ಬ್ರೇಕಿಂಗ್ ನ್ಯೂಸ್
25-03-25 08:37 pm Bangalore Correspondent ಕರ್ನಾಟಕ
ಬೆಂಗಳೂರು, ಮಾ.25 : ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದು ಮಾಡಿರುವ ಹನಿಟ್ರ್ಯಾಪ್ ವಿಚಾರದಲ್ಲಿ ಸಚಿವ ರಾಜಣ್ಣ ಅವರು ಗೃಹ ಸಚಿವರನ್ನು ಭೇಟಿಯಾಗಿ ಉನ್ನತ ಮಟ್ಟದ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ. ಬೆಂಗಳೂರಿನ ಸದಾಶಿವನಗರದ ಮನೆಯಲ್ಲಿ ಡಾ.ಜಿ. ಪರಮೇಶ್ವರ್ ಅವರನ್ನು ಭೇಟಿಯಾದ ರಾಜಣ್ಣ ಅವರು ತನಿಖೆ ನಡೆಸಲು ಕೋರಿದ್ದಾರೆ.
ಈ ವೇಳೆ ಮಾತನಾಡಿದ ಸಚಿವ ಪರಮೇಶ್ವರ್, ದೂರನ್ನು ಪೊಲೀಸ್ ಠಾಣೆಯಲ್ಲೇ ನೀಡಬೇಕಾಗುತ್ತದೆ. ನಾನು ದೂರು ಸ್ವೀಕರಿಸಲು ಬರುವುದಿಲ್ಲ. ತನಿಖೆ ಮಾಡಬೇಕೆಂಬ ರಾಜಣ್ಣ ಅವರ ಮನವಿಯನ್ನು ಪಡೆದಿದ್ದೇನೆ. ಈ ಬಗ್ಗೆ ಮುಖ್ಯಮಂತ್ರಿ ಜೊತೆಗೆ ಚರ್ಚಿಸಿ ಯಾವ ರೀತಿಯ ತನಿಖೆ ಆಗಬೇಕೆಂದು ನಿರ್ಧರಿಸುತ್ತೇನೆ ಎಂದು ಹೇಳಿದರು.
ಇದಕ್ಕೂ ಮುನ್ನ ತನ್ನ ಕಚೇರಿಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ರಾಜಣ್ಣ ಅವರು, 2-3 ದಿನಗಳಲ್ಲಿ ಗೃಹ ಸಚಿವರನ್ನು ಭೇಟಿಯಾಗಲು ಆಗಿರಲಿಲ್ಲ. ಇವತ್ತು ಅವರು ಎಲ್ಲಿದ್ದಾರೋ ಅಲ್ಲಿಗೆ ಹೋಗಿ ದೂರು ಕೊಡುತ್ತೇನೆ. ಈಗಾಗಲೇ ಮೂರು ಪುಟಗಳ ದೂರನ್ನು ಬರೆದಿಟ್ಟಿದ್ದೇನೆ. ದೂರಿನಲ್ಲಿ ಏನಿದೆ ಎನ್ನುವ ಬಗ್ಗೆ ಹೇಳಲು ಆಗುವುದಿಲ್ಲ ಎಂದರು. ಹೈಕೋರ್ಟ್ ವಕೀಲರು ಎಂದು ಹೇಳಿ ಯುವತಿಯೊಬ್ಬಳು ಬಂದಿದ್ದಳು, ಏನೋ ಗುಟ್ಟಿನಲ್ಲಿ ಮಾತನಾಡಲಿಕ್ಕಿದೆ ಎಂದು ಹೇಳಿದ್ದಳು. ಇನ್ನೊಬ್ಬ ಯುವಕ ಬಂದಿದ್ದ. ಆತ ಎರಡು ಬಾರಿ ಬಂದಿದ್ದ. ಒಟ್ಟು ವಿಚಾರದ ಬಗ್ಗೆ ದೂರಿನಲ್ಲಿ ಬರೆದಿದ್ದೇನೆ ಎಂದು ಹೇಳಿದರು.
