ಬ್ರೇಕಿಂಗ್ ನ್ಯೂಸ್
04-03-25 07:20 pm Bangalore Correspondent ಕರ್ನಾಟಕ
ಬೆಂಗಳೂರು, ಮಾ.4: ಕರಾವಳಿಯಲ್ಲಿ ಎಲ್ಲ ರೀತಿಯ ಪ್ರವಾಸೋದ್ಯಮಕ್ಕೂ ಅವಕಾಶ ಇದೆ. ಆದರೆ ಕರಾವಳಿ ಭಾಗದಲ್ಲಿ ಏಳು ಗಂಟೆ ವೇಳೆಗೆ ಎಂಟೈರ್ ಡೆಡ್ ಆಗುತ್ತೆ. ಇದ್ಯಾಕೆ ಆಗುತ್ತದೆ ಎಂದು ಎಲ್ಲ ಶಾಸಕರು ಸೇರಿ ಚರ್ಚೆ ಮಾಡಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಕರಾವಳಿಯಲ್ಲಿ ಕುಕ್ಕೆ, ಧರ್ಮಸ್ಥಳಕ್ಕೆ ಬರುವ ಜನರು ಫಾಲ್ಸ್ ಇನ್ನಿತರ ಪ್ರದೇಶಕ್ಕೂ ಹೋಗುವಂತೆ ವ್ಯವಸ್ಥೆ ಆಗಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಪ್ರಸ್ತಾಪಕ್ಕೆ, ಸಚಿವ ಸಿಸಿ ಪಾಟೀಲ್ ಪ್ರತಿಕ್ರಿಯೆಗೂ ಮುನ್ನ ಡಿಸಿಎಂ ಮಾತನಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದಕ್ಕೆ ಕಡಿಮೆ ಇದೆ. ಅತಿ ಹೆಚ್ಚು ಪ್ರತಿಭಾವಂತರು ಇದ್ದಾರೆ. ಆದರೆ ಅವರೆಲ್ಲ ಬೆಂಗಳೂರು, ಮುಂಬೈ ಅಥವಾ ದುಬೈಗೆ ಹೋಗುತ್ತಾರೆ. ಎರಡು ವರ್ಷಗಳಿಂದ ಇಂಜಿನಿಯರಿಂಗ್, ಮೆಡಿಕಲ್ ಕಾಲೇಜಿಗೂ ಪ್ರವೇಶ ಕಡಿಮೆಯಾಗಿದೆ. ಇದೆಲ್ಲ ಯಾಕೆ ಆಗುತ್ತಿದೆ ಎಂದು ಚಿಂತನೆ ಮಾಡಬೇಕು.
ಸಂಜೆಯಾದ ಕೂಡಲೇ ಸಿಟಿ ಡೆಡ್ ಆಗುವ ಪ್ರದೇಶಕ್ಕೆ ಐಟಿ- ಬಿಟಿಯವರು ಬರುತ್ತಾರೆಯೇ ಎಂದು ಕೇಳಿದ ಶಿವಕುಮಾರ್, ಅತಿ ಹೆಚ್ಚು ಇಂಜಿನಿಯರಿಂಗ್, ಮೆಡಿಕಲ್ ಕಾಲೇಜು ಇರೋದು ಅಲ್ಲೇ.. ಯುವಕರಿಗೆ ಸಂತೋಷವಾಗಿರಲು ವ್ಯವಸ್ಥೆ ಇಲ್ಲಾಂದ್ರೆ ಜನರು ಬರಲ್ಲ. ಐಟಿಯವರು ಬರಲ್ಲ, ಇದಕ್ಕಾಗಿ ನೀವೊಮ್ಮೆ ಕುಳಿತು ಚಿಂತಿಸಿ ಹೇಳಿ ಎಂದರು. ಇದಕ್ಕುತ್ತರಿಸಿದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ, ಮರವಂತೆ ಬೀಚ್ ನಲ್ಲಿ ಅದೇ ರೀತಿಯಾಗಿದೆ, ಒಂದು ಲೈಟಿಂಗ್ಸ್ ಹಾಕಿ ಎಂದರೆ ಅಧಿಕಾರಿಗಳು ಮುಂದೆ ಬರಲ್ಲ ಎಂದರು. ಅದಕ್ಕೆ ಸ್ಪೀಕರ್ ಆಕ್ಷೇಪಿಸಿದ್ದರಿಂದ ಗಂಟಿಹೊಳೆ ಕುಳಿತುಬಿಟ್ಟರು.
