ಬ್ರೇಕಿಂಗ್ ನ್ಯೂಸ್
16-03-25 10:32 pm HK News Desk ಕರ್ನಾಟಕ
ದಾವಣಗೆರೆ, ಮಾ.16 : ಬಿಡದಿಯಲ್ಲಿ ಜೈ ಪಾಕಿಸ್ತಾನ ಎಂಬ ಬರಹ ಬರೆದಿರುವ ವಿಚಾರದಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ. ಇತ್ತೀಚೆಗೆ ಪಾಕಿಸ್ತಾನ ಜಿಂದಾಬಾದ್ ಅಂತ ಮುಸ್ಲಿಂ ಕಿಡಿಗೇಡಿಗಳು, ದೇಶದ್ರೋಹಿಗಳು ಬರೆದು ಕೆಣಕುತ್ತಿದ್ದಾರೆ. ಪಾಕಿಸ್ತಾನ ಬೇಕು ಅನ್ನುವಂತವರು ಪಾಕಿಸ್ತಾನಕ್ಕೆ ಹೋಗಿ ನೋಡಿ ಎಂದು ಹೇಳಿದ್ದಾರೆ.
ಬಿಕರ್ ಚೋಡು ಪಾಕಿಸ್ತಾನ ದಿವಾಳಿ ಆಗಿದೆ. ಸಾಲ ಸೋಲ ಇಲ್ಲ, ಕಳ್ಳತನ ದರೋಡೆ ಮಾಡಿ, ಬಾಂಬ್ ಹಾಕಿ ಹೊಟ್ಟೆ ತುಂಬಿಸಿಕೊಳ್ಳುವ ಪರಿಸ್ಥಿತಿ ಇದೆ. ಹಂದಿ ನಾಯಿಗಳ ತರ ಜೀವನ ಮಾಡ್ತಾ ಇದ್ದಾರೆ. ಈ ದೇಶದಲ್ಲಿ ಹುಟ್ಟಿ ಅನ್ನ ತಿಂದು ದೇಶದ್ರೋಹಿ ಕೆಲಸ ಮಾಡ್ತಾ ಇದ್ದೀರಿ. ಗೋಡೆ ಮೇಲೆ ಬರೆದವರನ್ನ ನಿಶ್ಚಿತವಾಗಿ ಕಂಡು ಹಿಡಿಯಬಹುದು. ಎಲ್ಲೆಡೆ ಸಿಸಿ ಕ್ಯಾಮರಗಳಿವೆ, ಬಿಡದಿ ಪೊಲೀಸರು ಈ ಕೂಡಲೆ ದ್ರೋಹಿಗಳನ್ನ ಒದ್ದು ಒಳಗಡೆ ಹಾಕಬೇಕು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರ ಇರೋದೇ ಮುಸ್ಲಿಮರ ರಕ್ಷಣೆಗಾಗಿ. ಮುಸ್ಲಿಮರಿಗೆ ಟೆಂಡರ್ ನಲ್ಲಿ ಮೀಸಲಾತಿ ಕೊಡುತ್ತಿದ್ದಾರೆ. ಬಜೆಟ್ ನಲ್ಲಿ ಎಸ್ ಸಿ, ಎಸ್ಟಿ ಅನುದಾನ ಕಸಿದುಕೊಂಡು ಇವರಿಗೆ ಕೊಟ್ಟಿದ್ದಾರೆ. ಎಸ್ಸಿ, ಎಸ್ಟಿಗಳು ಎಲ್ಲಿಗೆ ಹೋಗಬೇಕು, ಇದು ಸರಿಯಲ್ಲ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಮುಸ್ಲಿಮರು ಎದ್ದು ಕುಣಿತಾ ಇದಾರೆ. ಇವರನ್ನ ಹದ್ದು ಬಸ್ತ್ ನಲ್ಲಿ ನೀವು ಇಡ್ತಿರೋ, ಇಲ್ಲವೇ ನಾವು ಇಡಬೇಕೋ ಅನ್ನೋದು ನಿಶ್ಚಯ ಮಾಡಿ ಎಂದು ಮುತಾಲಿಕ್ ಸವಾಲ್ ಹಾಕಿದರು.
ಹಿಂದುಗಳನ್ನು ಕಾಫಿರ್ ಎಂದು ಕಲಿಸುತ್ತಾರೆ !
