ಬ್ರೇಕಿಂಗ್ ನ್ಯೂಸ್
13-12-20 11:28 pm Mangaluru Correspondent ಕರ್ನಾಟಕ
ಬೆಂಗಳೂರು, ಡಿ.13: ಒಂದೆಡೆ ಸಾರಿಗೆ ನೌಕರರ ಸಂಘದ ಮುಖಂಡರ ಜೊತೆ ಸಾರಿಗೆ ಸಚಿವರು ಮಾತುಕತೆ ನಡೆಸಿ, ಸಂಧಾನ ಸಫಲ ಎಂದು ಘೋಷಣೆ ಮಾಡಿದರೆ, ಇತ್ತ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಮಾತ್ರ ಮಾತುಕತೆ ವಿಫಲ, ಮುಷ್ಕರ ಮುಂದುವರಿಯುತ್ತೆ ಎಂದಯ ಘೋಷಣೆ ಮಾಡಿದ್ದಾರೆ. ಆಮೂಲಕ ಸಾರಿಗೆ ನೌಕರರ ಇಡೀ ಮುಷ್ಕರವನ್ನು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೈಜಾಕ್ ಮಾಡಿದ್ದಾರೋ ಅನ್ನುವ ಅನುಮಾನ ಮೂಡಿದೆ.
ಸತತ ಮುಷ್ಕರದಿಂದಾಗಿ ಸಿಬಂದಿ ಮತ್ತು ಸಾರ್ವಜನಿಕರು ಬಸವಳಿದಿದ್ದರು. ರಾಜ್ಯ ಸರಕಾರರನ್ನಾಗಿ ಮಾಡುವ ವಿಚಾರ ಬಿಟ್ಟು ಉಳಿದೆಲ್ಲ ಎಂಟು ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನ ಪಡುತ್ತೇವೆಂದು ಸರಕಾರದಿಂದ ಭರವಸೆ ನೀಡಲಾಗಿತ್ತು. ಈ ವಿಚಾರದಲ್ಲಿ ಸಾರಿಗೆ ನೌಕರರ ಸಂಘದ ಮುಖಂಡರು ಕೂಡ ಒಪ್ಪಿದ್ದರು. ಇದರಂತೆ, ಮುಷ್ಕರ ಕೈಬಿಟ್ಟು ಬೆಂಗಳೂರು ಕೇಂದ್ರ ನಿಲ್ದಾಣದಿಂದ ಬಸ್ ಆರಂಭಿಸಲು ತಯಾರಿ ನಡೆದಿತ್ತು. ಕೆಲವರು ಜಿಲ್ಲೆಗಳತ್ತ ಬಸ್ ಚಾಲೂ ಮಾಡಿಯೂ ಆಗಿತ್ತು. ಪ್ರಯಾಣಿಕರು ಕೂಡ ಬಸ್ ಆರಂಭಗೊಳ್ತು ಎಂದು ಬಸ್ ನಿಲ್ದಾಣದತ್ತ ದಾಂಗುಡಿ ಇಟ್ಟಿದ್ದರು.


ಆದರೆ, ಸಂಧಾನ ಮಾತುಕತೆ ನಡೆದ ಬಳಿಕ ಫ್ರೀಡಂ ಪಾರ್ಕ್ ತಲುಪಿದ ಮುಖಂಡರು, ಅಲ್ಲಿ ಉಲ್ಟಾ ಹೊಡೆದಿದ್ದಾರೆ. ಕೋಡಿಹಳ್ಳಿ ಚಂದ್ರಶೇಖರ್ ಜೊತೆ ಸೇರಿ ಮುಷ್ಕರ ಮತ್ತೆ ಮುಂದುವರಿಯಲಿದೆ. ಯಾರು ಕೂಡ ಬಸ್ ಬಿಡಬಾರದು ಎಂದು ಹೇಳಿಕೆ ನೀಡಿದ್ದಾರೆ.
