ಬ್ರೇಕಿಂಗ್ ನ್ಯೂಸ್
13-03-25 12:32 pm HK News Desk ಕರ್ನಾಟಕ
ಕಾರವಾರ, ಮಾ.13 : ಹೊನ್ನಾವರದಲ್ಲಿ ನಡೆದ ಗರ್ಭ ಧರಿಸಿದ್ದ ಗೋ ಹತ್ಯೆ ಪ್ರಕರಣವನ್ನು ಭೇದಿಸುವಲ್ಲಿ ಉತ್ತರ ಕನ್ನಡ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. ಕಳೆದ 46 ದಿನಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳಿಗಾಗಿ ಬಹುಮಾನ ಘೋಷಿಸಿದ್ದ ಪೊಲೀಸ್ ಇಲಾಖೆ, ತೀವ್ರ ಹುಡುಕಾಟದ ಬಳಿಕ ಮುಂಬೈ ಹಾಗೂ ಭಟ್ಕಳದಲ್ಲಿ ಇಬ್ಬರನ್ನು ಬಂಧಿಸಿದೆ.
ಕಳೆದ ಜನವರಿ 19ರಂದು ಹೊನ್ನಾವರ ತಾಲೂಕಿನ ಕೊಂಡಕುಳಿ ಗ್ರಾಮದಲ್ಲಿ ಗರ್ಭ ಧರಿಸಿದ್ದ ಹಸುವಿನ ಹತ್ಯೆ ನಡೆದಿದ್ದು ಪ್ರಕರಣ ಇಡೀ ರಾಜ್ಯದಲ್ಲಿ ಸದ್ದು ಮಾಡಿತ್ತು. ಆರೋಪಿಗಳನ್ನು ಬಂಧಿಸುವಂತೆ ಸಾಕಷ್ಟು ಹೋರಾಟಗಳು ನಡೆದಿದ್ದವು. ಪ್ರಕರಣದ ಹಿಂದೆ ಬಿದ್ದಿದ್ದ ಉತ್ತರ ಕನ್ನಡ ಜಿಲ್ಲಾ ಪೊಲೀಸರು ಆರೋಪಿಗಳನ್ನು ಕಡೆಗೂ ಸೆರೆ ಹಿಡಿದಿದ್ದಾರೆ.
ಸುಮಾರು 400ಕ್ಕೂ ಅಧಿಕ ಜನರನ್ನು ವಿಚಾರಣೆ ನಡೆಸಿ, ಹಸು ಕೊಂದವರನ್ನು ಗುರುತಿಸಿದ್ದ ಪೊಲೀಸರು ಆರೋಪಿಗಳನ್ನು ಹುಡುಕಿಕೊಟ್ಟವರಿಗೆ 50 ಸಾವಿರ ರೂ. ಬಹುಮಾನ ಕೊಡಲಾಗುವುದು ಎಂದಿದ್ದರು. ಪ್ರಮುಖ ಆರೋಪಿಯಾಗಿದ್ದ ವಾಸೀಂ ಎಂಬಾತನನ್ನು ಮುಂಬೈನಲ್ಲಿ ಹಾಗೂ ಇನ್ನೋರ್ವ ಆರೋಪಿ ಮುಜಾಮಿಲ್ ಎನ್ನುವಾತನನ್ನು ಭಟ್ಕಳದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾಲ್ಕು ತಂಡಗಳಿಂದ ಕಾರ್ಯಾಚರಣೆ
ಕೃತ್ಯಕ್ಕೆ ಸಹಕರಿಸಿದ್ದ ಇಬ್ಬರು ಆರೋಪಿಗಳನ್ನೂ ಈ ಹಿಂದೆಯೇ ಪೊಲೀಸರು ಬಂಧಿಸಿದ್ದರು. ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಫೈಜಾನ್ ಎನ್ನುವ ಆರೋಪಿ ಕಾಲಿಗೆ ಗುಂಡು ಹಾರಿಸಲಾಗಿತ್ತು. ಇದಾದ ನಂತರ ವಾಸೀಂ ಹಾಗೂ ಮುಜಾಮಿಲ್ ಇಬ್ಬರು ಧಾರವಾಡಕ್ಕೆ ತೆರಳಿ, ಅಲ್ಲಿಂದ ಮುಂಬೈ ಕಡೆ ಹೋಗಿ ತಪ್ಪಿಸಿಕೊಂಡಿದ್ದರು. ಎಸ್ಪಿ ಎಂ.ನಾರಾಯಣ ಪ್ರಕರಣ ಭೇದಿಸಲು, 4 ವಿಶೇಷ ತಂಡಗಳನ್ನು ರಚಿಸಿದ್ದರು. ಆರೋಪಿಗಳು ಮುಂಬೈಗೆ ತೆರಳಿರುವುದು ಗೊತ್ತಾಗಿ ಪೊಲೀಸರು ಮಹಾರಾಷ್ಟ್ರಕ್ಕೆ ತೆರಳಿದ್ದರು. ವಾಸಿಂ ಬಂಧನದ ಬಳಿಕ, ಮುಜಾಮಿಲ್ ವಾಪಸ್ ಭಟ್ಕಳದತ್ತ ಬಂದಿರುವ ಮಾಹಿತಿ ತಿಳಿದು, ಆತನನ್ನೂ ಬಂಧನ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಂಧಿತ ಆರೋಪಿಗಳು ಕೊಂಡುಕುಳಿ ಗ್ರಾಮದಲ್ಲಿ ಹಸು ಹಾಗೂ ಕರುವನ್ನು ಕೊಂದು ಮಾಂಸ ಮಾಡಿ ಭಟ್ಕಳದ ಮದುವೆ ಸಮಾರಂಭಕ್ಕೆ ನೀಡಿ, ಹಣ ಪಡೆದಿದ್ದರು. ಗೂಗಲ್ ಪೇ ಮೂಲಕ ಹಣ ಹಾಕಿಸಿಕೊಂಡ ದಾಖಲೆ ಪೊಲೀಸರಿಗೆ ಲಭ್ಯವಾಗಿದ್ದರಿಂದ ಪ್ರಕರಣ ಬೇಧಿಸುವಲ್ಲಿ ಸುಲಭವಾಯಿತು. ಪೊಲೀಸ್ ತಂಡಗಳು 46 ದಿನಗಳ ಕಾಲ 5 ರಾಜ್ಯಗಳಲ್ಲಿ ಒಟ್ಟು 11 ಸಾವಿರ ಕಿ.