ಬ್ರೇಕಿಂಗ್ ನ್ಯೂಸ್
31-12-24 10:06 pm HK News Desk ಕರ್ನಾಟಕ
ಹಾಸನ, ಡಿ 31: ಕರ್ನಾಟಕ ಮದ್ಯಪಾನ ಪ್ರಿಯರ ಹೋರಾಟ ಸಂಘ ಪ್ರತಿವರ್ಷ ಏನಾದರೊಂದು ಬೇಡಿಕೆ ಇಡುತ್ತಲೇ ಇರುತ್ತದೆ. ಮದ್ಯಪ್ರಿಯರಿಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸುವ ಉದ್ದೇಶಕ್ಕಾಗಿ ರೂಪುಗೊಂಡ ಸಂಘದ ಮತ್ತೊಂದು ಕಚೇರಿ ಇಂದು ಓಪನ್ ಆಗಿದೆ. ‘ನಿತ್ಯ ದುಡಿ.. ಸತ್ಯ ನುಡಿ.. ಸ್ವಲ್ಪ ಕುಡಿ.. ಮನೆಗೆ ನಡಿ’ ಎಂಬ ಘೋಷವಾಕ್ಯದಡಿ ಸ್ಥಾಪನೆಯಾದ ಕರ್ನಾಟಕ ಮದ್ಯಪ್ರಿಯರ ಸಂಘ ಇದೀಗ ಹೊಸ ವರ್ಷಾಚರಣೆ ಹೊತ್ತಲ್ಲೇ ಮತ್ತೆ ಕಾಣಿಸಿಕೊಂಡಿದೆ. ಈ ವೇಳೆ ಹಲವು ಬೇಡಿಕೆಗಳನ್ನೂ ಇಟ್ಟಿದೆ.
“ಮದ್ಯಪಾನ ಪ್ರಿಯರಿಗೆ ಇನ್ಸೂರೆನ್ಸ್ ವ್ಯವಸ್ಥೆ ನೀಡಬೇಕು, ಬಾರ್ಗಳಲ್ಲಿ ರೆಸ್ಟ್ರೂಂ ಮಾಡಬೇಕು, ಮದ್ಯಪ್ರಿಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಬೇಕು” ಅಬ್ಬಬ್ಬಾ! ಇದೆಲ್ಲ ಕಲ್ಪನೆಯಲ್ಲ, ಮದ್ಯಪ್ರಿಯರ ನಿಜವಾದ ಆಗ್ರಹ!
‘ನಿತ್ಯ ದುಡಿ.. ಸತ್ಯ ನುಡಿ.. ಸ್ವಲ್ಪ ಕುಡಿ.. ಮನೆಗೆ ನಡಿ’ ಎಂಬ ಘೋಷವಾಕ್ಯದಡಿ ಕರ್ನಾಟಕದ ಮದ್ಯಪ್ರಿಯರು ತಮ್ಮದೇ ಆದ ಕೆಲವು ವಿಶೇಷ ಬೇಡಿಕೆಗಳನ್ನು ಈಡೇರಿಸುವಂತೆ ಇದೀಗ ಆಗ್ರಹ ವ್ಯಕ್ತಪಡಿಸಿದ್ದಾರೆ.
‘ನಿತ್ಯ ದುಡಿ.. ಸತ್ಯ ನುಡಿ.. ಸ್ವಲ್ಪ ಕುಡಿ.. ಮನೆಗೆ ನಡಿ’ ಎಂಬ ಘೋಷವಾಕ್ಯದಡಿ ಕರ್ನಾಟಕದ ಮದ್ಯಪ್ರಿಯರು ತಮ್ಮದೇ ಆದ ಕೆಲವು ವಿಶೇಷ ಬೇಡಿಕೆಗಳನ್ನು ಈಡೇರಿಸುವಂತೆ ಇದೀಗ ಆಗ್ರಹ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಮದ್ಯಪಾನ ಪ್ರಿಯರ ಹೋರಾಟ ಸಂಘದ ಹೊಸ ಕಚೇರಿ ಓಪನ್!