ಕೋಡಿಹಳ್ಳಿ ಚಂದ್ರಶೇಖರ್ ಉದ್ದೇಶಪೂರ್ವಕವಾಗಿ ಸಾರಿಗೆ ನೌಕರರನ್ನು ಎತ್ತಿಕಟ್ಡುತ್ತಿದ್ದಾರೆಯೇ ಅನ್ನುವ ಅನುಮಾನ ಕೇಳಿಬಂದಿದೆ. ಈ ಬಗ್ಗೆ ಸರಕಾರದ ಸಚಿವರು ಕೂಡ ಕೋಡಿಹಳ್ಳಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಬಂದ್ ಮಾಡುವಂತೆ ನೌಕರರನ್ನು ಎತ್ತಿ ಕಟ್ಟುವುದು ಕುಹಕ ಬುದ್ಧಿ. ಅವರಿಗೆ ನೌಕರರ ಸಮಸ್ಯೆ ಗೊತ್ತಿದೆಯೇ.. ಮಾತುಕತೆಗೆ ಬಂದಿದ್ದವರು ಸಂಘದ ಮುಖಂಡರು 9 ಬೇಡಿಕೆ ಈಡೇರಿಕೆಯನ್ನು ಒಪ್ಪಿ ತೆರಳಿದ್ದರು. ಆದರೆ, ಒಂದು ಬೇಡಿಕೆ ಮಾತ್ರ ನಿರಾಕರಿಸಲಾಗಿತ್ತು. ಆದರೆ, ಕೋಡಿಹಳ್ಳಿ ಮುಷ್ಕರ ನಿರತರನ್ನು ಉಲ್ಟಾ ಹೊಡೆಯುವಂತೆ ಮಾಡಿದ್ದಾರೆ. ಒಬ್ಬ ವ್ಯಕ್ತಿಗಾಗಿ ಇಂಥ ಗತಿ ಆಗಬಾರದು ಎಂದು ಕಂದಾಯ ಸಚಿವ ಆರ್.ಅಶೋಕ್ ಟೀಕಿಸಿದ್ದಾರೆ. ಕೋವಿಡ್ ಇರುವ ಕಷ್ಟದಲ್ಲಿರ ಬೇಕಿದ್ದರೆ ಬಂದ್ ಮಾಡುವಂತೆ ಒತ್ತಾಯ ಮಾಡುತ್ತಾರೆಯೇ.. ಇವರಿಗೆ ಮಾನವೀಯತೆ ಇದೆಯೇ ಎಂದು ಪ್ರಶ್ನೆ ಮಾಡಿದ್ದಾರೆ.
ಖಾಸಗಿ ಬಸ್ ಓಡಿಸಲು ಅವಕಾಶ
ನಾಳೆ, ಖಾಸಗಿ ಬಸ್ ಓಡಿಸಲು ಎಲ್ಲ ಅನುಮತಿ ನೀಡುತ್ತೇವೆ. ಯಾವುದೇ ಪರವಾಗಿ ಕೇಳುವುದಿಲ್ಲ. ಎಲ್ಲ ಖಾಸಗಿ ಬಸ್ ಗಳೂ ಯಾವುದೇ ಜಿಲ್ಲೆಗೂ ಹೋಗಬಹುದು. ಯಾವುದೇ ಪ್ರಯಾಣಿಕನಿಗೂ ತೊಂದರೆ ಆಗಬಾರದು. ತೊಟ್ಟು ರಕ್ತ ಬಂದರೆ ಅದಕ್ಕೆ ಕಾರಣರಾದವರನ್ನು ಜೈಲಿಗಟ್ಡುತ್ತೇವೆ ಎಂದು ಸಚಿವ ಅಶೋಕ್ ಗುಡುಗಿದ್ದಾರೆ.
Karnataka's road transport employees on Sunday called off their 4-day strike after the state government responded to some of their demands, enabling resumption of bus services across the southern state.