ನೀವು ಅಧಿವೇಶನದಲ್ಲಿ ಪ್ರಸ್ತಾಪ ಮಾಡಬಾರದಿತ್ತು, ಸರಕಾರದ ಗಮನಕ್ಕೆ ತರಬೇಕಿತ್ತು ಎಂದು ಚರ್ಚೆಯಾಗುತ್ತಿದೆ ಎಂಬ ಪ್ರಶ್ನೆಗೆ, ನಾನು ಸದನದಲ್ಲಿ ಪ್ರಸ್ತಾಪ ಮಾಡಬೇಕೆಂದು ಇರಲಿಲ್ಲ. ವಿಪಕ್ಷದ ಯತ್ನಾಳ್, ಸುನಿಲ್ ನನ್ನ ಹೆಸರು ಪ್ರಸ್ತಾಪ ಮಾಡಿದ ಬಳಿಕ ಅದಕ್ಕೆ ಉತ್ತರ ಕೊಟ್ಟಿದ್ದೇನೆ. ನಾನು ಅಲ್ಲಿದ್ದುಕೊಂಡು ಮಾತನಾಡದೇ ಇದ್ದರೆ ಮೌನಂ ಸಮ್ಮತಿ ಲಕ್ಷಣಂ ಅಂದಾಗುತ್ತದೆ. ಅದಕ್ಕಾಗಿ ತನಿಖೆ ಆಗಬೇಕು ಎಂದು ಹೇಳಿದ್ದೆ. ಅದು ಬಿಟ್ಟು ಇದರಲ್ಲಿ ನ್ಯಾಯಾಧೀಶರು ಇದ್ದಾರೆ, ಅವರಿದ್ದಾರೆ, ಇವರಿದ್ದಾರೆ ಅಂತ ಏನೂ ಹೇಳಿಲ್ಲ. ಯಾರೋ ಒಬ್ಬ ಸಿಬಿಐ ತನಿಖೆ ಆಗಬೇಕೆಂದು ಪಿಐಎಲ್ ಹಾಕಿದ್ದಾನಂತೆ. ಅದಕ್ಕೂ ನನಗೂ ಸಂಬಂಧ ಇಲ್ಲ. ನಾನೇನೂ ಹಾಗೆ ಹೇಳಿಲ್ಲ ಎಂದರು. ಹುಡುಗಿ ಯಾರೆಂದು ನೋಡಿದರೆ ಗುರುತು ಹಿಡಿಯಬಲ್ಲೆ. ನನಗೇನೂ ಪರಿಚಯ ಇಲ್ಲ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಆದರೆ ಸಚಿವ ರಾಜಣ್ಣ ಅವರಾಗಲೀ, ಅವರ ಕುಟುಂಬಸ್ಥರಾಗಲೀ ಇನ್ನೂ ಅಧಿಕೃತವಾಗಿ ಪೊಲೀಸ್ ಇಲಾಖೆಯನ್ನು ಭೇಟಿಯಾಗಿ ಘಟನೆ ಬಗ್ಗೆ ತನಿಖೆ ಆಗಬೇಕೆಂದು ದೂರು ಕೊಟ್ಟಿಲ್ಲ. ಹೀಗಾಗಿ ಇದರ ಬಗ್ಗೆ ಎಫ್ಐಆರ್ ದಾಖಲು ಮಾಡಿಲ್ಲ. ಗೃಹ ಸಚಿವರು ಪಡೆದ ದೂರನ್ನೇ ಆಧರಿಸಿ ಪೊಲೀಸರು ರಾಜಣ್ಣ ಅವರನ್ನು ಭೇಟಿಯಾಗಿ ಹೇಳಿಕೆ ಪಡೆದು ದೂರು ದಾಖಲಿಸಿಕೊಳ್ಳಲು ಅವಕಾಶ ಇದೆ.
Minister Rajanna Confronts Home Minister Over Honeytrap Allegations Involving Impersonating Lawyer. Amid growing discussions in state and national politics regarding attempts to trap ministers and MLAs in honey traps, cooperation minister K N Rajanna on Tuesday disclosed that he was targeted twice.
04-06-25 10:48 pm
Bangalore Correspondent
RCB celebration, Bangalore, Stampede, update:...
04-06-25 09:07 pm
R Ashok, RCB, Bangalore, Death: ಕಿಲ್ಲರ್ RCB ;...
04-06-25 08:06 pm
RCB Victory Celebration, Death, Stampede, Ban...
04-06-25 06:21 pm
ಕ್ಷಮೆ ಕೇಳಲ್ಲ, ಮಾತುಕತೆಗೆ ಸಿದ್ಧ ; ಹೈಕೋರ್ಟಿನಲ್ಲಿ...
03-06-25 10:50 pm
04-06-25 05:05 pm
HK News Desk
MP Brijesh Chowta, Delegation: ಐದು ದೇಶಗಳಲ್ಲಿ...
03-06-25 10:10 pm
ಎರಡನೇ ಮಹಡಿಯಿಂದ ಕೆಳಕ್ಕೆ ಬಿದ್ದ ಕಟ್ಟಡ ಕಾರ್ಮಿಕನನ್...
01-06-25 12:35 pm
ಮಲಪ್ಪುರಂನಲ್ಲಿ ಕುಸಿದು ಹೋದ ರಾಷ್ಟ್ರೀಯ ಹೆದ್ದಾರಿ,...
26-05-25 11:34 pm
ಭಯೋತ್ಪಾದನೆ ವಿರುದ್ಧ ಭಾರತದ ರಾಜತಾಂತ್ರಿಕ ಬಲವರ್ಧನೆ...
26-05-25 10:13 pm
04-06-25 10:43 pm
Mangalore Correspondent
Mangalore Police, Social Media, Arrest: ಜಾಲತಾ...
04-06-25 09:34 pm
RCB, Mangalore celebration, IPL Cricket 2025:...
04-06-25 02:26 pm
Bomb Threat, Mangalore, Kanachur Hospital: ದೇ...
04-06-25 01:38 pm
ಮಂಗಳೂರಿನಲ್ಲಿ ಟಿಂಟ್ ಗ್ಲಾಸ್ ಕಾರುಗಳ ವಿರುದ್ಧ ವಿಶೇ...
03-06-25 08:13 pm
03-06-25 10:25 pm
Mangalore Correspondent
Mangalore Suhas Shetty Murder Case, arrest; ಸ...
03-06-25 08:01 pm
Bank robbery, Vijayapura, 58 crore: ವಿಜಯಪುರದಲ...
03-06-25 01:33 pm
Mangalore Police, CCB, Cattle trafficking, Ta...
02-06-25 04:01 pm
Ullal, Mangalore, Crime: ಕೋಮು ದ್ವೇಷದ ನೆಲದಲ್ಲ...
01-06-25 11:02 pm