ರಾಜ್ ಕುಮಾರ್, ಶಂಕರ್​ನಾಗ್, ವಿಷ್ಣುವರ್ಧನ್ ಅಂತವರು ಇದ್ದ ಚಿತ್ರರಂಗ ಕಣ್ರೀ ಇದು ; ಅಂಬರೀಶ್ ಇವತ್ತು ಇದ್ದಿದ್ದರೆ ಮುಟ್ಟಿ ನೋಡಿಕೊಳ್ಳೋ ಹಾಗೇ ಉತ್ತರ ಕೊಟ್ಟಿರೋರು‌, ಡಿಕೆಗೆ ಅಶೋಕ್ ಕ್ಲಾಸು 

02-03-25 10:24 pm       Bangalore Correspondent   ಕರ್ನಾಟಕ

ಡಿ.ಕೆ.ಶಿವಕುಮಾರ್ ಅಣ್ಣ ಮೊದಲು ನಿಮ್ಮ ರಾಜಣ್ಣನಿಗೆ ನಟ್ಟು ಬೋಲ್ಟ್ ಟೈಟ್ ಮಾಡಿ. ಅದು ಬಿಟ್ಟು ಸಿನಿಮಾ ನಾಯಕರ ನಟ್ಟು ಬೋಲ್ಟ್ ಟೈಟ್ ಮಾಡೋಕೆ ಆಗುತ್ತಾ?" ಎಂದು ವಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ.

ಬೆಂಗಳೂರು, ಮಾ 02: ಡಿ.ಕೆ.ಶಿವಕುಮಾರ್ ಅಣ್ಣ ಮೊದಲು ನಿಮ್ಮ ರಾಜಣ್ಣನಿಗೆ ನಟ್ಟು ಬೋಲ್ಟ್ ಟೈಟ್ ಮಾಡಿ. ಅದು ಬಿಟ್ಟು ಸಿನಿಮಾ ನಾಯಕರ ನಟ್ಟು ಬೋಲ್ಟ್ ಟೈಟ್ ಮಾಡೋಕೆ ಆಗುತ್ತಾ?" ಎಂದು ವಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ.

ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ಡಿಕೆ ನಿನ್ನೆ 16ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನಾ ಸಮಾರಂಭದಲ್ಲಿ ನಟ್ ಬೋಲ್ಟ್ ರಿಪೇರಿ ಮಾಡಿಸುತ್ತೇವೆ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, "ಕಿಚ್ಚ ಸುದೀಪ್​ಗೆ, ಕೆಜಿಎಫ್​ ಯಶ್​ಗೆ, ನಟ ದರ್ಶನ್​ಗೆ ನಟ್ಟು ಬೋಲ್ಟ್ ಟೈಟ್ ಮಾಡ್ತೀರಾ. ಸಿನಿಮಾದವರನ್ನು ಸರಿಯಾಗಿ ನಡೆಸಿಕೊಳ್ಳಿ, ಇದು ಅಪಮಾನ" ಎಂದು ಕಿಡಿಕಾರಿದರು.

"ಕೀಳಾಗಿ ನಡೆಸಿಕೊಳ್ಳುತ್ತಾ ಇದ್ದೀರಾ‌. ಹಿರಿಯ ನಟಿ ತಾರಾ ಅವರು ನಮಗೆ ಕರೆದಿಲ್ಲ ಅಂತಾ ಹೇಳಿದ್ದಾರೆ. ಇದು ಸಿನಿಮಾ ರಂಗಕ್ಕೆ ಮಾಡಿದ ಅಪಮಾನ. ಕೂಡಲೇ ಡಿ.ಕೆ. ಶಿವಕುಮಾರ್ ಕ್ಷಮಾಪಣೆ ಕೇಳಬೇಕು. ರಾಜ್​ಕುಮಾರ್, ಶಂಕರ್​ನಾಗ್, ವಿಷ್ಣುವರ್ಧನ್, ಅಂಬರೀಶ್ ಅಂತವರು ಇದ್ದ ಚಿತ್ರರಂಗ ಇದು. ಅಂಬರೀಶ್ ಇವತ್ತು ಇದ್ದಿದ್ದರೆ ಮುಟ್ಟಿ ನೋಡಿಕೊಳ್ಳೋ ಹಾಗೇ ಉತ್ತರ ಕೊಟ್ಟಿರೋರು‌ ಆದ್ರೆ ಪುಣ್ಯಾತ್ಮ ಇವತ್ತು ಇಲ್ಲ. ಕಳೆದ ಬಾರಿ ಜಯನಗರ ಶಾಸಕರು ಹಣ ಕೇಳಿದಾಗ ತಗ್ಗಿ ಬಗ್ಗಿ ನಡೆಯಬೇಕು ಅಂತಿದ್ರು. ಏನು ಡಿ.ಕೆ. ಶಿವಕುಮಾರ್ ಆಶೀರ್ವಾದದಿಂದ ಬಂದವರಾ ಎಂಎಲ್ಎಗಳು?. ಅದೇ ಚಾಳಿ ಸಿನಿಮಾ ನಟರ ಮೇಲೆ ತೋರಿಸಿದ್ದಾರೆ" ಎಂದು ವಾಗ್ದಾಳಿ ನಡೆಸಿದ್ದಾರೆ

R Ashok slams DK Shivakumar over statment made on Kannada film industry. Karnataka Deputy Chief Minister D.K. Shivakumar lost his cool at the inauguration of the International Film Festival in Bengaluru, lashing out at the film industry. He voiced his disappointment over the low turnout from the Kannada film industry at the inauguration.