ಹಿಮಾಲಯ - ದೆಹಲಿಗೆ ಸುನಾಮಿ, ಮಹಾನ್ ನಾಯಕರ ದುರ್ಮರಣ ; ಕೋಡಿ ಶ್ರೀ ಭವಿಷ್ಯ 

04-05-25 09:15 pm       HK News Desk   ಕರ್ನಾಟಕ

ಅರಸನ ಅರಮನೆಗೆ ಕಾರ್ಮೋಡ ಕವಿದಿತ್ತು. ಈ ವರ್ಷ ವಾಯು ಸುನಾಮಿ, ಜಲ ಸುನಾಮಿ, ಭೂ ಸುನಾಮಿ, ಅಗ್ನಿ ಸುನಾಮಿ ಉಂಟಾಗುತ್ತದೆ. ಹಿಮಾಲಯ ಗೌರಿಶಂಕರ ಶಿಖರ ಶಿವ ಶಿವ ಎಂದೀತು. ಸುನಾಮಿ ಆದೀತು, ಹಿಮಾಲಯದಿಂದ ಡೆಲ್ಲಿಗೂ ಅಪಾಯ ಬಂದೀತು ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ‌ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. 

ಬಾಗಲಕೋಟೆ, ಮೇ 4 : ಅರಸನ ಅರಮನೆಗೆ ಕಾರ್ಮೋಡ ಕವಿದಿತ್ತು. ಈ ವರ್ಷ ವಾಯು ಸುನಾಮಿ, ಜಲ ಸುನಾಮಿ, ಭೂ ಸುನಾಮಿ, ಅಗ್ನಿ ಸುನಾಮಿ ಉಂಟಾಗುತ್ತದೆ. ಹಿಮಾಲಯ ಗೌರಿಶಂಕರ ಶಿಖರ ಶಿವ ಶಿವ ಎಂದೀತು. ಸುನಾಮಿ ಆದೀತು, ಹಿಮಾಲಯದಿಂದ ಡೆಲ್ಲಿಗೂ ಅಪಾಯ ಬಂದೀತು ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ‌ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. 

ಉತ್ತರ ರಾಷ್ಟ್ರಗಳಿಗೆ ಅಪಾಯವಿದೆ, ಜಲಬಾಧೆ ಇದೆ. ದೊಡ್ಡ ದೊಡ್ಡ ನಾಯಕರಿಗೆ ಅಪಾಯವಿದೆ. ಜಗತ್ತಿನ ಎರಡ್ಮೂರು ಮಹಾನ್ ನಾಯಕರಿಗೆ ಅಪಮೃತ್ಯುವಿದೆ ಎಂದೂ ಸ್ವಾಮೀಜಿ ಹೇಳಿದ್ದಾರೆ.‌

ಸದ್ಯದಲ್ಲಿ ರಾಜ್ಯ ರಾಜಕಾರಣದಲ್ಲಿ ಯಾವುದೇ ಬದಲಾವಣೆ ಇಲ್ಲ. ಸಕ್ರಾಂತಿ ವರೆಗೂ ರಾಜ್ಯ ರಾಜಕೀಯದಲ್ಲಿ ಏನೂ ಬದಲಾವಣೆ ಆಗಲ್ಲ ಎಂದು ಹೇಳಿದ ಸ್ವಾಮೀಜಿ, ಪಹಲ್ಗಾಮ್ ದಾಳಿ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ, ಯುಗಾದಿ ಮುಂಚಿತವಾಗಿ ನಾನು ಹೇಳಿದ್ದೆ, ಉತ್ತರ ನಾಡಿನಲ್ಲಿ ಹಬ್ಬಿತು ಹಗೆಯ ಬೇಗೆ. ಸುತ್ತುವರೆದು ಬರುವಾಗ ಜಗವೆಲ್ಲಾ ಕೂಲಾದೀತು. ನಾನು ಹೇಳಿದ ಒಂದು ವಾರದಲ್ಲಿ ಕಾಶ್ಮೀರದಲ್ಲಿ ಹಗೆ ಆಯ್ತು, ಮೃತ್ಯು ಆಯ್ತು. ಅದು ಆಲ್ ಇಂಡಿಯಾ ಕವರ್ ಆಗುತ್ತಲ್ಲದೇ, ಜಗತ್ತಿಗೆಲ್ಲಾ ಹೋಗುತ್ತೆ. 

ಈ ವರ್ಷ ಬಹುದೊಡ್ಡ ಅಪಾಯವಿದೆ, ಮತಾಂಧತೆ ಹೆಚ್ಚಾಗುತ್ತೆ. ಅದರಿಂದ ಒಂದು ದೊಡ್ಡ ಕಾಯಿಲೆ ಬರುತ್ತೆ, ಅದು ಐದು ವರ್ಷ ಇರುತ್ತೆ.‌ ಶಾಂತಿ, ನೆಮ್ಮದಿ ಇರಲ್ಲ ಎಂದು ಕೋಡಿಶ್ರೀ ಭವಿಷ್ಯ ನುಡಿದರು. ನೈಸರ್ಗಿಕ ವಿಪತ್ತು, ರಾಜಕೀಯ ವಿಚಾರದಲ್ಲಿ ಕೋಡಿಶ್ರೀ ಭವಿಷ್ಯ ಹೆಚ್ಚು ಚರ್ಚೆಗೆ ಕಾರಣವಾಗುತ್ತದೆ.

There is a fear of war in the country. A tsunami will occur in the Himalayas and reach Delhi from there. A dark cloud will cover the king's house, predicted Shivananda Shivayogi Rajendra Swamiji