ಮೀ ಸುತ್ತಾಡಿ ಹುಡುಕಾಟ ನಡೆಸಿದ್ದರು. ಜೊತೆಗೆ, 130 ಸ್ಥಳಗಳಲ್ಲಿ ಸಿಸಿಟಿವಿ, 350ಕ್ಕೂ ಹೆಚ್ಚು ಜನರ ವಿಚಾರಣೆ ಹಾಗೂ 800 ಮೊಬೈಲ್ ನಂಬರ್ಗಳ ಪರಿಶೀಲನೆ ನಡೆಸಲಾಗಿದೆ. ಗುಪ್ತ ಮಾಹಿತಿದಾರರಿಗೆ ಇಲಾಖೆಯಿಂದ 50 ಸಾವಿರ ಹಾಗೂ ಮಾಹಿತಿ ನೀಡಿದ್ದ ಮತ್ತಿಬ್ಬರು ಖಾಸಗಿ ವ್ಯಕ್ತಿಗಳಿಗೆ ತಲಾ 50 ಸಾವಿರ ಬಹುಮಾನ ನೀಡಲಾಗಿದೆ' ಎಂದು ಎಸ್ಪಿ ಎಂ.ನಾರಾಯಣ ಮಾಹಿತಿ ನೀಡಿದ್ದಾರೆ.
After an operation spanning 45 days, covering 11,000 km in five States, the Uttara Kannada Police have finally arrested two more accused who were absconding after brutally killing a cow in Kondakuli village of Honnavar taluk. With their arrest, all the four involved in the brutal killing are behind bars now.
13-03-25 02:56 pm
HK News Desk
Karwar, Honnavar, Cow Slaughter, Crime; ಗರ್ಭ...
13-03-25 12:32 pm
Madikeri Earthquake: ಮಡಿಕೇರಿಯಲ್ಲಿ ಲಘು ಭೂಕಂಪನ...
13-03-25 11:57 am
Pramod Muthalik, Love Jihad: ವೇಶ್ಯಾವಾಟಿಕೆ, ಭಯ...
12-03-25 03:51 pm
Mangalore Chakravarti Sulibele, Prakash Raj:...
11-03-25 06:19 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
13-03-25 10:08 am
Mangalore Correspondent
Mangalore rain, Heat wave: ಮಂಗಳೂರು ನಗರಕ್ಕೆ ಸಿ...
12-03-25 11:10 pm
Diganth Missing case, Reunite with family: 17...
12-03-25 10:16 pm
Mangalore, SDPI, Diganth: ಸೌಹಾರ್ದ ಕೆಡಿಸಲು ಯತ್...
12-03-25 09:54 pm
ಗರುಡ ಗ್ಯಾಂಗ್ ಸದಸ್ಯ ಇಸಾಕ್ ಮೇಲೆ ಹಿರಿಯಡ್ಕದಲ್ಲಿ ಶ...
12-03-25 09:17 pm
11-03-25 07:34 pm
Bangalore Correspondent
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm
Bangalore Suicide, Bank Staff, Crime; ಹಿರಿಯ ಅ...
09-03-25 03:06 pm
Koppal Rape, Crime, Arrest: ಪೆಟ್ರೋಲ್ ದುಡ್ಡು ಕ...
08-03-25 10:44 pm