ಬಿಡದಿಯಲ್ಲಿ ದೇಶದ್ರೋಹಿಗಳು ಪಾಕಿಸ್ತಾನಕ್ಕೆ ಜೈ ಎಂದು ಬರೆದಿರುವುದಕ್ಕೆ ವಿಜಯಪುರದಲ್ಲಿ ಶಾಸಕ ಯತ್ನಾಳ ಪ್ರತಿಕ್ರಿಯಿಸಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಬಜೆಟ್, ಹಿಂದೂ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ನೋಡಿದರೆ ಮುಸ್ಲಿಮರಿಗೆ ರಾಜ್ಯ ಸರ್ಕಾರದ ಬಗ್ಗೆ ಭಯವೇ ಇಲ್ಲದಂತಾಗಿದೆ. ಇಷ್ಟು ಪಾಕಿಸ್ತಾನದ ಪರವಾಗಿ ಬರೆದರೂ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಕರ್ನಾಟಕ ಪಾಕಿಸ್ತಾನದ ಒಂದು ಭಾಗವಾದಂತಾಗಿದೆ.
ಸರ್ಕಾರಿ ಕಾಲೇಜುಗಳಿಗೆ ಬಿಲ್ಡಿಂಗ್ ಇಲ್ಲ, ಪ್ರಿನ್ಸಿಪಾಲ್ ಗಳಿಲ್ಲ. ಆದರೆ ಮದರಸಾಗಳಿಗೆ ಹಣ ಕೊಡುತ್ತಾರೆ. ಅಲ್ಲಿ ಏನು ಕಲಿಸುತ್ತಾರೆ, ದೇಶದ್ರೋಹಿ ವಿಚಾರಗಳಿರುತ್ತವೆ, ಅಲ್ಲಿ ಕಲಿತವರು ಪಾಕಿಸ್ತಾನದ ಪರವಾಗಿ ಮಾತನಾಡುತ್ತಾರೆ. ಇಸ್ಲಾಂ ಎಂದರೆ ಎಲ್ಲ ಧರ್ಮೀಯರಿಗೆ ನಾಶ ಮಾಡಬೇಕು, ಲವ್ ಜಿಹಾದ್ ಮಾಡಬೇಕು ಎನ್ನುತ್ತಾರೆ. ಅಂತವರಿಗೆ ಸಿದ್ದರಾಮಯ್ಯ ಸರ್ಕಾರ ಹಣ ಕೊಡುತ್ತದೆ.
ಅಲ್ಲಿಯೂ ರಾಷ್ಟ್ರಗೀತೆ ಹಾಡಬೇಕು, ಆದರೆ ಅಲ್ಲಿ ರಾಷ್ಟ್ರ ಗೀತೆ ಏನೂ ಕಲಿಸೋದಿಲ್ಲ. ಹಿಂದುಗಳೆಂದರೆ ಕಾಫಿರರು ಎಂದು ಅಲ್ಲಿ ಕಲಿಸುತ್ತಾರೆ. ಅವರಿಗೆ ಕಂಪ್ಯೂಟರ್ ಕೊಟ್ಟರೆ ದೇಶ ವಿರೋಧಿ ಚಟುವಟಿಕೆಗಳಿಗೆ ಬಳಸುತ್ತಾರೆ. ಇದೆಲ್ಲವನ್ನು ನೋಡಿದರೆ ಮುಸ್ಲಿಮರಿಗೆ ಧೈರ್ಯ ಬಂದಿದೆ. ಸಿದ್ದರಾಮಯ್ಯ ಇರುವವರೆಗೂ ನಮಗ್ಯಾರೂ ಏನೂ ಮಾಡಲಾಗಲ್ಲ ಎಂದು. ಹೀಗಾಗಿ ಈ ಪರಿಸ್ಥಿತಿ ಬಂದಿದೆ.
ಬಿಜೆಪಿಯವರು ಇದಕ್ಕೆ ಕಡಿವಾಣ ಹಾಕಲು ವಿಫಲವಾಗಿದ್ದಾರೆ. ಹಿಂದೆ ಡಿಜೆ ಹಳ್ಳಿಯಲ್ಲಿ ನಾಲ್ಕು ಎನ್ ಕೌಂಟರ್, ಹುಬ್ಬಳ್ಳಿ ಯಲ್ಲಿ ನಾಲ್ಕು ಎನ್ಕೌಂಟರ್ ಮಾಡಿದ್ದರೆ ಎಲ್ಲ ಸರಿಯಾಗುತ್ತಿತ್ತು. ಒಬ್ಬ ಮುಲ್ಲಾ ಬಂದು ಪೋಲಿಸ್ ಜೀಪ್ ಮೇಲೆ ಕುಂತು ಡ್ಯಾನ್ಸ್ ಹೊಡಿಯುತ್ತಾನೆ. ನಮ್ಮವರು ಮಾಡಿದ ತಪ್ಲಿನಿಂದಲೇ ನಮ್ಮ ಹಿಂದೂ ಜನ ನಾರಾಜ್ ಆದರು, ನಮ್ಮವರು ಮನೆಯಲ್ಲಿ ಕುಂತರು. ನಮ್ಮ ಹಿಂದುಗಳಿಂದಲೇ ನಾವು ಸೋತೆವು ಎಂದರು.
