ಬ್ರೇಕಿಂಗ್ ನ್ಯೂಸ್
15-01-25 06:37 pm Mangaluru Correspondent ಕರ್ನಾಟಕ
ಮಂಗಳೂರು, ಜ.16: ಜನವರಿ 18ರಿಂದ 22ರ ವರೆಗೆ ನಡೆಯಲಿರುವ ಮಂಗಳೂರು ಫುಡ್ ಫೆಸ್ಟಿವಲ್ ಗೆ ಸೋಶಿಯಲ್ ಮೀಡಿಯಾದಲ್ಲಿ ಹೆಸರು ಪಡೆದಿರುವ ನಾಗಪುರ ಮೂಲದ ಡಾಲಿ ಚಾಯ್ ವಾಲ ಆಗಮಿಸಲಿದ್ದಾರೆ.
ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಜಿಲ್ಲಾಡಳಿತದ ಸಹಕಾರದೊಂದಿಗೆ ಜನವರಿ 18 ರಿಂದ 22ರ ವರೆಗೆ ಐದು ದಿನಗಳ ಕಾಲ ನಗರದಲ್ಲಿ “ಮಂಗಳೂರು ಸ್ಟ್ರೀಟ್ ಫುಡ್ ಫಿಯೆಸ್ಟ’ ನಡೆಯಲಿದೆ. ಮೊದಲ ದಿನದ ಆಕರ್ಷಣೆಯಾಗಿ ಡಾಲಿ ಚಾಯ್ವಾಲ ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಇವರ ವಿಡಿಯೋ ವೈರಲ್ ಆಗಿದ್ದು, ಜನವರಿ 18ರಂದು ಮಂಗಳೂರಿನಲ್ಲಿ ಸಿಗುತ್ತೇನೆ. “ಮಜಾ ಕರೇಂಗೆ .. ಚಾಯ್ ಪಿಯೇಂಗೆ’ ಎಂದು ಪೋಸ್ಟ್ ಮಾಡಿದ್ದಾರೆ.
ಡಾಲಿ ಚಾಯ್ ವಾಲಾ ತನ್ನ ವಿಶಿಷ್ಟ ಶೈಲಿಯ ಚಹಾ ತಯಾರಿಯಿಂದಲೇ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿದ್ದಾರೆ. ಕೋಲಿನಂತಿರುವ ಸಪೂರ ಶರೀರ, ಕೋಟ್ ಧರಿಸಿ ಕೊರಳಿಗೆ ಗೋಲ್ಡ್ ಚೈನ್ ಹಾಕಿ ಮಿರುಗುವ ಈತನ ಚುರುಕಿನ ನಡೆ, ಎತ್ತರದಿಂದ ಚಹಾವನ್ನು ಗ್ಲಾಸಿಗೆ ಸುರಿಯುವ ಶೈಲಿಗೆ ಜನ ಮಾರು ಹೋಗಿದ್ದಾರೆ. ಹಾಲಿನ ಪ್ಯಾಕೆಟ್ ಬಿಚ್ಚಿ ಒಲೆಯಲ್ಲಿಟ್ಟ ಟೀ ಪಾಟ್ ಗೆ ಸುರಿಯೋದು, ಅದನ್ನು ಎರಡು ಕೈಯಲ್ಲಿ ಗ್ರಾಹಕರಿಗೆ ಕೊಡುವುದು ಆಕರ್ಷಕ. ಇದೇ ಕಾರಣಕ್ಕೆ ಈತನ ವಿಡಿಯೋ ಫೇಸ್ಬುಕ್, ಇನ್ ಸ್ಟಾ ಸೇರಿದಂತೆ ಜಾಲತಾಣದಲ್ಲಿ ಸಕತ್ ಫೇಮಸ್.