19-06-26 04:18 pm
HK News Staffer
ರೈ ಅವರೇ ಧನ ಸಹಾಯ ಮಾಡಿ ಬುರುಡೆ ಗ್ಯಾಂಗ್ ನಡೆಸುತ್ತ...
18-06-26 09:57 pm
ಪರಿಷತ್ ಚುನಾವಣೆ; ಮೈತ್ರಿ ಪಕ್ಷಕ್ಕೆ ತೀವ್ರ ಮುಖಭಂಗ,...
18-06-26 07:15 pm
ಆರೆಸ್ಸೆಸ್ ನೋಂದಣಿ ; ಪ್ರಿಯಾಂಕ ಖರ್ಗೆ ಪತ್ರಕ್ಕೆ ಸಾ...
18-06-26 01:25 pm
Jayadeva Hospital, Mysuru: ಮೈಸೂರಿನ ಜಯದೇವ ಆಸ್ಪ...
18-06-26 01:17 pm
18-06-26 07:17 pm
HK News Staffer
ಮೋದಿ ನೋಡಲು ಶಾಂತ, ಒಳ್ಳೇ ವ್ಯಕ್ತಿಯಂತೆ ಕಾಣ್ತಾರೆ.....
18-06-26 01:23 pm
ಹೊರ್ಮುಜ್ ಬಿಕ್ಕಟ್ಟು; ಒಮಾನ್ ಕರಾವಳಿಯಲ್ಲಿ ಮತ್ತೊಂದ...
15-06-26 11:18 am
ಬಿರಿಯಾನಿ ಹೆಸರಲ್ಲಿ ಮಹಿಳೆಯ ಮಾನ ಕಳೆದ ಟೆಕ್ಕಿ! ತಮಾ...
14-06-26 09:46 pm
ಸಹಕಾರಿ ಬ್ಯಾಂಕುಗಳಲ್ಲಿ ಸರ್ವಾಧಿಕಾರಕ್ಕೆ ಬ್ರೇಕ್ !...
14-06-26 07:17 pm
19-06-26 09:05 pm
HK News Staffer
ಬೆಂಗಳೂರು -ಮಂಗಳೂರು 5 ಗಂಟೆ ಪ್ರಯಾಣದ ಕನಸಿಗೆ ಬ್ರೇಕ...
19-06-26 07:48 pm
ಬಂಗ್ಲೆಗುಡ್ಡೆ ಅಸ್ಥಿಪಂಜರಗಳ ಗುರುತು ಪತ್ತೆಗಿಳಿದ ಎಸ...
19-06-26 03:31 pm
Mangalore police suspend, Bajpe: ಅಸ್ಸಾಂ ಕಾರ್ಮ...
19-06-26 12:24 pm
Bejai, Kadri Water Issue: ಬಿಜೈ, ಕದ್ರಿಗೆ ಕಲುಷಿ...
18-06-26 12:33 pm
19-06-26 09:07 pm
HK News Staffer
ಮೊಬೈಲ್ ಕದ್ದು ಓಡುತ್ತಿದ್ದಾಗಲೇ ಕುಸಿದು ಬಿದ್ದು ಕಳ್...
19-06-26 08:30 pm
ಕೋಡಿ ಬೀಚ್ನಲ್ಲಿ ಬೆಂಗಳೂರು ಮೂಲದ ಯುವಕ ಸಮುದ್ರ ಪಾಲ...
19-06-26 05:47 pm
Bhatkal News: ಭಟ್ಕಳದಲ್ಲಿ ಮತ್ತೆ ಕೋಮು ಸಂಘರ್ಷ ;...
18-06-26 01:20 pm
ಸ್ಕೂಟರಲ್ಲಿ ನಾಲ್ವರು ಹೆಣ್ಮಕ್ಕಳ ಜಾಲಿ ರೈಡ್; ನಿಯಂತ...
17-06-26 01:41 pm