Davangere, Pramod Muthalik, Controversy Erupts Over Funding of Radical Madrasas Amid Ongoing Security Concerns
12-06-26 12:02 pm
HK News Staffer
ಪದತ್ಯಾಗದ ತರಾತುರಿಯಲ್ಲೇ ಸಿದ್ದರಾಮಯ್ಯ ಕುರುಬ ಸಮುದಾ...
11-06-26 08:31 pm
ಹಳಸಿತೇ ಜಮೀರ್ - ಸಿದ್ದು ಸ್ನೇಹ ಸಂಬಂಧ? ನಿಮ್ಮ ಆಪ್ತ...
11-06-26 07:36 pm
ಮಗು ಕರುಣಿಸಿದ ಪ್ರಕರಣ; ಕೊನೆಗೂ ರಾಜಿ ಸಂಧಾನಕ್ಕಿಳಿದ...
11-06-26 01:53 pm
ಬಿಟ್ಕಾಯಿನ್ ಹಗರಣ ; ಹ್ಯಾರಿಸ್ ನಲಪಾಡ್ ಹೆಸ್ರು ಚಾರ...
10-06-26 10:40 pm
15-06-26 11:18 am
HK News Staffer
ಬಿರಿಯಾನಿ ಹೆಸರಲ್ಲಿ ಮಹಿಳೆಯ ಮಾನ ಕಳೆದ ಟೆಕ್ಕಿ! ತಮಾ...
14-06-26 09:46 pm
ಸಹಕಾರಿ ಬ್ಯಾಂಕುಗಳಲ್ಲಿ ಸರ್ವಾಧಿಕಾರಕ್ಕೆ ಬ್ರೇಕ್ !...
14-06-26 07:17 pm
ಅಸ್ಸಾಂನಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಆಧಾರ್ ಕಾರ್ಡ...
14-06-26 04:49 pm
ಕೇರಳದಲ್ಲಿ ಜೂನ್ 15ರಿಂದ 'ಪ್ರಿಯದರ್ಶಿನಿ' ಉಚಿತ ಬಸ್...
14-06-26 01:08 pm
15-06-26 04:52 pm
HK News Staffer
ಅಂಬಾನಿ ಕುಟುಂಬದ ಗುರೂಜಿ ಜೊತೆ ಕೊಲ್ಲೂರು ಮೂಕಾಂಬಿಕೆ...
14-06-26 09:47 pm
ದ.ಕ. ಜಿಲ್ಲೆಯ 14 ಪ್ರಮುಖ ರಸ್ತೆ ಅಭಿವೃದ್ದಿ ಕಾಮಗಾರ...
14-06-26 02:37 pm
ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್:...
13-06-26 05:28 pm
ಮಧ್ಯರಾತ್ರಿ ಎದೆನೋವಿನಿಂದ ಮನೆಯಲ್ಲೇ ಕುಸಿದು ಬಿದ್ದ...
12-06-26 10:48 pm
15-06-26 09:21 pm
HK News Staffer
ನಿಯಂತ್ರಣ ತಪ್ಪಿ ನಿಲ್ದಾಣದ ಪ್ಲಾಟ್ ಫಾರಂಗೆ ನುಗ್ಗಿ...
15-06-26 08:37 pm
ಕಾರವಾರದ ಕಡ್ಲೆ ಬೀಚ್ನಲ್ಲಿ ರೀಲ್ಸ್ ಮಾಡುಲು ಹೋಗಿ ಅ...
15-06-26 04:54 pm
ಸೋಲಾಪುರದಲ್ಲಿ ಭೀಕರ ದುರಂತ! ನಿಯಂತ್ರಣ ತಪ್ಪಿ ನಾಲೆಗ...
15-06-26 11:50 am
ಧರ್ಮಸ್ಥಳಕ್ಕೆ ತೆರಳಿದ್ದ ಬೆಂಗಳೂರಿನ ಮೂವರು ಯುವಕರು...
15-06-26 11:27 am