ಅಂದಹಾಗೆ, ಈತನ ನಿಜ ಹೆಸರು ಸುನಿಲ್ ಪಟೇಲ್ ಅಂತ. ವಿಶಿಷ್ಟ ರೀತಿಯ ಚಹಾ ಸರ್ವ್ ನಿಂದಲೇ ಟ್ರೆಂಡ್ ಸೆಟ್ ಮಾಡಿರುವ ಈತ ಡಾಲಿ ಚಾಯ್ ವಾಲಾ ಎಂದೇ ಫೇಮಸ್ ಆಗಿದ್ದಾನೆ. ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಈತನ ಚಹಾಕ್ಕೆ ಫ್ಯಾನ್ ಆಗಿದ್ದಾರೆ. ಮೈಕ್ರೋಸಾಪ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಕೂಡ ಡಾಲಿ ಅವರ ಚಹಾ ಅಂಗಡಿಗೆ ಭೇಟಿ ಕೊಟ್ಟು ಚಹಾ ಕುಡಿದು ಪೋಸ್ಟ್ ಹಾಕಿದ್ದರು. ಇದರ ಬಳಿಕ ಡಾಲಿ ಚಾಯ್ವಾಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಇವರು ತನ್ನ ಚಹಾ ತಯಾರಿಸುವ ಬಗ್ಗೆ ಫೇಸ್ಬುಕ್ ವಿಡಿಯೋ ಹಾಕುತ್ತಿದ್ದು ಭಾರೀ ಸಂಖ್ಯೆಯಲ್ಲಿ ಜನರು ಫಾಲೋ ಮಾಡುತ್ತಿದ್ದಾರೆ.
Dolly Chaiwala from Nagpur to visit Mangalore on 18th of jan 22nd for food festival that will be held in the city.
08-06-25 06:03 pm
Bangalore Correspondent
Bhaskar Rao, Cm Siddaramaiah, DK Shivakumar:...
07-06-25 08:04 pm
Bjp, CM Siddaramaiah, DK Shivakumar: ಸಿಎಂ ಸಿದ...
07-06-25 06:57 pm
MLC K. Govindaraj: ಕಾಲ್ತುಳಿತ ಪ್ರಕರಣ ; ಸಿಎಂ ರಾ...
06-06-25 10:58 pm
Mohandas Pai, RCB, Death: ಪೊಲೀಸ್ ಕಮಿಷನರ್ ಸಸ್ಪ...
06-06-25 09:46 pm
07-06-25 09:54 pm
HK News Desk
Starlink, Elon Musk: ಇಂಟರ್ನೆಟ್ ಸಿಗದ ಹಳ್ಳಿಗಳಿಗ...
07-06-25 07:10 pm
ಜಗತ್ತಿನ ಅತಿ ಎತ್ತರದ ರೈಲ್ವೇ ಸೇತುವೆ ಉದ್ಘಾಟಿಸಿದ ಮ...
06-06-25 11:08 pm
ತಂದೆ ಮುಸ್ಲಿಂ - ತಾಯಿ ಹಿಂದು ; ಮಗನಿಗೆ ಇಸ್ಲಾಂ ಅನು...
05-06-25 07:54 pm
30 ಅಡಿ ಉದ್ದದ ಅತಿ ವಿರಳ ದೇವರ ಮೀನು ತಮಿಳುನಾಡಿನಲ್ಲ...
04-06-25 05:05 pm
08-06-25 05:24 pm
Mangalore Correspondent
ಮುಸ್ಲಿಂ ವಾಟ್ಸಪ್ ಗ್ರೂಪಿನಲ್ಲಿ ಸ್ಪೀಕರ್ ಖಾದರ್, ಸಿ...
07-06-25 11:02 pm
Siddaramaiah, DK Shivakumar, CT Ravi: ಕಾಲ್ತುಳ...
07-06-25 09:15 pm
Ct Ravi, Mangalore, BJP: ರೋಗಕ್ಕೆ ಮದ್ದು ಕೊಡದ ಹ...
07-06-25 08:48 pm
Mangalore, PG Student Arrested, Bomb Threat,...
07-06-25 05:37 pm
08-06-25 03:59 pm
HK News Desk
ಆನ್ಲೈನ್ ಟ್ರೇಡಿಂಗ್ನಲ್ಲಿ ಹಣ ಹೂಡಿಕೆ ; ಇನ್ ಸ್ಟಾ...
08-06-25 02:58 pm
Mangalore Crime, Yeyyadi Stabbing, Bar, Polic...
07-06-25 10:39 pm
Mangalore Murder, Crime, Rahiman: ಅಬ್ದುಲ್ ರಹಿ...
03-06-25 10:25 pm
Mangalore Suhas Shetty Murder Case, arrest; ಸ...
03-06-25 08:01 pm