ಬ್ರೇಕಿಂಗ್ ನ್ಯೂಸ್
23-03-25 06:02 pm Bangalore Correspondent ಕರ್ನಾಟಕ
ಬೆಂಗಳೂರು, ಮಾ.23: ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರ ಮೇಲೆ ಹನಿಟ್ರ್ಯಾಪ್ ಮಾಡಲಾಗಿದೆ ಎಂಬ ವಿಚಾರ ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಪ್ರಕರಣ ಇದೀಗ ಕಾಂಗ್ರೆಸ್ ಹೈಕಮಾಂಡ್ ತಲುಪಿದೆ. ಹೀಗಾಗಿ ಇದೇ ವಿಚಾರ ಮುಂದಿಟ್ಟು ಕೆಲವರನ್ನು ತುಳಿಯುವ ಪ್ರಯತ್ನ ನಡೆದಿದ್ಯಾ ಎನ್ನುವ ವಿಚಾರ ಚರ್ಚೆಗೀಡಾಗಿದೆ.
ನಿನ್ನೆಯಷ್ಟೇ ರಾಜಣ್ಣ ಅವರ ಪುತ್ರ ಹಾಗೂ ಎಂಎಲ್ಸಿ ರಾಜೇಂದ್ರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ತಮ್ಮ ತಂದೆ ಮೇಲೆ ನಡೆದಿರುವ ಹನಿಟ್ರ್ಯಾಪ್ ಯತ್ನ ವಿಚಾರವನ್ನು ಪ್ರಸ್ತಾಪಿಸಿ, ಸಾಕ್ಷ್ಯವಾಗಿ ಕೆಲ ಡಿಜಿಟಲ್ ದಾಖಲೆಗಳನ್ನೂ ನೀಡಿದ್ದಾರೆ. ಅಲ್ಲದೆ, ಹನಿಟ್ರ್ಯಾಪ್ ಪ್ರಕರಣದ ಹಿಂದೆ ಪ್ರಭಾವಿ ಸಚಿವರೊಬ್ಬರ ಕೈವಾಡವಿದೆ ಎಂದೂ ಆರೋಪಿಸಿದ್ದಾರೆ ಎನ್ನಲಾಗುತ್ತಿದೆ.
ಈ ನಡುವೆ ಸಾರ್ವಜನಿಕ ಸಭೆಯಲ್ಲಿ ರಾಜೇಂದ್ರ ಈ ವಿಚಾರ ಪ್ರಸ್ತಾಪಿಸಿ ಅವರಿಗೆ ಹೆಂಡತಿ, ಮಕ್ಕಳಿಲ್ಲವೇ? ನಮಗೇಕೆ ಹನಿಟ್ರ್ಯಾಪ್ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಗೃಹ ಸಚಿವರಿಗೆ ದೂರು ನೀಡುತ್ತೇವೆ, ಮುಖ್ಯಮಂತ್ರಿ ಏನು ಹೇಳುತ್ತಾರೋ ಅದನ್ನು ಪಾಲಿಸುತ್ತೇವೆ ಎಂದು ತಿಳಿಸಿದರು.
ಪ್ರಕರಣ ಸಂಬಂಧ ರಾಜಣ್ಣ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸದ್ಯದಲ್ಲೇ ನವದೆಹಲಿಗೆ ತೆರಳಲಿದ್ದು, ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಲಿದ್ದಾರೆಂದು ತಿಳಿದುಬಂದಿದೆ. ರಾಜಕೀಯವಾಗಿ ತಮ್ಮನ್ನು ತುಳಿಯಲು ಪಕ್ಷದ ನಾಯಕರು ಹನಿಟ್ರ್ಯಾಪ್ ಮಾಡಲು ಪಿತೂರಿ ನಡೆಸಿದ್ದಾರೆಂದು ದೂರು ಹೇಳಲಿದ್ದಾರೆಂದು ತಿಳಿದುಬಂದಿದೆ. ಹನಿಟ್ರ್ಯಾಪ್ ವಿಚಾರ ಭಾರೀ ಬಿರುಗಾಳಿ ಎಬ್ಬಿಸಿರುವುದರಿಂದ ಹೈಕಮಾಂಡ್ ನಾಯಕರು ತಮ್ಮದೇ ಮೂಲಗಳಿಂದ ಮಾಹಿತಿ ಸಂಗ್ರಹಿಸಿದ್ದು ಪ್ರಕರಣ ನಿಭಾಯಿಸಲು ತಲೆ ಕೆಡಿಸಿಕೊಂಡಿದ್ದಾರೆ.
Honey trap, consideration to lodge complaints against party members to high command leaders. The Congress high command is said to be disappointed with the manner in which the Siddaramaiah-led government in Karnataka handled the political storm that erupted in the Legislative Assembly, following Cooperation Minister K.N. Rajanna’s allegation that vested interests had honey-trapped 48 people, including legislators, central leaders, and judges.
06-06-25 12:58 am
Bengaluru Staff
Bangalore Police commissioner Dayanand, RCB,...
05-06-25 11:04 pm
Rcb, Death, Bangalore, Araga Jnandnder: ಕಾಲ್ತ...
05-06-25 09:27 pm
DK Shivakumar, Crying, RCB, Bangalore; ಬೆಂಗಳೂ...
05-06-25 04:31 pm
Anjum Parwez, CM Siddaramaiah: ಸಿಎಂ ಸಿದ್ದರಾಮಯ...
05-06-25 11:06 am
05-06-25 07:54 pm
HK News Desk
30 ಅಡಿ ಉದ್ದದ ಅತಿ ವಿರಳ ದೇವರ ಮೀನು ತಮಿಳುನಾಡಿನಲ್ಲ...
04-06-25 05:05 pm
MP Brijesh Chowta, Delegation: ಐದು ದೇಶಗಳಲ್ಲಿ...
03-06-25 10:10 pm
ಎರಡನೇ ಮಹಡಿಯಿಂದ ಕೆಳಕ್ಕೆ ಬಿದ್ದ ಕಟ್ಟಡ ಕಾರ್ಮಿಕನನ್...
01-06-25 12:35 pm
ಮಲಪ್ಪುರಂನಲ್ಲಿ ಕುಸಿದು ಹೋದ ರಾಷ್ಟ್ರೀಯ ಹೆದ್ದಾರಿ,...
26-05-25 11:34 pm
05-06-25 10:29 pm
Mangalore Correspondent
Mangalore Congress: ಶಾಂತಿ ಮರುಸ್ಥಾಪನೆ ಬಗ್ಗೆ ಅಧ...
05-06-25 07:05 pm
Ramesh Rai, BJP, Puttur, Mangalore: ಪುತ್ತೂರು...
05-06-25 06:00 pm
BK Hariprasad, Mangalore, Congress; ಮಂಗಳೂರಿಗೆ...
05-06-25 03:56 pm
B K Hariprasad, Mangalore, RCB; ಐಪಿಎಲ್ ನಡೆಸೋರ...
05-06-25 03:05 pm
03-06-25 10:25 pm
Mangalore Correspondent
Mangalore Suhas Shetty Murder Case, arrest; ಸ...
03-06-25 08:01 pm
Bank robbery, Vijayapura, 58 crore: ವಿಜಯಪುರದಲ...
03-06-25 01:33 pm
Mangalore Police, CCB, Cattle trafficking, Ta...
02-06-25 04:01 pm
Ullal, Mangalore, Crime: ಕೋಮು ದ್ವೇಷದ ನೆಲದಲ್ಲ...
01-06-25 11:02 pm