ಡಿಕೆಶಿ ಮಾತಿಗೆ ಉತ್ತರಿಸಿದ ಹರೀಶ್ ಪೂಂಜ, ಮಾನ್ಯ ಡಿಸಿಎಂ ಅವರೇ ನೀವು ಹೇಳಿದ ಮಾತಿಗೆ ಪೂರ್ಣ ಬೆಂಬಲ ಇದೆ. ಅತಿ ಹೆಚ್ಚು ಯುವ ಸಮುದಾಯ ನಮ್ಮಲ್ಲಿದೆ, ಅವರಿಗೆ ಉದ್ಯೋಗ ಇನ್ನಿತರ ವ್ಯವಸ್ಥೆ ಆಗಬೇಕು. ನೀವು ಏನು ಹೇಳುತ್ತೀರೋ ಅದಕ್ಕೆ ನಮ್ಮ ಬೆಂಬಲ ಇದೆ ಎಂದು ಹೇಳಿದರು. ಡಿಸಿಎಂ ಉತ್ತರಿಸಿ ಆ ಬಗ್ಗೆ ನಾವೊಮ್ಮೆ ಕುಳಿತು ಮೀಟಿಂಗ್ ಮಾಡೋಣ ಎಂದರು.
Managalore is a dead city after 7pm, need to discuss to improve night life says DK Shivakumar in cabinet assembly session.
22-07-26 06:00 pm
HK News Staffer
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
ನಾಲ್ಕು ತಿಂಗಳಲ್ಲೇ ಅಂತ್ಯಗೊಂಡ ನವಜೀವನ! ಅನಾರೋಗ್ಯದ...
13-07-26 10:21 pm
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
22-07-26 02:32 pm
HK News Staffer
ನೀಟ್ ಅಕ್ರಮ; ಮೋದಿ ರಾಜಿನಾಮೆ ಒತ್ತಾಯಿಸಿ ಪ್ರಧಾನಿ ನ...
21-07-26 09:03 pm
ಧರ್ಮೇಂದ್ರ ಪ್ರಧಾನ್ ರಾಜಿನಾಮೆ ಹೊರತು ಪ್ರತಿಭಟನೆ ನಿ...
21-07-26 06:23 pm
ಮತ್ತೆ ಕೋವಿಡ್ ಸದ್ದು; ಆಂಧ್ರದಲ್ಲಿ RF.5 ರೂಪಾಂತರ ಪ...
20-07-26 03:42 pm
ನೀಟ್ ಪರೀಕ್ಷೆ ಅಕ್ರಮ ; ರಾಜಧಾನಿ ದೆಹಲಿಯಲ್ಲಿ ಬೀದಿಗ...
20-07-26 02:22 pm
22-07-26 09:18 pm
HK News Desk
2,000 ರೂ. ಆಸೆಗೆ ಬಿದ್ದು ಬ್ಯಾಂಕ್ ಅಕೌಂಟ್ ಹಸ್ತಾಂತ...
21-07-26 11:02 pm
ಸಾಣೂರು-ಬಿಕರ್ನಕಟ್ಟೆ ಚತುಷ್ಪಥ ರಸ್ತೆ ಕಾಮಗಾರಿ; ಬನ್...
21-07-26 09:41 pm
ನೀಟ್ ಪರೀಕ್ಷೆ ಅಕ್ರಮ ; ಸೋನಂ ವಾಂಗ್ಚುಕ್ ಹೋರಾಟಕ್ಕೆ...
20-07-26 09:32 pm
ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿ ಬಿದ್ದ ಕಾರು; ಅಪಘ...
20-07-26 03:14 pm
22-07-26 10:24 pm
HK News Desk
ಎಸ್ಐಆರ್ ಪರಿಷ್ಕರಣೆ ನೆಪದಲ್ಲಿ ಎಪಿಕೆ ಫೈಲ್ ಕಳುಹಿಸಿ...
22-07-26 09:03 pm
ಬಂಟ್ವಾಳ ; ಮಳೆ-ಗಾಳಿಗೆ ಶಾಲಾ ಬಸ್ಸಿಗೆ ಉರುಳಿ ಬಿದ್ದ...
22-07-26 07:37 pm
Mysuru Murder, Suicide: ನಾನಿಲ್ಲದೆ ನನ್ನ ಹೆಂಡತಿ...
22-07-26 04:21 pm
ಮನೆ ರಿಪೇರಿ ಕೆಲಸಕ್ಕೆ ಬಂದಿದ್ದ ವ್ಯಕ್ತಿಯಿಂದ ಕಳ್ಳತ...
22-07-26 10:55 am