ಬ್ರೇಕಿಂಗ್ ನ್ಯೂಸ್
15-01-25 06:37 pm Mangaluru Correspondent ಕರ್ನಾಟಕ
ಮಂಗಳೂರು, ಜ.16: ಜನವರಿ 18ರಿಂದ 22ರ ವರೆಗೆ ನಡೆಯಲಿರುವ ಮಂಗಳೂರು ಫುಡ್ ಫೆಸ್ಟಿವಲ್ ಗೆ ಸೋಶಿಯಲ್ ಮೀಡಿಯಾದಲ್ಲಿ ಹೆಸರು ಪಡೆದಿರುವ ನಾಗಪುರ ಮೂಲದ ಡಾಲಿ ಚಾಯ್ ವಾಲ ಆಗಮಿಸಲಿದ್ದಾರೆ.
ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಜಿಲ್ಲಾಡಳಿತದ ಸಹಕಾರದೊಂದಿಗೆ ಜನವರಿ 18 ರಿಂದ 22ರ ವರೆಗೆ ಐದು ದಿನಗಳ ಕಾಲ ನಗರದಲ್ಲಿ “ಮಂಗಳೂರು ಸ್ಟ್ರೀಟ್ ಫುಡ್ ಫಿಯೆಸ್ಟ’ ನಡೆಯಲಿದೆ. ಮೊದಲ ದಿನದ ಆಕರ್ಷಣೆಯಾಗಿ ಡಾಲಿ ಚಾಯ್ವಾಲ ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಇವರ ವಿಡಿಯೋ ವೈರಲ್ ಆಗಿದ್ದು, ಜನವರಿ 18ರಂದು ಮಂಗಳೂರಿನಲ್ಲಿ ಸಿಗುತ್ತೇನೆ. “ಮಜಾ ಕರೇಂಗೆ .. ಚಾಯ್ ಪಿಯೇಂಗೆ’ ಎಂದು ಪೋಸ್ಟ್ ಮಾಡಿದ್ದಾರೆ.

ಡಾಲಿ ಚಾಯ್ ವಾಲಾ ತನ್ನ ವಿಶಿಷ್ಟ ಶೈಲಿಯ ಚಹಾ ತಯಾರಿಯಿಂದಲೇ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿದ್ದಾರೆ. ಕೋಲಿನಂತಿರುವ ಸಪೂರ ಶರೀರ, ಕೋಟ್ ಧರಿಸಿ ಕೊರಳಿಗೆ ಗೋಲ್ಡ್ ಚೈನ್ ಹಾಕಿ ಮಿರುಗುವ ಈತನ ಚುರುಕಿನ ನಡೆ, ಎತ್ತರದಿಂದ ಚಹಾವನ್ನು ಗ್ಲಾಸಿಗೆ ಸುರಿಯುವ ಶೈಲಿಗೆ ಜನ ಮಾರು ಹೋಗಿದ್ದಾರೆ. ಹಾಲಿನ ಪ್ಯಾಕೆಟ್ ಬಿಚ್ಚಿ ಒಲೆಯಲ್ಲಿಟ್ಟ ಟೀ ಪಾಟ್ ಗೆ ಸುರಿಯೋದು, ಅದನ್ನು ಎರಡು ಕೈಯಲ್ಲಿ ಗ್ರಾಹಕರಿಗೆ ಕೊಡುವುದು ಆಕರ್ಷಕ. ಇದೇ ಕಾರಣಕ್ಕೆ ಈತನ ವಿಡಿಯೋ ಫೇಸ್ಬುಕ್, ಇನ್ ಸ್ಟಾ ಸೇರಿದಂತೆ ಜಾಲತಾಣದಲ್ಲಿ ಸಕತ್ ಫೇಮಸ್.
ಅಂದಹಾಗೆ, ಈತನ ನಿಜ ಹೆಸರು ಸುನಿಲ್ ಪಟೇಲ್ ಅಂತ. ವಿಶಿಷ್ಟ ರೀತಿಯ ಚಹಾ ಸರ್ವ್ ನಿಂದಲೇ ಟ್ರೆಂಡ್ ಸೆಟ್ ಮಾಡಿರುವ ಈತ ಡಾಲಿ ಚಾಯ್ ವಾಲಾ ಎಂದೇ ಫೇಮಸ್ ಆಗಿದ್ದಾನೆ. ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಈತನ ಚಹಾಕ್ಕೆ ಫ್ಯಾನ್ ಆಗಿದ್ದಾರೆ. ಮೈಕ್ರೋಸಾಪ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಕೂಡ ಡಾಲಿ ಅವರ ಚಹಾ ಅಂಗಡಿಗೆ ಭೇಟಿ ಕೊಟ್ಟು ಚಹಾ ಕುಡಿದು ಪೋಸ್ಟ್ ಹಾಕಿದ್ದರು. ಇದರ ಬಳಿಕ ಡಾಲಿ ಚಾಯ್ವಾಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಇವರು ತನ್ನ ಚಹಾ ತಯಾರಿಸುವ ಬಗ್ಗೆ ಫೇಸ್ಬುಕ್ ವಿಡಿಯೋ ಹಾಕುತ್ತಿದ್ದು ಭಾರೀ ಸಂಖ್ಯೆಯಲ್ಲಿ ಜನರು ಫಾಲೋ ಮಾಡುತ್ತಿದ್ದಾರೆ.
Dolly Chaiwala from Nagpur to visit Mangalore on 18th of jan 22nd for food festival that will be held in the city.
10-04-26 06:53 pm
HK News Desk
ಚಿಕ್ಕಮಗಳೂರು ; ಚಂದ್ರದ್ರೋಣ ಪರ್ವತ ಬಳಿ ನಾಪತ್ತೆಯಾಗ...
10-04-26 03:25 pm
PUC Result 2026, State Topper: ಪಿಯುಸಿ ರಿಸಲ್ಟ್...
09-04-26 09:30 pm
ಗ್ಯಾರಂಟಿ ಯೋಜನೆಗಳ ಬಗ್ಗೆ ವರದಿ ಕೇಳಿದ ಚುನಾವಣಾ ಆಯೋ...
09-04-26 04:33 pm
ಶರಣ್ಯ ನಾಪತ್ತೆ ಪ್ರಕರಣದಲ್ಲಿ ಟ್ವಿಸ್ಟ್ ; ನಕ್ಸಲ್ ಲ...
09-04-26 03:37 pm
11-04-26 12:44 pm
HK News Desk
ಶಾಂತಿ ಮಾತುಕತೆಗಿಳಿದ ಪಾಕಿಸ್ತಾನ ವಿರುದ್ಧ ಕಿಡಿಕಾರಿ...
10-04-26 11:05 pm
ಮನೆಯಲ್ಲಿ ಭಾರೀ ನಗದು ಪತ್ತೆ ಪ್ರಕರಣ ; ನ್ಯಾಯಮೂರ್ತಿ...
10-04-26 01:26 pm
Lebanon News: ಲೆಬನಾನ್ ಮೇಲೆ ಇಸ್ರೇಲ್ ಭಾರೀ ಬಾಂಬ್...
09-04-26 11:03 pm
ಹರ್ಮುಜ್ ಜಲಸಂಧಿಗೆ ಇರಾನ್ ಸುಂಕ ; ಭಾರತಕ್ಕೆ ಭಾರೀ...
09-04-26 07:43 pm
11-04-26 05:05 pm
Mangalore Correspondent
Fr Melvin J Pinto Death: ಸೈಂಟ್ ಅಲೋಶಿಯಸ್ ಶಿಕ್ಷ...
10-04-26 10:12 pm
ಭರತನಾಟ್ಯ ಗುರು ಶ್ರಾವಣ್ ಉಳ್ಳಾಲ್ ಹಳದಿ ಕಾಮಾಲೆ ರೋಗ...
10-04-26 09:49 pm
ಉಪ ಚುನಾವಣೆ ಫಲಿತಾಂಶಕ್ಕೂ ನಾಯಕತ್ವ ಬದಲಾವಣೆಗೂ ಸಂಬಂ...
10-04-26 06:05 pm
Puc 2026, Result, Mangalore: ಮೂವರು ಮಕ್ಕಳಾದರೂ...
10-04-26 12:35 pm
11-04-26 03:09 pm
Mangalore Correspondent
ಧಾರವಾಡ ಯೂತ್ ಕಾಂಗ್ರೆಸ್ ಮುಖಂಡನ ಹತ್ಯೆ ; ಮನೆಗೆ ನು...
11-04-26 12:04 pm
ಕುಂಭಮೇಳದ ಮೊನಾಲಿಸಾ ಅಂತರ್ಧರ್ಮೀಯ ವಿವಾಹಕ್ಕೆ ಕುತ್ತ...
10-04-26 11:06 pm
Red Corner Notice, Mangalore crime: ದೇರಳಕಟ್ಟೆ...
09-04-26 09:16 pm
ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಮಗು ;...
09-04-26 01:03 pm