ಹೊಸ ವರ್ಷಾಚರಣೆ ಸಂಭ್ರಮದ ಹೊತ್ತಲ್ಲಿ ಮದ್ಯಪಾನ ಪ್ರಿಯರ ಹೋರಾಟ ಸಂಘ ಇದೀಗ ಮತ್ತೆ ಅಸ್ತಿತ್ವಕ್ಕೆ ಬಂದಿದೆ. ಅಲ್ಲದೇ ಹೊಸದೊಂದು ಕಚೇರಿ ಹಾಸನ ಜಿಲ್ಲೆಯಲ್ಲಿ ಓಪನ್ ಆಗಿದ್ದು, ಬೇಲೂರಿನಲ್ಲಿ ಮದ್ಯಪಾನ ಪ್ರಿಯರ ಹೋರಾಟ ಸಂಘ ಉದ್ಘಾಟನೆಯಾಗಿದೆ.
ಕೇಕ್ ಕತ್ತರಿಸಿ ಸಂಘಟನೆಗೆ ಚಾಲನೆ
ಇನ್ನು ಹೊಸದಾಗಿ ಓಪನ್ ಆದ ಕಛೇರಿ ಮುಂದೆ ಕೇಕ್ ಕತ್ತರಿಸಿ ಸಂಘಟನೆಗೆ ಚಾಲನೆ ನೀಡಿದ್ದು, ಸರ್ಕಾರದ ಆದಾಯದ ಮೂಲ ಮದ್ಯಪಾನ, ಆದ್ದರಿಂದ ಮದ್ಯ ಪ್ರಿಯರಿಗೆ ಸೂಕ್ತ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಇನ್ನು ಇಂದು ವರ್ಷಾಂತ್ಯ ಹಿನ್ನೆಲೆಯಲ್ಲಿ ಕರ್ನಾಟಕ ಮದ್ಯಪ್ರಿಯರ ನೂತನ ಕಛೇರಿ ಹಾಸನದಲ್ಲಿ ಉದ್ಘಾಟನೆಯಾಗಿದ್ದು, ಈ ವೇಳೆ ಮದ್ಯಪಾನ ಪ್ರಿಯರಿಗೆ ಇನ್ಸೂರೆನ್ಸ್, ಬಾರ್ಗಳಲ್ಲಿ ರೆಸ್ಟ್ರೂಂ, ಮದ್ಯಪ್ರಿಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಈ ಎಲ್ಲಾ ಬೇಡಿಕೆಗಳನ್ನು ಮುಂದಿಟ್ಟು ನೂತನ ಘಟಕವೊಂದು ಇಂದು ಓಪನ್ ಆಗಿದೆ.
Every year Karnataka Liquor Lovers' Struggle Association keeps demanding something. Another office of the association formed for the purpose of condemning the injustice done to alcoholics is open today. Established under the slogan 'Nitya Dudi.. Satya Nudi.. Ditto Kudi.. Goke Nadi', the Karnataka Liquor Association has now reappeared during the New Year celebrations. At this time many demands have been made.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
11-09-25 06:14 pm
Mangalore Correspondent
Dharmasthala, YouTube, SIT: ಧರ್ಮಸ್ಥಳ ವಿರುದ್ಧ...
11-09-25 02:45 pm
ಬಿಜೆಪಿ ಬಗ್ಗೆ ಪುತ್ತಿಲ ಪರಿವಾರದ ಅಸಮಾಧಾನ ; ಭರವಸೆ...
11-09-25 01:40 pm
Headline Karnataka, Social Campaigning, Manga...
11-09-25 11:34 am
ಧರ್ಮಸ್ಥಳ ಕೇಸ್ ; ವಿಚಾರಣೆ ಮುಗಿಸಿ ಸತ್ಯಕ್ಕೆ ಜಯ ಎನ...
10-09-25 10:50 pm
11-09-25 02:25 pm
HK STAFF
Mangalore Police, Communial Case, Arrest, Cri...
08-09-25 10:34 pm
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm