ಬ್ರೇಕಿಂಗ್ ನ್ಯೂಸ್
17-02-25 10:43 am Bangalore Correspondent ಕರ್ನಾಟಕ
ಬೆಂಗಳೂರು ಫೆ.17: ಬೆಂಗಳೂರಿನ ಆದರ್ಶ್ ಡೆವಲಪರ್ಸ್ನ ಮಾಲಕ ಶ್ರೀಧರ್ ರಾಜೇಂದ್ರನ್ ನೀಡಿರುವ ದೂರು ಆಧರಿಸಿ, ಅಮೆಜಾನ್ ವೆಬ್ ಸರ್ವೀಸ್, ರೆಡಿಂಗ್ಟನ್ ಗ್ರೂಪ್ ಸೇರಿದಂತೆ ಮೂರು ಸಂಸ್ಥೆಗಳ ವಿರುದ್ಧ ಕೇಸ್ ದಾಖಲಾಗಿದೆ.
36 ವರ್ಷಗಳಿಂದ ಆದರ್ಶ್ ಡೆವಲಪರ್ಸ್ ಕಂಪನಿ ಬೆಂಗಳೂರು ನಗರದಲ್ಲಿ ವಸತಿ ಕಟ್ಟಡಗಳ ನಿರ್ಮಾಣ ಹಾಗೂ ಸೌಲಭ್ಯ ನಿರ್ಮಾಣದ ಕೆಲಸದಲ್ಲಿ ತೊಡಗಿಕೊಂಡಿದೆ. ಕಂಪನಿಯ ಹಣಕಾಸು ವ್ಯವಹಾರ ಹಾಗೂ ಗ್ರಾಹಕರ ವೈಯಕ್ತಿಕ ಮಾಹಿತಿಯನ್ನು ಅಮೆಜಾನ್ ಕೌಡ್ ಸರ್ವರ್ ನಲ್ಲಿ ಸಂಗ್ರಹಿಸಿ ಇಡಲಾಗಿತ್ತು. ಆದ್ರೆ ಈಗ ಅಳಿಸಿಹೋಗಿದ್ದು, ಕಂಪನಿಗೆ ಸಾಕಷ್ಟು ನಷ್ಟವಾಗಿದೆ ಎಂದು ಬಿಲ್ಡರ್ ರಾಜೇಂದ್ರನ್ ದೂರು ದಾಖಲಿಸಿದ್ದಾರೆ.

2023ರ ಮೇನಲ್ಲಿ ಅಮೆಜಾನ್ ಕೌಡ್ ಸರ್ವೀಸ್ನ ವಾಣಿಜ್ಯ ವಿಭಾಗದ ಪ್ರತಿನಿಧಿಯೊಬ್ಬರು ಕಂಪನಿಯನ್ನು ಸಂಪರ್ಕಿಸಿ, ಕೌಡ್ ಸರ್ವೀಸ್ ಉಪಯೋಗಿಸುವಂತೆ ಕೋರಿದ್ದರು. ಸೈಬರ್ ದಾಳಿ, ವಿಧ್ವಂಸಕ ಕೃತ್ಯ, ಮಿಂಚು-ಗುಡುಗು, ಭೂಕಂಪ ಹಾಗೂ ಚಂಡಮಾರುತದಂತಹ ಸಂದರ್ಭದಲ್ಲೂ ಯಾವುದೇ ರೀತಿ ನಿಮ್ಮ ಸಂಸ್ಥೆಯ ಡೇಟಾಗೆ ತೊಂದರೆ ಆಗೋದಿಲ್ಲ, ಅದನ್ನ ಮರಳಿ ಪಡೆಯಬಹುದು ಎಂದು ಶ್ರೀಧರ್ ಗೆ ಅಮೆಜಾಜ್ ಸಂಸ್ಥೆ ಭರವಸೆ ನೀಡಿತ್ತು. ಅಮೆಜಾನ್ ವೆಬ್ ಸರ್ವೀಸ್ ಜತೆಗೆ 2027ರ ನವೆಂಬರ್ವರೆಗೆ ಒಪ್ಪಂದ ಮಾಡಿಕೊಂಡು, ದತ್ತಾಂಶವನ್ನು ಸುರಕ್ಷಿತವಾಗಿ ಇಡುವಂತೆ ಆದೇಶ ನೀಡಲಾಗಿತ್ತು. ಜಿಎಸ್ಟಿ ಸಹಿತ 88.59 ಲಕ್ಷ ಪಾವತಿಸಲು ಒಪ್ಪಂದ ಮಾಡಿಕೊಳ್ಳಲಾಗಿತ್ತು.
ದತ್ತಾಂಶ ಅಳಿಸಿಹೋಗಿದೆ ಎಂಬುದು ಜನವರಿ 9ರಂದು ಗೊತ್ತಾಗಿದೆ. ಕಂಪನಿಯ ದತ್ತಾಂಶ ಸಂಗ್ರಹಿಸಿದ್ದ ಮೂಲ ಸ್ಥಳದಲ್ಲೇ ಅಳಿಸಿ ಹಾಕಿದ್ದಾರೆ. ಅಲ್ಲದೇ ಖಾತೆಯನ್ನೂ ಡಿಲೀಟ್ ಮಾಡಿದ್ದಾರೆ. ಇದರಿಂದ ಕಂಪನಿಯ ಆರು ವರ್ಷದ ವಹಿವಾಟಿನ ಮಾಹಿತಿ, ಗ್ರಾಹಕರ ವಿವರ ಅಳಿಸಿ ಹೋಗಿ ಜ.9ರಿಂದ ಪ್ರತಿದಿನ 5 ಕೋಟಿಯಷ್ಟು ನಷ್ಟವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ದತ್ತಾಂಶ ಮರು ಸಂಗ್ರಹಿಸಲು ಸಾಧ್ಯವಾದಷ್ಟು ಮಟ್ಟಿಗೆ ಪ್ರಯತ್ನಿಸಿದ್ದರೂ ಯಶಸ್ಸು ಸಿಕ್ಕಿಲ್ಲ ಎಂಬುದಾಗಿ ಅಮೆಜಾನ್ ವೆಬ್ ಸರ್ವೀಸ್ನ ಸದಸ್ಯರು ಪ್ರತಿಕ್ರಿಯಿಸಿದ್ದಾರೆ.
Case filed by Bangalore Adarsh builders owner Sridhar Rajendra against Amazon Web Services over losing 150 crore data of their customers.
23-10-25 03:42 pm
HK News Desk
ಪಿಜಿಯಲ್ಲಿ ತಿಗಣೆ ಔಷಧಿ ದುರ್ವಾಸನೆಗೆ ವಿದ್ಯಾರ್ಥಿ ಬ...
23-10-25 12:46 pm
ಸಿಎಂ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ಅರ್ಹ ವ್ಯಕ್ತಿ ;...
22-10-25 08:12 pm
ರಾಜ್ಯದ ಸಂಪನ್ಮೂಲವನ್ನು ಹೈಕಮಾಂಡ್ ಸಮರ್ಪಣಾಮಸ್ತು ಮಾ...
21-10-25 11:01 pm
Dharmasthala Case, CM Siddaramaiah: ಧರ್ಮಸ್ಥಳ...
21-10-25 09:45 pm
23-10-25 03:39 pm
HK News Desk
ಶಬರಿಮಲೆಗೆ ಭೇಟಿಯಿತ್ತ ಮೊದಲ ಮಹಿಳಾ ರಾಷ್ಟ್ರಪತಿ ; ಪ...
22-10-25 10:56 pm
ರಾಷ್ಟ್ರಪತಿ ಮುರ್ಮು ಶಬರಿಮಲೆಗೆ ; ಹೆಲಿಪ್ಯಾಡ್ ನಲ್ಲ...
22-10-25 10:23 pm
ಜೈಶ್ ಮಹಿಳಾ ಉಗ್ರರಿಂದ ಆನ್ಲೈನ್ ತರಬೇತಿ ಕೋರ್ಸ್ ; ಜ...
22-10-25 05:45 pm
ಡ್ರೆಸ್ಸಿಂಗ್ ರೂಮಿನಲ್ಲಿ ಇಸ್ಲಾಂ ಪ್ರಚಾರ ಮಾಡಿದ್ದಕ...
21-10-25 03:11 pm
24-10-25 11:57 am
Mangalore Correspondent
ಎಸ್ ಸಿಎಸ್ ಆಸ್ಪತ್ರೆಯ 38ನೇ ವರ್ಷದ ಸಂಭ್ರಮಾಚರಣೆ ;...
23-10-25 10:52 pm
ಸತ್ತು ಬದುಕಿದ ಸುದ್ದಿ ಬಗ್ಗೆ ಯೇನಪೋಯ ಆಸ್ಪತ್ರೆ ಸ್ಪ...
23-10-25 10:46 pm
ಮಂಗಳೂರಿನಲ್ಲಿ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಪಂದ್ಯಾ...
23-10-25 07:35 pm
ಜಾನುವಾರು ಸಾಗಾಟಕ್ಕೆ ಪೊಲೀಸರ ತಡೆ ; ಲಾರಿಯಿಂದ ಹಗ್ಗ...
22-10-25 09:55 pm
24-10-25 10:07 am
Mangalore Correspondent
ನೀವು ಮೋಸದ ಕರೆ ಮಾಡಿ ವಂಚಿಸುತ್ತಿದ್ದೀರಿ ಎಂದು ಹೇಳಿ...
23-10-25 06:53 pm
Dj Halli Inspector Sunil, Rape: ಠಾಣೆಗೆ ಬಂದಿದ್...
23-10-25 05:20 pm
Puttur, Illegal cattle transport, Arrest: ಗೋಪ...
22-10-25 11:51 am
Mulki Fraud, Mangalore Police: ಹಣ ಡಬಲ್ ಆಮಿಷದಲ...
21-10-25 10:51 pm