರು. ಈ ವೇಳೆ ಬಿಂದಿಗೆಯೊಂದು ಕೆರೆಗೆ ಉರುಳಿದ ಪರಿಣಾಮ ಮಹಾಲಕ್ಷ್ಮೀ ಬಿಂದಿಗೆ ಎತ್ತಿಕೊಳ್ಳಲು ಕೆರೆಗೆ ಇಳಿದಿದ್ದಾಳೆ. ಈ ವೇಳೆ ಆಕೆ ನೀರಿನಲ್ಲಿ ಮುಳಗಿದ್ದಾಳೆ. ತಂಗಿ ನೀರಿನಲ್ಲಿ ಮುಳುಗುವುದನ್ನು ನೋಡಿದ ಅಣ್ಣ ಸಹ ತಂಗಿಯನ್ನು ಮೇಲಕ್ಕೆ ಎಳೆಯಲು ಕೆರೆಗೆ ಇಳಿದಿದ್ದಾನೆ. ಈ ವೇಳೆ ಆತನೂ ನೀರಿನಲ್ಲಿ ಮುಳುಗಿದ್ದಾನೆ.

ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿ, ಅಗ್ನಿಶಾಮಕ ಸಿಬ್ಬಂದಿಗೆ ವಿಷಯ ಮುಟ್ಟಿಸಿದ್ದಾರೆ. ಬಳಿಕ ಬಂದ ಅಗ್ನಿಶಾಮಕ ಸಿಬ್ಬಂದಿ ಇಬ್ಬರು ಮಕ್ಕಳಿಗಾಗಿ ಕೆರೆಯಲ್ಲಿ ಹುಡುಕಾಟಕ್ಕೆ ಮುಂದಾಗಿದ್ದರು. ಸತತ ಮೂರು ಗಂಟೆಗಳ ಬಳಿಕ ಶ್ರೀನಿವಾಸನ ಮೃತದೇಹ ಪತ್ತೆಯಾಗಿತ್ತು. ಬಳಿಕ ಆರಂಭವಾದ ಮಳೆಯಿಂದಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ನಂತರ 100 ಮೀಟರ್ ಅಂತರದಲ್ಲಿ ತಂಗಿಯ ಶವ ಪತ್ತೆಯಾಗಿದೆ.

After several hours of search, on October 22, the fire and emergency services personnel found the body of a 13-year-old boy who, along with his 11-year-old sister, were feared drowned in Kengeri lake in Bengaluru in the evening on October 21.